ಭಾರತವನ್ನು ಹಿಂದು, ಹಿಂದುತ್ವ ನೆಲೆಗಟ್ಟಿನಲ್ಲಿ ಆಳಲಾಗದು: ಓವೈಸಿ
Team Udayavani, Dec 13, 2017, 4:19 PM IST
ಹೈದರಾಬಾದ್ : ಹಿಂದು, ಹಿಂದುತ್ವ ಮತ್ತು ಹಿಂದುಸ್ಥಾನದ ನೆಲೆಗಟ್ಟಿನಲ್ಲಿ ಭಾರತವನ್ನು ಆಳಲು ಸಾಧ್ಯವಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಉತ್ತರ ಪ್ರದೇಶದ ಆಲಿಗಢ ಮುಸ್ಲಿಂ ಕಾರ್ಪೊರೇಶನ್ ನಲ್ಲಿ ಬಿಎಸ್ಪಿ ಕಾರ್ಪೊರೇಟರ್ ಒಬ್ಬರು ಉರ್ದು ವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕಾರಣಕ್ಕೆ ಬಿಜೆಪಿ ಮತ್ತು ಬಿಎಸ್ಪಿ ಸದಸ್ಯರೊಳಗೆ ಜಟಾಪಟಿ ಏರ್ಪಟ್ಟ ವರದಿಯನ್ನು ಉಲ್ಲೇಖೀಸಿ ಮಾತನಾಡುತ್ತಿದ್ದ ಓವೈಸಿ, “ನಾನು ಈ ಹಿಂದೆ ಸಂಸದನಾಗಿ ಮೂರು ಬಾರಿ ಉರ್ದು ವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ; 2019ರಲ್ಲಿ ಪುನಃ ಹಾಗೆಯೇ ಮಾಡುತ್ತೇನೆ; ಅದು ಅಸಾಂವಿಧಾನಿಕ ಅಲ್ಲ’ ಎಂದು ಹೇಳಿದರು.
ಹೈದರಾಬಾದ್ ಲೋಕಸಭಾ ಸದಸ್ಯರಾಗಿರುವ ಓವೈಸಿ ಅವರು “ಭಾರತವನ್ನು ಹಿಂದು, ಹಿಂದಿ ಮತ್ತು ಹಿಂದುತ್ವದ ನೆಲೆಗಟ್ಟಿನಲ್ಲಿ ಆಳಲಾಗದು’ ಎಂದು ಪುನರುಚ್ಚರಿಸಿದರು.