ಐದಿಂಚಿನ ಜಾಗದಲ್ಲಿ ಭಾರತ-ಚೀನ ಯುದ್ಧ!
Team Udayavani, Aug 24, 2017, 8:00 AM IST
ಹೊಸದಿಲ್ಲಿ: ಡೋಕ್ಲಾಂ ವಿಚಾರದಲ್ಲಿ ಭಾರತ- ಚೀನ ಸೇನೆ ಎದುರು ಬದುರಾಗಿ ನಿಂತ ಬೆನ್ನಲ್ಲೇ ಎರಡೂ ದೇಶಗಳ ಮಧ್ಯೆ “ಯುದ್ಧ’ ಜೋರಾಗಿ ಆರಂಭವಾಗಿದೆ. ಅದೂ ಐದಿಂಚಿನ ಜಾಗದಲ್ಲಿ! ಹೌದು, ಇದು ಸೇನೆಗಳ ಮಧ್ಯೆ ನಡೆಯುತ್ತಿರುವ ಯುದ್ಧ ಅಲ್ಲ. ಬದಲಿಗೆ, ಮೊಬೈಲ್ ಫೋನ್ಗಳಲ್ಲಿ.
ಸ್ಮಾರ್ಟ್ಫೋನ್ಗಳು ಇದೀಗ ಎರಡೂ ದೇಶದ ಯುದ್ಧದ ಜಾಗವಾಗಿ ಪರಿವರ್ತಿತವಾಗಿದೆ. ಬಹುತೇಕ ಭಾರತೀಯರು ಚೀನ ಕಂಪೆನಿಗಳ ಸ್ಮಾರ್ಟ್ಫೋನ್ಗಳನ್ನೇ ಬಳಸುತ್ತಿದ್ದು, ಇದರಲ್ಲಿ ಹರಿದಾಡುವ ಮಾಹಿತಿಗಳನ್ನು ಚೀನಕ್ಕೆ ಕಳಿಸಲಾಗುತ್ತದೆ ಎಂದು ಟೊರೆಂಟೋ ವಿಶ್ವವಿದ್ಯಾ
ಲಯದ ಸಂಶೋಧನಾ ವರದಿಯೊಂದು ಹೇಳಿದೆ. ಇದು ವ್ಯೂಹಾತ್ಮಕ ದೃಷ್ಟಿಯಿಂದಲೂ ಚೀನಕ್ಕೆ ಲಾಭವಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದ್ದು, ಸ್ಮಾರ್ಟ್ಫೋನ್ಗಳಲ್ಲಿ ಹೆಚ್ಚಿನ ಭದ್ರತಾ ಅಂಶಗಳನ್ನು ಹೊಂದುವಂತೆ ಮತ್ತು ಈ ಫೀಚರ್ಗಳ ಬಗ್ಗೆ ಖಾತರಿ ಪಡಿಸುವಂತೆ ಕಂಪೆನಿಗಳಿಗೆ ನೋಟಿಸ್ ನೀಡಿದೆ.
ಒಟ್ಟು 21 ಸ್ಮಾರ್ಟ್ಫೋನ್ ಕಂಪೆನಿಗಳಿಗೆ ಈ ನಿರ್ದೇಶನ ನೀಡಲಾಗಿದ್ದು, ಇವುಗಳಲ್ಲಿ ಹೆಚ್ಚಿನವು ಚೀನದ ಮೊಬೈಲ್ ಕಂಪೆನಿಗಳಾಗಿವೆ. ಒಂದು ವೇಳೆ ಫೋನ್ಗಳಿಂದ ಮಾಹಿತಿ ಸೋರಿಕೆ, ಕಳವು ಆದರೆ, ಅಂತಹ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ. ಇದರೊಂದಿಗೆ ಭಾರತದಲ್ಲಿ ಸರ್ವರ್ಗಳನ್ನು ಸ್ಥಾಪಿಸುವಂತೆ ಚೀನ ಮೊಬೈಲ್ ಕಂಪೆನಿಗಳಿಗೆ ಸೂಚಿಸಿದೆ. ಚೀನ ಕಂಪೆನಿ ಮೊಬೈಲ್ಗಳ ಸರ್ವರ್ಗಳು ಚೀನದಲ್ಲೇ ಇರುವ ಕಾರಣ ಭದ್ರತೆ ಉಲ್ಲಂಘನೆಯ ತೀವ್ರ ಸಂಶಯವಿರುವುದರಿಂದ ಹೀಗೆ ಹೇಳಲಾಗಿದೆ.
ಕೇಂದ್ರದ ಹದ್ದಿನ ಕಣ್ಣು
ಮಾಹಿತಿಗಳು ಚೀನದ ಪಾಲಾಗುವುದನ್ನು ತಪ್ಪಿಸಲು ಕೇಂದ್ರ ಈಗಾಗಲೇ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದೆ. ಪೂರಕವಾಗಿ ಆಲಿಬಾಬಾ ಕಂಪೆನಿ ಸ್ವಾಮ್ಯದ ಯುಸಿ ಬ್ರೌಸರ್ ಮೇಲೆ ಕಣ್ಣಿಟ್ಟಿದೆ. ಅದರ ಪರಿಶೀಲನೆಯನ್ನೂ ನಡೆಸಿದೆ. ತಪ್ಪಿತಸ್ಥ ಎಂದು ಕಂಡಲ್ಲಿ ಅದನ್ನು ಸರಕಾರ ನಿಷೇಧಿಸುವ ಸಾಧ್ಯತೆಯೂ ಇದೆ.
ಶೇ.54ರಷ್ಟು ಚೀನ ಫೋನ್ ಮಾರಾಟ
ಭಾರತದಲ್ಲಿ ಮಾರಾಟವಾಗುವ ಶೇ.54ರಷ್ಟು ಫೋನ್ಗಳು ಚೀನದ ಕಂಪೆನಿಗಳದ್ದಾಗಿವೆ. ಇವುಗಳಲ್ಲಿ ಕ್ಸಿಯೋಮಿ, ಲೆನೊವೊ, ಒಪ್ಪೊ, ವಿವೋಗಳದ್ದೇ ಸಿಂಹಪಾಲು. ಬಳಕೆದಾರರು ಇವುಗಳನ್ನು ಬಳಸುತ್ತಿರುವಂತೆಯೇ, ಅತಿ ಹೆಚ್ಚು ಪ್ರಮಾಣದ ಮಾಹಿತಿ, ದತ್ತಾಂಶಗಳು ಶತ್ರು ದೇಶದ ಪಾಲಾಗುವ ಭೀತಿ ಕಾಣಿಸಿದೆ. ಜೊತೆಗೆ ಚೀನ ಟೆಲಿಕಾಂ ಕಂಪೆನಿಗಳು ಪಾರಮ್ಯ ಹೊಂದಿರುವುದರಿಂದ ಸೈಬರ್ ದಾಳಿಯ ತೀವ್ರ ಅಪಾಯವನ್ನೂ ಕೇಂದ್ರ ಸರಕಾರ ಮನಗಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ