ಶೀಘ್ರದಲ್ಲೇ ಬ್ರಿಟನ್ಗಿಂತ ಭಾರತ ಶ್ರೀಮಂತ
Team Udayavani, Jun 5, 2018, 6:00 AM IST
ನವದೆಹಲಿ: ಭಾರತ ಸದ್ಯ 185 ಲಕ್ಷ ಕೋಟಿ ರೂ. ಆರ್ಥಿಕತೆಯ ದೇಶವಾಗಿದ್ದು, ವಿಶ್ವದಲ್ಲೇ ಶ್ರೀಮಂತ ರಾಷ್ಟ್ರವಾಗಿದೆ. ಇನ್ನು ಕೇವಲ 60 ಲಕ್ಷ ಕೋಟಿ ರೂ. ವಿಸ್ತರಿಸಿದರೆ ಭಾರತ ಇಂಗ್ಲೆಂಡ್ ಮತ್ತು ಫ್ರಾನ್ಸ್ ಅನ್ನೂ ಹಿಂದಿಕ್ಕಿ 5ನೇ ಸ್ಥಾನಕ್ಕೆ ಜಿಗಿಯಲಿದೆ. ಸದ್ಯ ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳೆರಡೂ ಭಾರತಕ್ಕಿಂತ ಸ್ವಲ್ಪವೇ ಮುಂದಿವೆ ಎಂದು ಇತ್ತೀಚಿನ ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿಯಲ್ಲಿ ತಿಳಿದುಬಂದಿದೆ.
ಕಳೆದ ತ್ತೈಮಾಸಿಕದಲ್ಲಿ ಭಾರತ ಶೇ. 7.7ರ ಪ್ರಗತಿ ದಾಖಲಿಸಿದ್ದು, ಈ ವಿತ್ತ ವರ್ಷದಲ್ಲಿ ಸರಾಸರಿ ಶೇ. 7ರಷ್ಟು ಜಿಡಿಪಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂಗ್ಲೆಂಡ್ನ ಜಿಡಿಪಿ ಬೆಳವಣಿಗೆ ಜನವರಿ-ಮಾರ್ಚ್ ತ್ತೈಮಾಸಿಕದಲ್ಲಿ ಶೇ. 0.1ರಷ್ಟಾಗಿದೆ. ಮೆರಿಲ್ ಲಿಂಚ್ ಜಾಗತಿಕ ಸಂಶೋಧನೆ ಮುನ್ಸೂಚನೆಯ ಪ್ರಕಾರ, ಈ ವರ್ಷವೇ ಭಾರತವು ಆರ್ಥಿಕತೆಯಲ್ಲಿ ಫ್ರಾನ್ಸ್ ಅನ್ನು ಹಿಂದಿಕ್ಕಲಿದೆ. 2019ರ ಅವಧಿಯಲ್ಲಿ ಇಂಗ್ಲೆಂಡ್ ಅನ್ನು ಹಿಂದಿಕ್ಕಲಿದೆ. ಇನ್ನೊಂದೆಡೆ ಮಾರ್ಗನ್ ಸ್ಟಾನ್ಲ ವರದಿಯ ಪ್ರಕಾರ ಮುಂದಿನ ಹತ್ತು ವರ್ಷಗಳಲ್ಲಿ ಭಾರತ 400 ಲಕ್ಷ ಕೋಟಿ ರೂ. ದಾಟಲಿದ್ದು, ಜರ್ಮನಿ ಮತ್ತು ಜಪಾನನ್ನು ಹಿಂದಿಕ್ಕಲಿದೆ.
ಸರ್ಕಾರದ ಕ್ರಮದಿಂದಲೇ ಜಿಡಿಪಿ ಏರಿಕೆ
ಕಳೆದ ತ್ತೈಮಾಸಿಕದಲ್ಲಿ ಜಿಡಿಪಿ ಶೇ. 7.7ರಷ್ಟು ಏರಿಕೆ ಕಂಡಿದ್ದರ ಹಿಂದೆ ಸರ್ಕಾರದ ಶ್ರಮವೇ ಹೆಚ್ಚಿದೆ ಎಂದು ಹೇಳಲಾಗಿದೆ. ಅಭಿವೃದ್ಧಿಯ ಅಂಕಿ ಅಂಶದ ಪ್ರಕಾರ ಸಾಮಾನ್ಯವಾಗಿ ಒಟ್ಟು ಮೌಲ್ಯ ವರ್ಧನೆ (ಜಿವಿಎ), ಜಿವಿಎ ಮೇಲೆ ಸರ್ಕಾರದ ವೆಚ್ಚ, ನಿರ್ಮಾಣ ಕ್ಷೇತ್ರ ಮತ್ತು ಕೇಂದ್ರ, ರಾಜ್ಯ ಸರ್ಕಾರಗಳ ವಿತ್ತೀಯ ಕೊರ ತೆಯು ಪ್ರಮುಖ ಅಂಶವಾಗಿರುತ್ತದೆ. ಈ ಪೈಕಿ ಜಿವಿಎ ಖಾಸಗಿ ವಲಯದ ಅಭಿವೃದ್ಧಿಯನ್ನು ಸೂಚಿಸುತ್ತಿದ್ದು, ಇದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಉತ್ಪಾದನೆ ಮತ್ತು ಕೃಷಿ ವಲಯ ಪ್ರಗತಿ ಕಂಡಿದ್ದರೂ, ರಫ್ತು ಮತ್ತು ಖಾಸಗಿ ವಲಯ ಕುಸಿದಿದೆ. ಹೀಗಾಗಿ ಸರ್ಕಾರದ ವೆಚ್ಚವೇ ಕಳೆದ ತ್ತೈಮಾಸಿಕದಲ್ಲಿ ಅಭಿವೃದ್ಧಿ ದರ ಏರಿಕೆಗೆ ಕಾರಣವಾಗಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ