ಮಡಗಾಸ್ಕರ್ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ INS ಐರಾವತ; ಏನಿದು ಅಪರೇಷನ್ ‘ವೆನಿಲ್ಲಾ’?


Team Udayavani, Jan 29, 2020, 10:09 AM IST

INS-Airavat-730

ನವದೆಹಲಿ: ಇಂಡಿಯನ್ ಓಷಿಯನ್ ಭಾಗದಲ್ಲಿರುವ ದ್ವೀಪ ರಾಷ್ಟ್ರ ಮಡಗಾಸ್ಕರ್ ಇದೀಗ ಪ್ರವಾಹ ಪರಿಸ್ಥಿತಿಗೆ ತತ್ತರಿಸುತ್ತಿದೆ. ಈ ದ್ವೀಪ ರಾಷ್ಟ್ರದ ಜನರಿಗೆ ಆಹಾರ, ಬಟ್ಟೆ, ಔಷಧಿ ಸೇರಿದಂತೆ ಅತ್ಯಗತ್ಯ ವಸ್ತುಗಳನ್ನು ಪೂರೈಸಲು ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಭಾರತದ ನೌಕಾಪಡೆ ಇದೀಗ ಧಾವಿಸಿದೆ. ‘ಅಪರೇಷನ್ ವೆನಿಲ್ಲಾ’ ಹೆಸರಿನಲ್ಲಿ ತನ್ನ ಐ.ಎನ್.ಎಸ್. ಐರಾವತ ನೌಕೆಯನ್ನು ಮಡಗಾಸ್ಕರ್ ಗೆ ಭಾರತ ಕಳುಹಿಸಿಕೊಟ್ಟಿದೆ. ಈ ಮೂಲಕ ಪ್ರವಾಹದಿಂದ ತತ್ತರಿಸಿರುವ ಈ ದ್ವೀಪ ರಾಷ್ಟ್ರದ ಜನರ ಸಹಾಯಕ್ಕೆ ಧಾವಿಸಿರುವ ಮೊದಲ ದೇಶ ಭಾರತವಾಗಿದೆ.

ಆಹಾರ, ಬಟ್ಟೆ ಮತ್ತು ಔಷಧಿ ಸಾಮಾಗ್ರಿಗಳನ್ನು ಹೊತ್ತು ಸಾಗಿರುವ ಈ ನೌಕೆ ಇಂದು ಮಡಗಾಸ್ಕರ್ ತಲುಪುವ ನಿರೀಕ್ಷೆ ಇದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರಬಹುದಾದವರ ರಕ್ಷಣೆಗಾಗಿ ನಾಲ್ಕು ದೊಡ್ಡ ಮತ್ತು ಎರಡು ಮಧ್ಯಮ ಗಾತ್ರದ ದೋಣಿಗಳನ್ನೂ ಸಹ ಕೊಂಡೊಯ್ಯಲಾಗಿದೆ.

ಭೀಕರ ಪ್ರವಾಹದಿಂದಾಗಿ ಈ ದ್ವೀಪರಾಷ್ಟ್ರದಲ್ಲಿ ಸುಮಾರು 92 ಸಾವಿರ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಹಾಗೂ ಹಲವರು ಈಗಾಗಲೇ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಅಧ್ಯಕ್ಷರು ಜಾಗತಿಕ ಸಮುದಾಯದ ಸಹಾಯ ನೆರವನ್ನು ಕೋರಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಭಾರತ ತನ್ನ ನೌಕಾಪಡೆಯಲ್ಲಿರುವ ಐ.ಎನ್.ಎಸ್. ಐರಾವತವನ್ನು ಸುಸಜ್ಜಿತ ರೀತಿಯಲ್ಲಿ ಅಲ್ಲಿಗೆ ಕಳುಹಿಸಿಕೊಟ್ಟಿದ್ದು ಈ ನೌಕೆ ಉತ್ತರ ಮಡಗಾಸ್ಕರ್ ನಲ್ಲಿರುವ ಅಂಟ್ಸಿರನಾನ ಬಂದರಿನಲ್ಲಿ ಲಂಗರು ಹಾಕಲಿದೆ.

ಮಡಗಾಸ್ಕರ್, ಸೇಛೆಲ್ಲೆಸ್, ರೂನಿಯನ್, ಮಾರಿಷಸ್, ಕೊಮೊರೋಸ್, ಮಾಯೊಟ್ಟೆ ದ್ವೀಪಸಮೂಹಗಳಲ್ಲಿ ಆರ್ಕಿಡ್ ಸಸ್ಯಗಳು ವಿಫುಲವಾಗಿ ಬೆಳೆಯುವುದರಿಂದ ಇವುಗಳನ್ನು ‘ವೆನಿಲ್ಲಾ ದ್ವೀಪ ರಾಷ್ಟ್ರಗಳು’ ಎಂದೇ ಕರೆಯಲಾಗುತ್ತದೆ. ಹಾಗಾಗಿ ಭಾರತ ಈ ಕಾರ್ಯಾಚರಣೆಗೆ ‘ಅಪರೇಷನ್ ವೆನಿಲ್ಲಾ’ ಎಂದು ಹೆಸರಿಟ್ಟಿದೆ. ಮಡಗಾಸ್ಕರ್ ಪೂರ್ವ ಆಫ್ರಿಕಾ ಕರಾವಳಿ ತೀರದಿಂದ 400 ಕಿಲೋಮೀಟರ್ ಗಳಷ್ಟು ದೂರದಲ್ಲಿದೆ.

ಕಳೆದ ವರ್ಷವೂ ಸಹ ಭಾರತ ಮೊಝಾಂಬಿಕ್ ನಲ್ಲಿ ಇಡಾಯ್ ಚಂಡಮಾರುತ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ತನ್ನ ನೆರವಿನ ಹಸ್ತವನ್ನು ಚಾಚಿತ್ತು. ಮತ್ತು ಸಂತ್ರಸ್ತರ ನೆರವಿಗಾಗಿ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಐ.ಎನ್.ಎಸ್. ಸುಜಾತ, ಐ.ಎನ್.ಎಸ್. ಸಾರಥಿ ಮತ್ತು ಐ.ಎನ್.ಎಸ್. ಶಾರ್ದೂಲ್ ನೌಕೆಗಳನ್ನು ಕಳುಹಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.