ಸದ್ಭಾವನಾ ಸಂಕೇತವಾಗಿ ಪಾಕ್ಗೆ ವೃದ್ಧನ ಹಸ್ತಾಂತರಿಸಿದ ಬಿಎಸ್ಎಫ್
Team Udayavani, Mar 9, 2019, 3:40 PM IST
ಶ್ರೀನಗರ : ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಸ್ಥಿತಿ ಇರುವ ವೇಳೆಯಲ್ಲೇ ಸಾಂಬಾ ವಲಯದಲ್ಲಿ ಅಂತರಾಷ್ಟ್ರೀಯ ಗಡಿ ದಾಟಿ ಬಂದ ವೃದ್ಧನೊಬ್ಬನನ್ನು ಸದ್ಭಾವನಾ ಸಂಕೇತವಾಗಿ ಒಂದೇ ದಿನದಲ್ಲಿ ಬಿಎಸ್ಎಫ್ ಹಸ್ತಾಂತರಿಸಿದೆ.
ಶುಕ್ರವಾರ ಗಡಿ ದಾಟಿ ಬಂದಿದ್ದ 60 ರ ಹರೆಯದ ಮೊಹಮದ್ ಅಶ್ರಫ್ ಎನ್ನುವ ವೃದ್ಧನ್ನನ್ನು ಬಿಎಸ್ಎಫ್ ಪಡೆಗಳು ವಶಕ್ಕೆ ಪಡೆದಿದ್ದವು. ಈ ವೇಳೆ ಆತನ ಬಳಿ 12,000 ರೂಪಾಯಿ ಮೌಲ್ಯದ ಪಾಕ್ ಹಣವನ್ನು ವಶಕ್ಕೆ ಪಡೆಯಲಾಗಿತ್ತು.
ಮೊಹಮದ್ ಅಶ್ರಫ್ ಪಾಕ್ನ ಪಂಜಾಬ್ನ ಬೊಯ್ಟಾ -ನರ್ವಾಲ್ ಪ್ರಾಂತ್ಯದ ನಿವಾಸಿ ಎಂದು ತಿಳಿದು ಬಂದಿದೆ.
ಶನಿವಾರ ಮಧ್ಯಾಹ್ನ 3.40 ರ ವೇಳೆಗೆ ಬಿಎಸ್ಎಫ್ ಮೊಹಮದ್ ಅಶ್ರಫ್ನನ್ನು ಪಾಕ್ ರೇಂಜರ್ಗಳಿಗೆ ಹಸ್ತಾಂತರಿಸಿದ್ದಾರೆ. ಭಾರತೀಯ ಪಡೆಗಳ ಮಾನವೀಯತೆಯನ್ನು ಪಾಕ್ ರೇಂಜರ್ಗಳು ಕೊಂಡಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ