ಕತಾರ್ನಿಂದ ಭಾರತೀಯರ ಕರೆ ತರಲು ವಿಶೇಷ ವಿಮಾನ
Team Udayavani, Jun 23, 2017, 3:45 AM IST
ನವದೆಹಲಿ: ಅರಬ್ ರಾಷ್ಟ್ರಗಳಿಂದ ವಾಣಿಜ್ಯ ಹಾಗೂ ಸಾರಿಗೆ ನಿರ್ಬಂಧಕ್ಕೆ ಗುರಿಯಾಗಿರುವ ಕತಾರ್ನಲ್ಲಿರುವ ಭಾರತೀಯರಿಗೆ ಸ್ವದೇಶಕ್ಕೆ ಮರಳಲು ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು, “ಭಾರತೀಯ ಮುಸ್ಲಿಮರು ಈದ್ ಆಚರಣೆಗಾಗಿ ತಮ್ಮ ಕುಟುಂಬದವರನ್ನು ಸೇರಿಕೊಳ್ಳಲು ಕೇಂದ್ರ ಸರ್ಕಾರ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದೆ. ಏರ್ ಇಂಡಿಯಾ ಹಾಗೂ ಇತರ ಖಾಸಗಿ ವಿಮಾನಯಾನ ಸಂಸ್ಥೆಗಳು ಕೊಚ್ಚಿ, ತಿರುವನಂತಪುರ ಮತ್ತು ಮುಂಬೈ ವಿಮಾನ ನಿಲ್ದಾಣಗಳಿಂದ ದೋಹಾಗೆ ಹೆಚ್ಚುವರಿ ವಿಮಾನಗಳನ್ನು ಬಿಡಲಿವೆ,’ ಎಂದು ಹೇಳಿದ್ದಾರೆ.
ಖತಾರ್ನಲ್ಲಿ ಸುಮಾರು 7 ಲಕ್ಷ ಭಾರತೀಯರು ನೆಲೆಸಿದ್ದು, ನಿರ್ಬಂಧದ ಬೆನ್ನಲ್ಲೇ ಅನೇಕರು ಸ್ವದೇಶಕ್ಕೆ ಮರಳಲು ಹೊರಟಿದ್ದಾರೆ. ಆದರೆ, ಟಿಕೆಟ್ಗೆ ಭಾರೀ ಬೇಡಿಕೆ ಇರುವ ಕಾರಣ ಅವರಿಗೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸರ್ಕಾರ ಹೆಚ್ಚುವರಿ ವಿಮಾನದ ನಿರ್ಧಾರ ಕೈಗೊಂಡಿದೆ,’ ಎಂದು ಸಚಿವ ಗಜಪತಿ ರಾಜು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ