2 ತಿಂಗಳಲ್ಲಿ ಮೌಂಟ್ ಎವರೆಸ್ಟ್ ಮರು ಅಳತೆ
Team Udayavani, Jan 25, 2017, 3:55 AM IST
ಹೈದರಾಬಾದ್: ನೇಪಾಲ ಭೂಕಂಪನದ ಅನಂತರ ಜಗತ್ತಿನ ಅತೀ ಎತ್ತದ ಶಿಖರ ಮೌಂಟ್ ಎವರೆಸ್ಟ್ ಕುಸಿಯುತ್ತಿದೆ ಎಂಬ ಸಂಗತಿಯನ್ನು ಸರ್ವೇ ಆಫ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಮರು ಅಳತೆಗೆ ಮುಂದಾಗಿದೆ. ಎರಡು ವರ್ಷಗಳ ಹಿಂದೆ ನೇಪಾಲದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಎವರೆಸ್ಟ್ನ ಎತ್ತರ ಕುಸಿದಿದೆ ಎಂದು ಹಲವು ಸಂಶೋಧನೆಗಳು ಹೇಳಿದ್ದವು. ಇದನ್ನೇ ಆಧರಿಸಿ ಸರ್ವೇ ಆಫ್ ಇಂಡಿಯಾ ಶಿಖರದ ಮರು ಅಳತೆಗೆ ಸಿದ್ಧವಾಗಿದೆ. ಮರು ಅಳತೆ ಮಾಡಲು 1855ರಲ್ಲಿ ಶಿಖರದ ಎತ್ತರವನ್ನು ನಿಗದಿಪಡಿಸಿದ ಸ್ಥಳಕ್ಕೆ ಶೀಘ್ರ ನಮ್ಮ ತಂಡ ತೆರಳಲಿದೆ. ಈಗಾಗಲೇ ಸಾಕಷ್ಟು ತಂಡಗಳು ಮೌಂಟ್ ಎವರೆಸ್ಟ್ ಅನ್ನು ಅಳೆದಿವೆ. ಆದರೆ, ಸರ್ವೇ ಆಫ್ ಇಂಡಿಯಾ ನಿಗದಿಪಡಿಸಿದ 29,028 ಅಡಿ ಎತ್ತರ ಎಂಬ ಅಳತೆಯನ್ನೇ ಒಪ್ಪಿಕೊಳ್ಳಲಾಗಿದೆ.
ಭೂಕಂಪನದ ಅನಂತರ ಪರ್ವತದ ಕುಸಿತದ ಬಗ್ಗೆ ವಿಜ್ಞಾನಿಗಳು ತೋರಿದ ಸಂಶಯ ಮತ್ತು ಮುಂದಿನ ಅಧ್ಯಯನಗಳಿಗೆ ಸಮೀಕ್ಷೆ ನೆರವಾಗಲಿ ಎಂಬ ಉದ್ದೇಶದಿಂದ ಮರು ಅಳತೆಗೆ ಮುಂದಾಗಿದ್ದೇವೆ’ ಎಂದು ಸರ್ವೇಯರ್ ಜನರಲ್ ಆಫ್ ಇಂಡಿಯಾದ ಸ್ವರ್ಣ ಸುಬ್ಬರಾವ್ ತಿಳಿಸಿದ್ದಾರೆ. ಮರು ಅಳತೆಯ ಯೋಜನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರ ಇಲಾಖೆಯಿಂದ ಎಲ್ಲ ರೀತಿಯ ಅನುಮತಿ ಸಿಕ್ಕಿದೆ. ಒಂದು ವೇಳೆ ನೇಪಾಳದ ಸರ್ವೇಯರ್ ಜನರಲ್ ಜತೆಗೆ ಅವರೊಂದಿಗೆ ಸಭೆ ನಡೆಸುತ್ತೇವೆ. ಇನ್ನೆರಡು ತಿಂಗಳಿನಲ್ಲಿ ನಮ್ಮ ತಂಡವನ್ನು ಮೌಂಟ್ ಎವರೆಸ್ಟ್ಗೆ ಕಳುಹಿಸಿಕೊಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪರ್ವತದ ಎತ್ತರ ಅಳೆಯುವ ವಿಧಾನ ಹೇಗೆ?: 1855ರ ಅಳತೆಯ ಅನಂತರ ಪರ್ವತ ಅಳೆಯುವ ಕ್ರಮದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಥಿಯೋಡ್ಲೈಟ್ ಸಾಧನವನ್ನು ಸದ್ಯ ಬಳಕೆಯಾಗುತ್ತದೆ. ಥಿಯೋಡ್ಲೈಟ್ನ ಸುಧಾರಿತ ರೂಪದಲ್ಲಿ ತಿರುಗುವ ಟೆಲಿಸ್ಕೋಪ್ ಅಳವಡಿಸಲಾಗಿದೆ. ಇವುಗಳಲ್ಲಿನ ಎಲೆಕ್ಟ್ರೋ ಆಪ್ಟಿಕಲ್ಗಳು ಪರ್ವತದ ಭುಜಗಳನ್ನು ಅಳೆಯುತ್ತಲೇ ಶಿಖರದ ಒಟ್ಟಾರೆ ಎತ್ತರವನ್ನು ನಿಖರವಾಗಿ ನಿರ್ಧರಿಸುತ್ತವೆ. 1855ರಲ್ಲಿ 500 ಕೆಜಿ ತೂಕದ ಥಿಯೋಡ್ಲೈಟ್ ಅನ್ನು 12 ಮಂದಿ ಶೆರ್ಫಾಗಳು ಹೊತ್ತೂಯ್ದಿದ್ದರು. ಈಗಿನ ಥಿಯೋಡ್ಲೈಟ್ಗಳು ಸ್ಮಾರ್ಟ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ