ಜೈಶ್ ಉಗ್ರಶಿಬಿರಗಳನ್ನು ಧ್ವಂಸಗೊಳಿಸಿದ್ದ ಮಿರಾಜ್ ಗಳಿಗೆ ಇಟ್ಟಿದ್ದ ಕೋಡ್ ನೇಮ್ ಏನು ಗೊತ್ತೇ?
Team Udayavani, Oct 6, 2019, 5:23 PM IST
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಪಡೆ ಪಾಕಿಸ್ಥಾನದ ವಾಯುಪ್ರದೇಶಕ್ಕೆ ನುಗ್ಗಿ ಅಲ್ಲಿ ಕಡಿದಾದ ಬೆಟ್ಟಗಳ ನಡುವೆ ದಟ್ಟ ಕಾಡಿನ ಮಧ್ಯದಲ್ಲಿದ್ದ ಜೈಶ್ ಸಂಘಟನೆಯ ಉಗ್ರ ಶಿಬಿರವನ್ನು ಉಡಾಯಿಸಿದ್ದ ಕಾರ್ಯಾಚರಣೆಗೆ ‘ಅಪರೇಷನ್ ಬಂದರ್’ ಎಂದು ನಾಮಕರಣ ಮಾಡಿತ್ತು ಎಂಬ ವಿಷಯ ನಮಗೆ ತಿಳಿದೇ ಇದೆ. ಇದೀಗ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮತ್ತು ಉಗ್ರ ಶಿಬಿರಗಳ ಮೆಲೆ ನಿಖರವಾಗಿ ಬಾಂಬ್ ಗಳನ್ನು ಸುರಿದು ಬಂದಿದ್ದ 12 ಮಿರಾಜ್ 2000 ಯುದ್ಧ ವಿಮಾನಗಳಿಗೆ ಇರಿಸಲಾಗಿದ್ದ ರಹಸ್ಯ ಹೆಸರೇನು (ಕೋಡ್ ನೇಮ್) ಗೊತ್ತೇ?
ಮಿರಾಜ್ 2000 ಯುದ್ಧ ವಿಮಾನಗಳಿಗೆ ಈ ಕಾರ್ಯಾಚರಣೆಗೆ ಇರಿಸಲಾಗಿದ್ದ ಕೋಡ್ ನೇಮ್ ‘ಸ್ಪೈಸ್’ ಎಂದಾಗಿತ್ತು. ಈ ಯುದ್ಧ ವಿಮಾನಗಳು ಸ್ಪೈಸ್ ಹೆಸರಿನ ಕ್ಷಿಪಣಿಗಳನ್ನು ಹೊತ್ತೊಯ್ದಿದ್ದ ಕಾರಣ ಇವುಗಳಿಗೆ ‘ಸ್ಪೈಸ್’ ಎಂಬ ಕೋಡ್ ನೇಮ್ ಇರಿಸಲಾಗಿತ್ತು.
ಭಾರತದ ವಿವಿಧ ವಾಯುನೆಲೆಗಳಿಂದ ಫೆಬ್ರವರಿ 26ರಂದು ಹಾರಿದ್ದ 12 ಮಿರಾಜ್ ಯುದ್ಧ ವಿಮಾನಗಳು ಪಾಕಿಸ್ಥಾನದ ವಾಯುನೆಲೆಯನ್ನು ದಾಟಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿದ್ದ ಜೈಶ್ ಸಂಘಟನೆಯ ರಹಸ್ಯ ಉಗ್ರ ಶಿಬಿರಗಳ ಮೇಲೆ ಯಶಸ್ವಿಯಾಗಿ ಕ್ಷಿಪಣಿ ದಾಳಿಯನ್ನು ನಡೆಸಿ ಸುರಕ್ಷಿತವಾಗಿ ತಮ್ಮ ತಮ್ಮ ತಾಣಗಳಿಗೆ ಮರಳಿದ್ದವು.
ಫೆಬ್ರವರಿ 26ರ 3.30ರ ಸುಮಾರಿಗೆ ಭಾರತೀಯ ವಾಯುಪಡೆ ನಡೆಸಿದ್ದ ಈ ದಾಳಿಯಲ್ಲಿ ಮಿರಾಜ್ ಯುದ್ಧ ವಿಮಾನದ ಪೈಲಟ್ ಗಳು ಒಟ್ಟು 5 ಸ್ಪೈಸ್ 2000 ಬಾಂಬುಗಳನ್ನು ಉಗ್ರಶಿಬಿರಗಳ ಮೇಲೆ ಹಾಕಿದ್ದರು, ಇವುಗಳಲ್ಲಿ ನಾಲ್ಕು ಬಾಂಬುಗಳು ಉಗ್ರಗಾಮಿಗಳು ನಿದ್ರಿಸುತ್ತಿದ್ದ ಆ ಕಟ್ಟಡದ ಛಾವಣಿಯ ಮೆಲೆ ಅಪ್ಪಳಿಸಿದ್ದವು.
ದಾಳಿಯಲ್ಲಿ ಪಾಲ್ಗೊಂಡಿದ್ದ ಯುದ್ಧವಿಮಾನಗಳು ವಾಯುಪಡೆಯ 7 ಮತ್ತು 9ನೇ ಸ್ಕ್ವಾರ್ಡನ್ ಗೆ ಸೇರಿದ್ದವಾಗಿತ್ತು. ಇನ್ನು ಕೆಲವು ವಿರಾಜ್ ಯುದ್ಧ ವಿಮಾನಗಳು ಮತ್ತು ಎಸ್.ಯು. – 30 ಎಂ.ಕೆ.ಐ. ಯುದ್ಧ ವಿಮಾನಗಳನ್ನು ಈ ದಾಳಿ ಸಂದರ್ಭದಲ್ಲಿ ಪಾಕಿಸ್ಥಾನ ಯುದ್ಧ ವಿಮಾನಗಳ ಸಂಭವನೀಯ ಪ್ರತಿರೋಧವನ್ನು ನಿರೋಧಿಸಲು ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ