
Watch; ಕೋವಿಡ್ ಭೀತಿ ನಡುವೆ; Pokಯಲ್ಲಿ ಪಾಕ್ ಕಳ್ಳಾಟ, ಉಗ್ರರ ಅಡಗುತಾಣ ಧ್ವಂಸಗೊಳಿಸಿದ ಸೇನೆ
ಪಾಕಿಸ್ತಾನ ಸೇನೆ ಐವರು ಉಗ್ರರನ್ನು ಅಕ್ರಮವಾಗಿ ಕೇರನ್ ಸೆಕ್ಟರ್ ನೊಳಗೆ ಏಪ್ರಿಲ್ 1ರಂದು ಕಳುಹಿಸಿತ್ತು.
Team Udayavani, Apr 11, 2020, 1:45 PM IST

ಶ್ರೀನಗರ್: ಕೋವಿಡ್ 19 ವೈರಸ್ ಅಟ್ಟಹಾಸ ಒಂದೆಡೆಯಾದರೆ, ಸದ್ದಿಲ್ಲದೆ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ದಾಳಿ ನಡೆಸಲು ಸಂಚು ನಡೆಸಿ ಠಿಕಾಣಿ ಹೂಡಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನಾಪಡೆ ಶುಕ್ರವಾರ ಕರಾರುವಕ್ಕಾಗಿ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಸೇನಾಪಡೆಯ ಕದನವಿರಾಮ ಉಲ್ಲಂಘನೆಗೆ ತಕ್ಕ ತಿರುಗೇಟು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸೇನಾ ಮೂಲಗಳು ನ್ಯೂಸ್ ಏಜೆನ್ಸಿ ಎಎನ್ ಐಗೆ ತಿಳಿಸಿರುವ ಪ್ರಕಾರ, ಪಾಕಿಸ್ತಾನ ಸೇನೆ ಐವರು ಉಗ್ರರನ್ನು ಅಕ್ರಮವಾಗಿ ಕೇರನ್ ಸೆಕ್ಟರ್ ನೊಳಗೆ ಏಪ್ರಿಲ್ 1ರಂದು ಕಳುಹಿಸಿತ್ತು. ಈ ಉಗ್ರರು ಗಡಿ ನಿಯಂತ್ರಣ ರೇಖೆಯಲ್ಲಿರುವ ಸೇನಾಪಡೆಯನ್ನು ಗುರಿಯಾಗಿರಿಸಿ ದಾಳಿ ನಡೆಸಲು ಸಿದ್ಧತೆ ನಡೆಸಿರುವುದಾಗಿ ವಿವರಿಸಿದೆ.
ಈ ಜಿದ್ದಾಜಿದ್ದಿಯ ಹೋರಾಟದಲ್ಲಿ ಸೇನೆಯ ವಿಶೇಷ ಪಡೆ ಐವರು ಉಗ್ರರನ್ನು ಹೊಡೆದುರುಳಿಸಿತ್ತು. ಆದರೆ ಈ ಕದನದಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಯ ಐದು ಯೋಧರು ಹುತಾತ್ಮರಾಗಿರುವುದಾಗಿ ಮೂಲಗಳು ತಿಳಿಸಿದೆ.
#WATCH: Amateur video emerges from PoK of Indian Army guns targeting terror launch pads in Keran Sector in PoK. (10.04.2020) pic.twitter.com/VwrRdoLYlk
— ANI (@ANI) April 11, 2020
ಭಾರತೀಯ ಸೇನಾಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿರುವುದನ್ನು ಡ್ರೋಣ್ ನಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೋವನ್ನು ಎಎನ್ ಐ ಪೋಸ್ಟ್ ಮಾಡಿದೆ. ಈ ಪ್ರದೇಶದಲ್ಲಿ ಮತ್ತೊಂದು ಉಗ್ರರ ತಂಡ ಒಳನುಸುಳಲು ತಯಾರಾಗಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಭಾರತೀಯ ಸೇನೆ ಸ್ಫೋಟಕವನ್ನು ಎಸೆದ ಪರಿಣಾಮ ಪಾಕ್ ಸೇನೆಯ ಯೋಧರು ಸಾವನ್ನಪ್ಪಿರುವುದಾಗಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಪ್ರಚಾರಕ್ಕಾಗಿ ಬಿಬಿಸಿಗೆ ಚೀನಾದಿಂದ ಹಣಕಾಸು ನೆರವು? ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು

ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ವಿಮಾನದೊಳಗೆ ಬೆತ್ತಲಾದ ಮಹಿಳೆ: ಮುಂಬೈ ಪೊಲೀಸರಿಂದ ಬಂಧನ

ವಿಶಾಖಪಟ್ಟಣಂ ಆಂಧ್ರಪ್ರದೇಶದ ನೂತನ ರಾಜಧಾನಿಯಾಗಲಿದೆ : ಸಿಎಂ ಜಗನ್ ಮೋಹನ್ ರೆಡ್ಡಿ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
