ಪಾಕ್ ಪಡೆಯ ದಾಳಿ ಯತ್ನ ವಿಫಲ; ಭಾರತೀಯ ಸೇನೆಯಿಂದ ಇಬ್ಬರ ಹತ್ಯೆ
Team Udayavani, May 26, 2017, 3:52 PM IST
ಜಮ್ಮು- ಕಾಶ್ಮೀರ:ಇತ್ತೀಚೆಗಷ್ಟೇ ಗಡಿಭಾಗದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದ ಭಾರತೀಯ ಸೇನಾ ಪಡೆ ಶುಕ್ರವಾರ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದೆ. ಜಮ್ಮು ಕಾಶ್ಮೀರದ ಉರಿ ಸೆಕ್ಟರ್ ನ ಗಡಿಯಲ್ಲಿ ಪಾಕಿಸ್ತಾನ್ ಗಡಿ ಕಾವಲು ಪಡೆ ಬೆಂಬಲಿತ ಇಬ್ಬರು ಉಗ್ರರನ್ನು ಭಾರತದ ಸೇನಾ ಪಡೆ ಹೊಡೆದುರುಳಿಸಿದೆ. ಅಷ್ಟೇ ಅಲ್ಲ ಉರಿ ಸೆಕ್ಟರ್ ಮೇಲೆ ದಾಳಿ ನಡೆಸುವ ಯತ್ನವನ್ನು ವಿಫಲಗೊಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಪಿಟಿಐ ವರದಿ ಪ್ರಕಾರ, ಭಾರತೀಯ ಮಿಲಿಟರಿಯ ಗುಂಡಿನ ದಾಳಿಯಲ್ಲಿ ಇಬ್ಬರು ಪಾಕ್ ಸೈನಿಕರು ಹಾಗೂ ಇಬ್ಬರು ಬಿಎಟಿ(ಪಾಕಿಸ್ತಾನ ಗಡಿ ಕಾವಲು ಪಡೆ) ಬೆಂಬಲಿತ ಇಬ್ಬರು ಉಗ್ರರು ಹತರಾಗಿರುವುದಾಗಿ ವಿವರಿಸಿದೆ.
ಪಾಕಿಸ್ತಾನದ ಗಡಿ ಕಾವಲು ಪಡೆ ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ನಡೆಸಿದ್ದು, ಈ ಘಟನೆಗೆ ಭಾರತೀಯ ಸೇನಾಪಡೆ ಪ್ರತೀಕಾರ ತೀರಿಸಿಕೊಂಡಂತಾಗಿದೆ.