ಜಮ್ಮು ಕಾಶ್ಮೀರ: ಉಗ್ರರ ಒಳನುಸುಳುವಿಕೆ ತಡೆದ ಯೋಧರು
Team Udayavani, Jul 21, 2018, 4:34 PM IST
ಶ್ರೀನಗರ : ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಇಂದು ಕಟ್ಟೆಚ್ಚರ ವಹಿಸಿದ್ದ ಭಾರತೀಯ ಸೈನಿಕರು ಉಗ್ರರ ಒಳನುಸುಳುವಿಕೆಯನ್ನು ಯಶಸ್ವಿಯಾಗಿ ತಡೆದರು. ಇದನ್ನು ಅನುಸರಿಸಿ ಉಗ್ರರೊಂದಿಗೆ ಯೋಧರು ಭೀಕರ ಗುಂಡಿನ ಕಾಳಗದಲ್ಲಿ ನಿರತರಾದರು.
ಗಡಿ ನಿಯಂತ್ರಣ ರೇಖೆಯ ತಂಗದಾರ್ನಲ್ಲಿ ಇಂದು ನಸುಕಿನ ವೇಳೆ ಉಗ್ರರ ಗುಂಪೊಂದು ಒಳ ನಸುಳಿ ಬರುವುದನ್ನು ಕಂಡ ಭಾರತೀಯ ಯೋಧರು ಗುಂಡು ಹಾರಿಸಿ ಹಿಮ್ಮೆಟ್ಟಿಸಿದರು. ಪರಿಣಾಮವಾಗಿ ಆರಂಭಗೊಂಡ ಗುಂಡಿನ ಕಾಳಗ ಬೆಳಗ್ಗೆ 11.30ರ ವರೆಗೂ ಜಾರಿಯಲ್ಲಿತ್ತು ಎಂದು ರಕ್ಷಣಾ ಮೂಲಗಳು ಹೇಳಿವೆ.