ಬಹಿಷ್ಕಾರದ ಸಡ್ಡು


Team Udayavani, Feb 4, 2022, 7:10 AM IST

ಬಹಿಷ್ಕಾರದ ಸಡ್ಡು

ಹೊಸದಿಲ್ಲಿ: ಒಲಿಂಪಿಕ್ಸ್‌ನಲ್ಲೂ ಕೀಳುಮಟ್ಟದ “ರಾಜಕೀಯ’ ಮಾಡಲು ಹೋಗಿ ಕೆಣಕಲು ಯತ್ನಿಸಿದ ಚೀನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.

ಶುಕ್ರವಾರ ಆರಂಭ ವಾಗುವ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನ  ಉದ್ಘಾಟನೆ ಮತ್ತು ಸಮಾರೋಪ ಸಮಾರಂಭವನ್ನು ಭಾರತ ಬಹಿಷ್ಕರಿಸಿದೆ.

ಉದ್ಘಾಟನ ಸಮಾರಂಭ ಶುಕ್ರ  ವಾರ ನಡೆಯ ಲಿದೆ. ಇದರ ಜ್ಯೋತಿ ಯಾತ್ರೆಯಲ್ಲಿ ಚೀನವು 2020ರ ಗಾಲ್ವಾನ್‌ ಸಂಘರ್ಷದಲ್ಲಿ ಭಾಗಿಯಾಗಿದ್ದ ತನ್ನ ಸೇನೆಯ ಕಮಾಂಡರ್‌ನನ್ನು ಪ್ರಮುಖ ಜ್ಯೋತಿ ಧಾರಿ ಯಾಗಿ ನೇಮಕ ಮಾಡಿದೆ. ಈ ಮೂಲಕ ಗಾಲ್ವಾನ್‌ನಲ್ಲಿ ಭಾರತದ 20 ಯೋಧರ ಸಾವಿಗೆ ಕಾರಣರಾದ ವರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ಬಿಂಬಿಸಿ ಭಾರತವನ್ನು ಕೆಣಕಲು ಚೀನ ಮುಂದಾಗಿದೆ.

ರಾಯಭಾರಿ ಭಾಗಿ ಇಲ್ಲ:

ಇದು ಬಹಿರಂಗವಾಗುತ್ತಿದ್ದಂತೆ ಭಾರತವು ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪವನ್ನು ಬಹಿಷ್ಕರಿ ಸಿದೆ. “ಒಲಿಂಪಿಕ್ಸ್‌ನಲ್ಲೂ ರಾಜಕೀಯ ಮಾಡಲು ಹೊರಟ ಚೀನದ ನಡೆ ಖಂಡ ನೀಯ. ಬೀಜಿಂಗ್‌ ಒಲಿಂಪಿಕ್ಸ್‌ನ ಉದ್ಘಾಟನೆ – ಸಮಾ ರೋಪ ಸಮಾರಂಭದಲ್ಲಿ ಭಾರತದ ರಾಯಭಾರಿ ಪಾಲ್ಗೊಳ್ಳುವುದಿಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗಿc ಘೋಷಿಸಿದ್ದಾರೆ.

ಇದಾದ ಬೆನ್ನಲ್ಲೇ ದೂರದರ್ಶನವು “ನಾವು ಒಲಿಂಪಿಕ್ಸ್‌ನ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡುವುದಿಲ್ಲ’ ಎಂದು  ಪ್ರಸಾರ ಭಾರತಿ ಮುಖ್ಯಸ್ಥ ಶಶಿಶೇಖರ್‌ ವೆಂಪತಿ  ಟ್ವೀಟ್‌ ಮಾಡಿದ್ದಾರೆ.

ವಿಶೇಷವೆಂದರೆ, ಜಮ್ಮು ಮತ್ತು ಕಾಶ್ಮೀರದ ಸ್ಕೀಯರ್‌ ಆರಿಫ್ ಮೊಹಮ್ಮದ್‌ ಖಾನ್‌ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಅತ್ಲೀಟ್‌.

ನಾಚಿಕೆಗೇಡು ಎಂದ ಅಮೆರಿಕ:

ಗಾಲ್ವಾನ್‌ ಸಂಘರ್ಷದ ಕಮಾಂಡರ್‌ನನ್ನು ಟಾರ್ಚ್‌ ಬೇರರ್‌ ಆಗಿ ನೇಮಿಸಿರುವ ಚೀನದ ಕ್ರಮವನ್ನು ಅಮೆರಿಕವೂ ಖಂಡಿಸಿದೆ. ಅಮೆರಿಕದ ರಿಪಬ್ಲಿಕನ್‌ ಸಂಸದ ಜಿಮ್‌ ರಿಶ್‌ ಈ ಕ್ರಮವನ್ನು “ನಾಚಿಕೆ ಗೇಡಿನದ್ದು’ ಎಂದಿದ್ದಾರೆ. “2020ರಲ್ಲಿ ಭಾರತದ ಯೋಧರ ಮೇಲೆ ದಾಳಿ ಮಾಡಿದ ಮತ್ತು ಉಯುYರ್‌ ಮುಸ್ಲಿಮರ ನರಮೇಧ ನಡೆಸುತ್ತಿರುವ ಸೇನೆಯ ಕಮಾಂಡರ್‌ನನ್ನು ಒಲಿಂಪಿಕ್ಸ್‌ ಜ್ಯೋತಿಧಾರಿಯಾಗಿ ನೇಮಿಸಿದ್ದು ನಾಚಿಕೆಗೇಡು. ಅಮೆರಿಕ ಉಯುYರ್‌ ಮುಸ್ಲಿಮರ ಸ್ವಾತಂತ್ರ್ಯ ಮತ್ತು ಭಾರತದ ಸಮಗ್ರತೆಯನ್ನು ಬೆಂಬಲಿಸುತ್ತದೆ’ ಎಂದಿದ್ದಾರೆ.

ಯಾರೀ ಕಮಾಂಡರ್‌? :

2020ರ ಜೂ. 15ರಂದು ಗಾಲ್ವಾನ್‌ನಲ್ಲಿ ಭಾರತದ ಯೋಧರು ಮತ್ತು ಚೀನೀ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದ್ದಾಗ, ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ರೆಜಿಮೆಂಟ್‌ನ ಕಮಾಂಡರ್‌ ಆಗಿದ್ದ ಖೀ ಫ‌ಬಾವೋ ತಲೆಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಚೀನದ ಸರಕಾರಿ ಮಾಧ್ಯಮಗಳು “ಹೀರೋ’ ಎಂದು ಬಿಂಬಿಸಿದ್ದವು. ಈಗ ಒಲಿಂಪಿಕ್ಸ್‌ನ  1,200 ಜ್ಯೋತಿಧಾರಿಗಳ ಪೈಕಿ ಖೀ ಫ‌ಬಾವೋ ಅವರಿಗೆ ಪ್ರಮುಖ ಸ್ಥಾನ ನೀಡಲಾಗಿದೆ.

ಗಾಲ್ವಾನ್‌ ಘರ್ಷಣೆ: ಮೃತಪಟ್ಟದ್ದು 42 ಚೀನೀ ಸೈನಿಕರು! :

ಭಾರತ-ಚೀನ ನಡುವೆ 2020ರ ಜೂ. 15ರಂದು ನಡೆದ ಗಾಲ್ವಾನ್‌ ಘರ್ಷಣೆಯಲ್ಲಿ “ನಮ್ಮ ಸೈನಿಕರು ಮೃತಪಟ್ಟಿಲ್ಲ’ ಎಂಬ ಚೀನದ ಹೇಳಿಕೆ ಸುಳ್ಳಿನ ಕಂತೆ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಅಂದು ಚೀನದ ಕನಿಷ್ಠ 38 ಸೈನಿಕರು ಗಾಲ್ವಾನ್‌ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಪತ್ರಿಕೆ “ದಿ ಕ್ಲ್ಯಾಕ್ಸನ್‌’ ತನಿಖಾ ವರದಿ ಬಹಿರಂಗಪಡಿಸಿದೆ.

ಗಾಲ್ವಾನ್‌ ಘರ್ಷಣೆ ಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದರೆ ಚೀನ ತನ್ನ ಕಡೆ ಸಾವು-ನೋವು ಸಂಭವಿಸಿಲ್ಲ ಎಂದಿತ್ತು. 2021ರ ಫೆಬ್ರವರಿಯಲ್ಲಿ ನಾಲ್ವರು ಸೈನಿಕರಿಗೆ ಬೀಜಿಂಗ್‌ ಮರಣೋತ್ತರ ಪದಕ ಘೋಷಿದಾಗ ಚೀನೀ ಸೈನಿಕರು ಮೃತಪಟ್ಟಿದ್ದು ನಿಜ ಎಂಬುದು ಜಗಜ್ಜಾಹೀರಾಗಿತ್ತು. ಈಗ ಚೀನದ ಸಾಮಾಜಿಕ ಜಾಲತಾಣಗಳ ಸಂಶೋಧಕರ ತಂಡ ನೀಡಿದ ವರದಿ, ಚೀನೀ ನಾಗರಿಕರಿಂದ ಪಡೆದ ಮಾಹಿತಿ, ಚೀನೀ ಆಡಳಿತವು ಅಳಿಸಿರುವ ಮಾಧ್ಯಮ  ವರದಿಗಳ ಆಧಾರದಲ್ಲಿ “ದಿ ಕ್ಲಾéಕ್ಸನ್‌’ ಪತ್ರಿಕೆ ತನಿಖಾ ವರದಿ ಪ್ರಕಟಿಸಿದೆ. ಅದರಲ್ಲಿ ಗಾಲ್ವಾನ್‌ ಘರ್ಷಣೆ ನಡೆದಂದು ನದಿಯನ್ನು ದಾಟಿ ವಾಪಸ್‌ ಹೋಗುವ ಪ್ರಯತ್ನದಲ್ಲಿ 38 ಚೀನೀ ಸೈನಿಕರು ಮಡಿದಿರುವುದನ್ನು ಉಲ್ಲೇಖೀಸಲಾಗಿದೆ.

ಅಂದು ನಡೆದದ್ದೇನು? :

ಜೂ. 15ರ ರಾತ್ರಿ ಚೀನದ ಒತ್ತುವರಿಯನ್ನು ತೆರವು ಮಾಡಲು ಭಾರತೀಯ ಯೋಧರು ಗಾಲ್ವಾನ್‌ ಕಣಿವೆಗೆ ಧಾವಿ ಸಿದ್ದರು. ಅಲ್ಲಿದ್ದ 150ರಷ್ಟು ಚೀನೀ ಸೈನಿಕರು ಏಕಾಏಕಿ ಭಾರತೀಯ ಯೋಧರೊಂದಿಗೆ ಕೈ ಕೈ ಮಿಲಾಯಿಸಿದ್ದರು. ನಾಲ್ವರು ಚೀನೀ ಸೈನಿಕರು ಮೃತಪಟ್ಟ ಬಳಿಕ ಪಿಎಲ್‌ಎಯ ಇತರ ಸೈನಿಕರು ಹೆದರಿ ಹಿಮ್ಮೆಟ್ಟಲಾರಂಭಿಸಿದರು. ಕಡುಕತ್ತಲಲ್ಲಿ ಹಿಮಾವೃತ ಗಾಲ್ವಾನ್‌ ನದಿಗೆ ಹಾರಿ ತಪ್ಪಿಸಿ  ಕೊಳ್ಳುವ ಯತ್ನದಲ್ಲಿ 38 ಮಂದಿ ಕೊಚ್ಚಿ ಹೋದರು ಎಂದು ತನಿಖಾ ವರದಿ ಹೇಳಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.