ಯಾವುದೇ ಒತ್ತಡದಿಂದ ಪೈಲಟ್ ಬಿಡುಗಡೆ ಮಾಡಿದ್ದಲ್ಲ : ಪಾಕ್ ಸಚಿವ
Team Udayavani, Mar 2, 2019, 10:13 AM IST
ಹೊಸದಿಲ್ಲಿ : ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸುವಲ್ಲಿ ಪಾಕಿಸ್ಥಾನದ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದು ಪಾಕ್ ವಿದೇಶ ಸಚಿವ ಶಾ ಮಹಮೂದ್ ಕುರೇಶಿ ಹೇಳಿದ್ದಾರೆ.
ಬಿಬಿಸಿ ಉರ್ದು ಗೆ ನೀಡಿದ ಸಂದರ್ಶನದಲ್ಲಿ ಕುರೇಶಿ ಅವರು, “ನಾವು ಭಾರತೀಯರ ನೋವನ್ನು ಇನ್ನಷ್ಟು ಹೆಚ್ಚಿಸಲು ಬಯಸುವುದಿಲ್ಲ ಎಂಬುದನ್ನು ತಿಳಿಸಲಿಕ್ಕಾಗಿ ನಮ್ಮ ಸೆರೆಯಲ್ಲಿದ್ದ ಅವರ (ಭಾರತೀಯ) ಪೈಲಟ್ ನನ್ನು ಬಿಡುಗಡೆ ಗೊಳಿಸಲು ನಿರ್ಧರಿಸಿದೆವು. ನಮಗೆ ಸಂಘರ್ಷಕ್ಕಿಂತ ಶಾಂತಿ ಮುಖ್ಯ ಎಂದೆನಿಸಿತು. ಭಾರತೀಯರ ದುರಿತ ಹೆಚ್ಚಿಸುವ ಯಾವುದೇ ಇರಾದೆ ನಮಗೆ ಇರಲಿಲ್ಲ; ಪರಿಸ್ಥಿತಿ ಉಭಯ ದೇಶಗಳ ಕೈಮೀರದಿರಲೆಂಬ ಆಶಯದಲ್ಲಿ ನಾವು ಭಾರತೀಯ ಪೈಲಟ್ ನನ್ನು ಬಿಡುಗಡೆ ಗೊಳಿಸಿದೆವು’ ಎಂದು ಹೇಳಿದರು.
ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ಥಾನ ತನ್ನ ಸೆರೆಯಿಂದ ಬಿಡುಗಡೆಗೊಳಿಸಿದ ಒಂದು ದಿನದ ತರುವಾಯ ಪಾಕ್ ವಿದೇಶ ಸಚಿವ ಕುರೇಶಿ ಈ ಮಾತನ್ನು ಹೇಳುತ್ತಿರುವುದು ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತಾಗಿದೆ.
ಇಡಿಯ ವಿಶ್ವಕ್ಕೇ ತಿಳಿದಿರುವ ಪ್ರಕಾರ ಪಾಕಿಸ್ಥಾನಕ್ಕೆ ಜಿನೇವಾ ಒಪ್ಪಂದದ ಪ್ರಕಾರ ಭಾರತೀಯ ಪೈಲಟ್ನನ್ನು ಬಿಡುಗಡೆ ಮಾಡಲೇ ಬೇಕಾದ ಬದ್ಧತೆ ಮತ್ತು ಒತ್ತಡ ಇತ್ತು. ಮೇಲಾಗಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಸೌದಿ ಅರೇಬಿಯ ಮುಂತಾದ ದೇಶಗಳು ಪಾಕಿಸ್ಥಾನದ ಮೇಳೆ ಒತ್ತಡ ಹೇರಿ ಭಾರತೀಯ ಪೈಲಟ್ನನ್ನು ಬಿಡುಗಡೆ ಮಾಡಲೇಬೇಕೆಂದು ತಾಕೀತು ಮಾಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್