ರೈತರಿಗಾಗಿ ‘ಕಿಸಾನ್‌ ರೈಲು’ ಇಂದು ಮೊದಲ ಸಂಚಾರ


Team Udayavani, Aug 7, 2020, 8:30 AM IST

Train

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ದೇಶದಲ್ಲಿ ಮೊದಲ ಬಾರಿಗೆ “ಕಿಸಾನ್‌ ರೈಲು’ ಇಂದು ತನ್ನ ಮೊದಲ ಸೇವೆಯನ್ನು ಆರಂಭಿಸಲಿದೆ.

2020ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರೈತರಿಗಾಗಿ ಕಿಸಾನ್‌ ರೈಲುಗಳನ್ನು ಜಾರಿಗೆ ತರುವ ಬಗ್ಗೆ ಉಲ್ಲೇಖೀಸಿದ್ದರು.

ಇದನ್ನು ಆಗಸ್ಟ್‌ 7ರಿಂದ ಅಂದರೆ ಇಂದಿನಿಂದ ಭಾರತೀಯ ರೈಲ್ವೇ ಪ್ರಾರಂಭಿಸಲಿದೆ.

ಮೊದಲ ಪ್ರಯಾಣ
ತರಕಾರಿಗಳು ಮತ್ತು ಹಣ್ಣುಗಳನ್ನು ಹೊತ್ತ ಯೋಜನೆಯ ಮೊದಲ ರೈಲು ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಇಂದು ಪ್ರಯಾಣಿಸಲಿದೆ. ಆಗಸ್ಟ್‌ 7ರಂದು ಬೆಳಗ್ಗೆ 11 ಗಂಟೆಗೆ ಹೊರಡಲಿದ್ದು, ವಾರಕ್ಕೊಮ್ಮೆ ಓಡಾಡಲಿದೆ. ದೇಶದ ಇತರ ಕಡೆಗಳಲ್ಲಿ ಮುಂಬರುವ ದಿನಗಳಲ್ಲಿ ವಿಸ್ತರನೆಗೊಳ್ಳುವ ಸಾಧ್ಯತೆ ಇದೆ.

ಏನಿದರ ಉದ್ದೇಶ?
ಬೇಗನೇ ನಾಶಗೊಳ್ಳುವ ಅಥವಾ ಪೆರಿಶೆಬಲ್‌ ಕೃಷಿ ಬೆಳೆಗಳನ್ನು ಸಾಗಿಸಲು ಇದನ್ನು ಬಳಸಲಾಗುತ್ತದೆ. ಕಿಸಾನ್‌ ರೈಲಿನ ಮೂಲಕ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸುಲಭವಾಗಿ ಸಾಗಿಸುವುದರ ಮೂಲಕ ಬೆಳೆದ ಬೆಳೆಗೆ ನ್ಯಾಯ ಒದಗಬೇಕು ಎಂಬುದು ಇದರ ಆಶಯವಾಗಿದೆ. ಆಯ್ದ ರೈಲುಗಳಲ್ಲಿ ಶೀತ ಘಟಕದ ವ್ಯವಸ್ಥೆ ಕಲ್ಪಿಸಿ, ಅಲ್ಲಿ ರೈತರ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ರವಾನಿಸಲಾಗುತ್ತದೆ.

ಸಂಜೆಯ ವೇಳೆಗೆ ರೈಲು ದಾನಾಪುರ
ಈ ರೈಲು ಮರುದಿನ ಸಂಜೆ 6.45ಕ್ಕೆ ದಾನಾಪುರ ತಲುಪಲಿದೆ. ಅಮದಹಾಗೆ ಇದು ಇತರ ರೈಲಿನಂತೆ ಬೇಗನೇ ತನ್ನ ಗುರಿಯನ್ನು ಮುಟುವುದಿಲ್ಲ. ಹಲವು ನಿಲ್ದಾಣಗಳಲ್ಲಿ ಬೆಳೆಗಳನ್ನು ಇಳಿಸಿ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ಮಹಾರಾಷ್ಟ್ರದ ದೇವಲಾಳಿಯಿಂದ ದಾನಾಪುರ ತಲುಪುವ ರೈಲು 1,519 ಕಿ.ಮೀ. ಸಂಚರಿಸಲು 31.45 ಗಂಟೆಗಳನ್ನು ತೆಗೆದುಕೊಳ್ಳಲಿದೆ.

ಇದು ತಾಜಾ ತರಕಾರಿ ಬೆಳೆಯುವ ಪ್ರದೇಶ
ಕೇಂದ್ರ ರೈಲ್ವೇಯ ಭೂಸಾವಲ್‌ ವಿಭಾಗವು ಮುಖ್ಯವಾಗಿ ಕೃಷಿ ಆಧಾರಿತ ಪ್ರದೇಶವಾಗಿದೆ. ನಾಸಿಕ್‌ ಮತ್ತು ಸುತ್ತಮುತ್ತಲಿನ ಪ್ರದೇಶ ಅಪಾರ ಪ್ರಮಾಣದ ತಾಜಾ ತರಕಾರಿಗಳು, ಹಣ್ಣುಗಳು, ಹೂವುಗಳು ಸೇರಿದಂತೆ ಕಡಿಮೆ ಬಾಳಿಕೆಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಬೇಗನೇ ಹಾಳಾಗುವ ವಸ್ತುಗಳನ್ನು ಮುಖ್ಯವಾಗಿ ಪಾಟ್ನಾ, ಅಲಹಾಬಾದ್‌, ಕಾಟ್ನಿ, ಸತ್ನಾ ಮತ್ತು ಇತರ ಪ್ರದೇಶಗಳಿಗೆ ಸಾಗಿಸಲಾಗುತ್ತದೆ.

ಎಲೆಲ್ಲಿ ಓಡಾಡಲಿದೆ
ಕಿಸಾನ್‌ ರೈಲು ನಾಸಿಕ್‌ ರಸ್ತೆ, ಮನ್ಮಾದ್‌, ಜಲ್ಗಾಂವ್‌, ಭೂಸಾವಲ…, ಬುರ್ಹಾನ್ಪುರ್‌, ಖಂಡವಾ, ಇಟಾರ್ಸಿ, ಜಬಲ್ಪುರ, ಸತ್ನಾ, ಕಾಟ್ನಿ, ಮಾಣಿಕು³ರ್‌, ಪ್ರಯಾಗ್‌ ರಾಜ್‌ ಚಿಯೋಕಿ, ಪಂ. ದೀನ್‌ದಯಾಲ್‌ ಉಪಾಧ್ಯಾಯ ನಗರ ಮತ್ತು ಬಕ್ಸಾರ್‌.

ಮಮತಾ ಪ್ರಸ್ತಾವಿಸಿದ್ದರು
ಹಾಗೆ ನೋಡಿದರೆ ಇದು ಯುಪಿಎ ಸರಕಾರದ ಅವಧಿಯ ಕನಸು. ಹಾಳಾಗುವ ಕೃಷಿ ಉತ್ಪನ್ನಗಳನ್ನು ಸಾಗಿಸಲು ಶೈತ್ಯೀಕರಿಸಿದ ಪಾರ್ಸೆಲ್‌ ವ್ಯಾನ್‌ಗಳನ್ನು ಬಳಸುವ ಪ್ರಸ್ತಾವವನ್ನು 2009-10ರ ಬಜೆಟ್‌ನಲ್ಲಿ ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರು ಘೋಷಿಸಿದರು. ಆದರೆ ಅದು ಕಾರಣಾಂತರಗಳಿಂದ ಈಡೇರಿರಲಿಲ್ಲ.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.