ಚಳಿಗಾಲಕ್ಕೆ ಖೋ ಕೊಟ್ಟ ಭಾರತ-ಚೀನ ಗಡಿ ಬಿಕ್ಕಟ್ಟು

ವಿಶ್ವದ ಅತ್ಯುನ್ನತ ಯುದ್ಧಭೂಮಿಯಲ್ಲಿ ಈಗ ಟ್ಯಾಂಕ್‌ಗಳ ಗರ್ಜನೆ

Team Udayavani, Sep 28, 2020, 6:26 AM IST

ಚಳಿಗಾಲಕ್ಕೆ ಖೋ ಕೊಟ್ಟ ಭಾರತ-ಚೀನ ಗಡಿ ಬಿಕ್ಕಟ್ಟು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಲಡಾಖ್‌: ಭಾರತ- ಚೀನ ನಡುವಣ ಗಡಿಬಿಕ್ಕಟ್ಟು ಈಗ ಚಳಿಗಾಲಕ್ಕೂ ಖೋ ಕೊಟ್ಟಿದೆ.

ಪೂರ್ವ ಲಡಾಖ್‌ನ ಎಲ್‌ಎಸಿ (ವಾಸ್ತವ ಗಡಿ ನಿಯಂತ್ರಣ ರೇಖೆ)ಯ 14,500 ಅಡಿ ಎತ್ತರದ ವಿಶ್ವದ ಅತ್ಯುನ್ನತ ಯುದ್ಧಭೂಮಿಯಲ್ಲಿ ಈಗ ಯುದ್ಧ ಟ್ಯಾಂಕ್‌ಗಳ ಸದ್ದು ಕೇಳಿಬರುತ್ತಿದೆ.

ಲಡಾಖ್‌ನ ಚುಮಾರ್‌ ಮತ್ತು ದೆಮಾcಕ್‌ ಪ್ರದೇಶ ಗಳಲ್ಲಿ ಭಾರತೀಯ ಸೇನೆಯ ಟಿ-72, ಟಿ-90 ಭೀಷ್ಮ ಟ್ಯಾಂಕ್‌ಗಳು ಗರ್ಜಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ.

ಇವುಗಳೊಂದಿಗೆ ಬಿಎಂಪಿ-2 ಕಾಲಾಳು ಪಡೆ ಯುದ್ಧವಾಹನಗಳನ್ನೂ ಸೇನೆ ನಿಲ್ಲಿಸಿದೆ. ಬಿಎಂಪಿ ಯುದ್ಧ ವಾಹನಗಳು – 40 ಡಿಗ್ರಿ ಸೆ. ತಾಪಮಾನದಲ್ಲೂ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿವೆ.

ಚಳಿಗಾಲದ ಸವಾಲಿಗೆ ಸಿದ್ಧ
ಲಡಾಖ್‌ನ ಚಳಿಗಾಲ ಅತ್ಯಂತ ಕಠಿನ. ತಾಪಮಾನ -35 ಡಿಗ್ರಿ ಸೆ.ಗೆ ಇಳಿಕೆ ಆಗುವುದಷ್ಟೇ ಅಲ್ಲ, ಅತೀ ವೇಗದ ಹಿಮಗಾಳಿಯೂ ಇಲ್ಲಿ ಸೈನಿಕರ ಜೀವ ಅಲ್ಲಾಡಿಸುವಂಥದ್ದು. ಈ ಸವಾಲನ್ನು ಎದುರಿಸಲು ಭಾರತೀಯ ಸೇನೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಚೀನದ ಯಾವುದೇ ದುಸ್ಸಾಹಸವನ್ನು ಹಿಮ್ಮೆಟ್ಟಿಸಲು “ದಿ ಫೈರ್‌ ಆ್ಯಂಡ್‌ ಫ್ಯೂರಿ ಕಾಪ್ಸ್‌ì’ (ಎಫ್ಎಎಫ್ಸಿ) ಭರ್ಜರಿ ತಾಲೀಮು ಆರಂಭಿಸಿದೆ.

ಏನಿದು ಎಫ್ಎಎಫ್ಸಿ?
ಲೇಹ್‌ ಮೂಲದ 14ನೇ ಕಾರ್ಪ್ಸ್ ಅನ್ನು “ದಿ ಫೈರ್‌ ಆ್ಯಂಡ್‌ ಫ್ಯೂರಿ ಕಾರ್ಪ್ಸ್ ಎಂದೇ ಕರೆಯುತ್ತಾರೆ. ಲಡಾಖ್‌ನ ದುರ್ಗಮ ಪ್ರದೇಶದ ಭದ್ರತೆಗಾಗಿ ರಚಿಸಲಾದ ತುಕಡಿ ಇದು. ಯಾಂತ್ರೀಕೃತ ಕಾಲಾಳುಪಡೆ ಇದಾಗಿದ್ದು, ಹಿಮಗಾಳಿಯ ಸವಾಲನ್ನು ಯಶಸ್ವಿಯಾಗಿ ಎದುರಿಸಬಲ್ಲದು. ಎಫ್ಎಎಫ್ಸಿ ಸಿಬಂದಿ ಯುದ್ಧ ಸಾಮಗ್ರಿ, ಆಹಾರ, ರಕ್ಷಾ ಉಡುಪು ಸಹಿತ ಚಳಿಗಾಲಕ್ಕೆ ಅಗತ್ಯವಾದ ಸಕಲ ಸಿದ್ಧತೆ ಮಾಡಿಕೊಂಡಿದೆ. “ಚಳಿಗಾಲದಲ್ಲಿ ದೀರ್ಘಾವಧಿಯವರೆಗೆ ಸವಾಲುಗಳನ್ನು ಎದುರಿಸಲು ತುಕಡಿ ಸಮರ್ಥವಾಗಿದೆ’ ಎಂದು ಮೇ|ಜ| ಅರವಿಂದ್‌ ಕಪೂರ್‌ “ಎಎನ್‌ಐ’ಗೆ ತಿಳಿಸಿದ್ದಾರೆ.

ಲಕ್ಷ ಸೈನಿಕರು!
ಲಡಾಖ್‌ನ ಎಲ್‌ಎಸಿ ಸಮೀಪ ಉಭಯ ರಾಷ್ಟ್ರಗಳು ತಲಾ 50 ಸಾವಿರ ಸೈನಿಕರನ್ನು ನಿಯೋಜಿಸಿವೆ. ಯುದ್ಧ ಟ್ಯಾಂಕ್‌ಗಳಲ್ಲದೆ ಸಮೀಪದ ವಾಯು ನೆಲೆಗಳಲ್ಲಿ ಸಮರ ವಿಮಾನಗಳೂ ಗಸ್ತು ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲೂ ಗಡಿ ಮತ್ತೆ ಉದ್ವಿಗ್ನತೆಯ ದವಡೆಗೆ ಸಿಲುಕಬಹುದು ಎಂದು ರಕ್ಷಣ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಚೀನದ ಸೇನೆ ಕೂಡ ಲಘು ಟಿ-15 ಟ್ಯಾಂಕ್‌ಗಳನ್ನು ಎಲ್‌ಎಸಿ ಸಮೀಪ ನಿಯೋಜಿಸಿ ಪ್ರಚೋದನೆ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಡಾಖ್‌ ಸ್ಕೌಟ್ಸ್‌ ಬಳಗಕ್ಕೆ 131 ಹೊಸ ಯೋಧರು
ಇತ್ತೀಚೆಗಷ್ಟೇ ತರಬೇತಿ ಮುಗಿಸಿದ 131 ಹೊಸ ಯುವ ಯೋಧರು ಲಡಾಖ್‌ ಸ್ಕೌಟ್ಸ್‌ ರೆಜಿಮೆಂಟ್‌ ಬಳಗಕ್ಕೆ ಶನಿವಾರ ಪದಾರ್ಪಣೆ ಮಾಡಿದ್ದಾರೆ. ಇವರೆಲ್ಲರೂ ಸ್ಥಳೀಯ ಯುವಕರಾಗಿದ್ದು, ಲಡಾಖ್‌ನ ದುರ್ಗಮ ಪರ್ವತ, ಕಣಿವೆಗಳ ಇಂಚಿಂಚೂ ಸೂಕ್ಷ್ಮ ಮಾಹಿತಿಗಳನ್ನು ಬಲ್ಲವರು. ಅಷ್ಟೇ ಅಲ್ಲ, ಚಳಿಗಾಲದಲ್ಲಿ ಗಸ್ತು ಹೊಣೆ ಹೊತ್ತು ವಾತಾವರಣದ ಸವಾಲುಗಳನ್ನು ಸರಾಗವಾಗಿ ನಿಭಾಯಿಸಬಲ್ಲರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.