2021ರಲ್ಲಿ ಬಾಹ್ಯಾಕಾಶಕ್ಕೆ ಭಾರತದ ಗಗನಯಾತ್ರಿ
Team Udayavani, Sep 22, 2019, 5:05 AM IST
ಭುವನೇಶ್ವರ: ಚಂದ್ರಯಾನ 2 ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಸಿಗದಿದ್ದರೂ, ಒಟ್ಟು ಯೋಜನೆ ಶೇ. 98ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ. ಚಂದ್ರಯಾನ ಆರ್ಬಿಟರ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಮತ್ತು ನಿಗದಿತ ಪ್ರಯೋಗಗಳನ್ನು ಮಾಡುತ್ತಿದೆ. ಈ ಯೋಜನೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನದ ಉದ್ದೇಶವಿದ್ದವು. ತಂತ್ರಜ್ಞಾನ ಪ್ರದರ್ಶನವು ಬಹುತೇಕ ಪರಿಪೂರ್ಣವಾಗಿದೆ ಎಂದಿದ್ದಾರೆ.
ಈಗ ನಾವು 2020ರಲ್ಲಿ ನಡೆಯಲಿರುವ ಗಗನಯಾನದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಭಾರತದ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಅದಾದ ಬಳಿಕ 2ನೇ ಗಗನಯಾನ ಯೋಜನೆಯನ್ನು ಜುಲೈ 2021ರಲ್ಲಿ ನಡೆಸಲಿದ್ದೇವೆ ಎಂದೂ ಶಿವನ್ ತಿಳಿಸಿದ್ದಾರೆ.