ಹಿಂಸೆ, ಭ್ರಷ್ಟರಿಲ್ಲದ ಭಾರತ ಉದಯಕ್ಕೆ ಬದ್ಧ: ಮೋದಿ


Team Udayavani, Aug 16, 2017, 7:26 AM IST

16-PTI-1.jpg

ಹೊಸದಿಲ್ಲಿ: ಸ್ವಾತಂತ್ರ್ಯೋತ್ಸವದ ದಿನವಾದ ಮಂಗಳವಾರ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನವಭಾರತದ ಕನಸಿಗೆ ನೀರೆರೆದಿದ್ದಾರೆ. 2022ರೊಳಗೆ ನವಭಾರತದ ಉದಯಕ್ಕೆ ಬದ್ಧ ಎಂದು ದೇಶದ ಜನತೆಗೆ ಹೊಸ ಆಶ್ವಾಸನೆಯೊಂದನ್ನು ನೀಡಿದ್ದಾರೆ.

ನವಭಾರತದಲ್ಲಿ “ತಂತ್ರದಿಂದ ಲೋಕ ಅಲ್ಲ, ಲೋಕದಿಂದ ತಂತ್ರ ನಡೆಯಲಿದೆ. ಅಂದರೆ, ಎಲ್ಲ ಪ್ರಗ ತಿಯ ಹಿಂದೆಯೂ ಜನರ ಶಕ್ತಿ ಇರ ಲಿದೆ’. ಅದು ಭ್ರಷ್ಟಾಚಾರ ಮುಕ್ತ, ಹಿಂಸೆಮುಕ್ತ ಭಾರತವಾಗಿರಲಿದ್ದು, ಅಲ್ಲಿ ಎಲ್ಲ ಜಾತಿ, ಧರ್ಮದ ಜನರು ಸಮಾನತೆಯಿಂದ, ಸಾಮರಸ್ಯದಿಂದ ಬದುಕುತ್ತಾರೆ ಎಂದರು.

57 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿವಿಧ ವಿಷಯಗಳ ಕುರಿತು ವ್ಯಕ್ತಪಡಿ ಸಿದ ಅಭಿಪ್ರಾಯಗಳು ಹೀಗಿವೆ.

ನವಭಾರತ ಹೇಗಿರುತ್ತೆ ಗೊತ್ತಾ?
ಹೊಸ ಭಾರತದಲ್ಲಿ ಬಡವರಿಗೆ ಸ್ವಂತ ಸೂರು, ನೀರು, ವಿದ್ಯುತ್‌ ಸಂಪರ್ಕವಿರುತ್ತದೆ. ರೈತರೆಲ್ಲ ಚಿಂತೆ ಮುಕ್ತರಾಗಿರುತ್ತಾರೆ. ಅವರು ಈಗ ಗಳಿಸುತ್ತಿರುವ ಆದಾಯದ ಎರಡು ಪಟ್ಟು ಗಳಿಸುತ್ತಿರು ತ್ತಾರೆ. ಯುವಕರು ಮತ್ತು ಮಹಿಳೆಯರಿಗೆ ತಮ್ಮ ಕನಸುಗಳನ್ನು ಈಡೇರಿಸಲು ಸಾಕಷ್ಟು ಅವಕಾಶಗಳಿರುತ್ತವೆ. ಅಷ್ಟೇ ಅಲ್ಲ. ಭಾರತವು ಭಯೋತ್ಪಾದನೆ, ಹಿಂಸೆ, ಜಾತಿವಾದ, ಕೋಮುವಾದ, ಭ್ರಷ್ಟಾಚಾರದಿಂದ ಮುಕ್ತವಾಗಿರುತ್ತದೆ. ಸ್ವತ್ಛ ಮತ್ತು ಆರೋಗ್ಯವಂತ ದೇಶವಾಗಿರುತ್ತದೆ.

18 ಲಕ್ಷ ಮಂದಿ ಮೇಲೆ ನಿಗಾ
ಐನೂರು ಮತ್ತು ಸಾವಿರ ರೂ. ನೋಟುಗಳ ಅಪಮೌಲ್ಯದ ಬಳಿಕ ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ಬರೋಬ್ಬರಿ 3 ಲಕ್ಷ ಕೋಟಿ ರೂ.ಗಳು ಬಂದಿವೆ. ಆ ಪೈಕಿ 1.75 ಲಕ್ಷ ಕೋಟಿ ಕಪ್ಪುಹಣವು ಬಂದಿದೆ. ಆದಾಯಕ್ಕಿಂತ ಹೆಚ್ಚು ಹಣ ಠೇವಣಿ ಇಟ್ಟಿರುವ 18 ಲಕ್ಷ ಮಂದಿಯ ಮೇಲೆ ನಿಗಾ ಇಡಲಾಗಿದೆ. ಒಟ್ಟಿನಲ್ಲಿ ನೋಟು ಅಪಮೌಲ್ಯವು ಕಪ್ಪುಹಣದ ಉತ್ಪತ್ತಿಗೂ ತಡೆಯೊಡ್ಡಿದೆ. ಅಪಮೌಲ್ಯದ ಪರಿಣಾಮ 3 ಲಕ್ಷ ಶೆಲ್‌ ಕಂಪೆನಿಗಳು ಪತ್ತೆಯಾಗಿವೆ. ಆದಾಯ ತೆರಿಗೆದಾರರ ಸಂಖ್ಯೆ ದುಪ್ಪಟ್ಟಾ ಗಿದೆ. ಕೆಲವೇ ಸಮಯದಲ್ಲಿ ಸರಕಾರವು 800 ಕೋ. ರೂ.ಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ.

ಸಂಕಷ್ಟದ ಸಂದರ್ಭ ದೇಶವೇ ಜತೆಗಿದೆ
ಉತ್ತರಪ್ರದೇಶದ ಸರಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳ ಕುಟುಂಬ ಸದಸ್ಯರ ಜತೆ ಇಡೀ ದೇಶವೇ ಇದೆ. ಅವರಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ಇದೇ ವೇಳೆ ಪ್ರಾಕೃತಿಕ ವಿಕೋಪವೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಥ ಸಂಕಷ್ಟದ ಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವಿರುತ್ತೇವೆ.

ಭಾರತವ ಒಟ್ಟುಗೂಡಿಸಿ
ಭಕ್ತಿಯ ಹೆಸರಲ್ಲಿ ನಡೆಯುವ ಹಿಂಸೆಯನ್ನು ಸಹಿಸಲಾಗದು. ಜಾತಿವಾದ ಮತ್ತು ಕೋಮುವಾದ ಎಂಬುದು ದೇಶಕ್ಕೆ ವಿಷವಿದ್ದಂತೆ.ಅವುಗಳಿಂದ ದೇಶಕ್ಕೆ ಯಾವ ರೀತಿಯಿಂದಲೂ ಒಳ್ಳೆಯದಾಗುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಹೇಗೆ “ಭಾರತ ಬಿಟ್ಟು ತೊಲಗಿ’ (ಭಾರತ್‌ ಛೋಡೋ) ಎಂಬ ಉದ್ಘೋಷವಿತ್ತೋ, ಅದೇ ರೀತಿ ಈಗ “ಭಾರತವ ಒಟ್ಟುಗೂಡಿಸಿ’ (ಭಾರತ್‌ ಜೋಡೋ) ಎಂಬ ಘೋಷಣೆ ಮೊಳಗಬೇಕು. ಇದು ಮಹಾತ್ಮಾ ಗಾಂಧಿ ಹಾಗೂ ಬುದ್ಧ ಹುಟ್ಟಿದ ನಾಡು. ಅಭಿವೃದ್ಧಿಯ ಪಥದಲ್ಲಿ ಎಲ್ಲರೂ ಒಂದಾಗಿ ನಡೆಯಬೇಕು ಎನ್ನುವುದೇ ದೇಶದ ಸಂಸ್ಕೃತಿ.

ಕಾಶ್ಮೀರ ಮತ್ತೆ  ಸ್ವರ್ಗ
ಕಾಶ್ಮೀರ ವಿವಾದವನ್ನು ಬುಲೆಟ್‌ನಿಂದ ಪರಿಹರಿಸಲು ಸಾಧ್ಯವಿಲ್ಲ. ಎಲ್ಲ ಕಾಶ್ಮೀರಿಯರನ್ನು ನಾವು ನಮ್ಮವರೆಂದು ಸ್ವೀಕರಿಸಬೇಕು. ಕಾಶ್ಮೀರಿ ಯುವಕರು ಗನ್‌ಗಳನ್ನು ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ಕೆಲವು ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸಲು ವಿವಿಧ ತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ನಾವು ಕಾಶ್ಮೀರವನ್ನು ಮತ್ತೆ ಭೂಲೋಕದ ಸ್ವರ್ಗವನ್ನಾಗಿ ಮಾರ್ಪಡಿಸಲು ಬದ್ಧರಾಗಿದ್ದೇವೆ. 

ಗಡಿ ರಕ್ಷಣೆಗೆ ದೇಶ ಸಮರ್ಥ
ಸಮುದ್ರದಲ್ಲಾಗಲಿ, ಗಡಿಯಲ್ಲಾಗಲಿ ಎಂತಹ ಸಂದಿಗ್ಧ ಸ್ಥಿತಿಯನ್ನೂ ಎದುರಿಸಲು ಭಾರತವು ಸಮರ್ಥವಾಗಿದೆ. ನಮ್ಮ ಸರಕಾರಕ್ಕೆ ದೇಶದ ಭದ್ರತೆಯೇ ಆದ್ಯತೆ. ಕಳೆದ ವರ್ಷದ ಸರ್ಜಿಕಲ್‌ ದಾಳಿಯು ಇಡೀ ಜಗತ್ತಿಗೇ ಭಾರತದ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. ನಮ್ಮ ಸೇನೆ, ನಮ್ಮ ವೀರರು, ಸಮವಸ್ತ್ರ  ಧರಿಸಿರುವ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿದ್ದಾರೆ. ಎಡಪಂಥೀಯ ಪ್ರತ್ಯೇಕತಾವಾದ, ಭಯೋತ್ಪಾದನೆ, ಒಳನುಸುಳುವಿಕೆ ಹಾಗೂ ದೇಶದೊಳಗೆ ಸಮಸ್ಯೆ ತಂದೊಡ್ಡುವವರನ್ನು ಸದೆಬಡಿಯಲು ಸಮವಸ್ತ್ರಧಾರಿ ಯೋಧರು ಸನ್ನದ್ಧರಾಗಿದ್ದಾರೆ. 

ಜಿಎಸ್‌ಟಿ: ದಕ್ಷತೆ ಹೆಚ್ಚಳ
ಜಿಎಸ್‌ಟಿಯಿಂದಾಗಿ ಅಂತಾರಾಜ್ಯ ಚೆಕ್‌ ಪೋಸ್ಟ್‌ಗಳು ಇಲ್ಲವಾಗಿದ್ದು, ಸರಕುಗಳ ಸಾಗಣೆಗೆ ಬೇಕಿದ್ದ ಸಮಯವನ್ನು ಶೇ.30ರಷ್ಟು ಕಡಿಮೆ ಮಾಡಿದೆ. ಇದರಿಂದ ಕೋಟ್ಯಂತರ ರೂ. ಉಳಿತಾಯವಾಗಿದೆ. ಜುಲೈಯಿಂದ ಇದರ ಸುಗಮ ಜಾರಿಯು ವಹಿವಾಟುಗಳ ದಕ್ಷತೆ ಹೆಚ್ಚಿಸಿದೆ. ಕೇಂದ್ರ-ರಾಜ್ಯಗಳ ನಡುವೆ ಸಹಕಾರವಿದ್ದರೆ ಎಂಥದ್ದನ್ನು ಬೇಕಿದ್ದರೂ ಸಾಧಿಸಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ.

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.