ಸರ್ಜಿಕಲ್ ದಾಳಿಗೆ ನೆರವಾಗಿದ್ದ ಉಪಗ್ರಹ ಭೂಮಿಗೆ ವಾಪಸ್
ಭಾರತದ ಮೊದಲ ಬೇಹುಗಾರಿಕಾ ಉಪಗ್ರಹ ರಿಸ್ಯಾಟ್-2
Team Udayavani, Nov 8, 2022, 7:10 AM IST
ನವದೆಹಲಿ: ಭಾರತದ ಮೊದಲ ಗೂಢಚಾರ ಉಪಗ್ರಹ “ರಿಸ್ಯಾಟ್-2′ ಭೂಮಿಗೆ ಮರಳಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಗಡಿಗಳು ಮತ್ತು ಸಮುದ್ರ ತೀರಗಳ ಸುರಕ್ಷತೆಗಾಗಿ ಕಣ್ಣಿಟ್ಟಿದ್ದ ಇಸ್ರೋದ ಈ ಉಪಗ್ರಹವು ತನ್ನ ಕೆಲಸ ಪೂರೈಸಿ ಅ.30ರಂದು ಜಕಾರ್ತದ ಬಳಿ ಹಿಂದೂ ಮಹಾಸಾಗರಕ್ಕೆ ಬಂದು ಬಿದ್ದಿದೆ.
ರಿಸ್ಯಾಟ್-2 ಕಳುಹಿಸಿದ ಚಿತ್ರಗಳ ಆಧಾರದ ಮೇಲೆ 2016ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಭಾರತೀಯ ಸೇನೆ ಸರ್ಜಿಕಲ್ ದಾಳಿ ಕೈಗೊಂಡಿತ್ತು ಹಾಗೂ 2019ರ ಫೆಬ್ರವರಿಯಲ್ಲಿ ಬಾಲಕೋಟ್ನ ಉಗ್ರ ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು.
2008ರ ಮುಂಬೈ ದಾಳಿ ನಂತರ ಎಚ್ಚೆತ್ತ ಅಂದಿನ ಸರ್ಕಾರ, ಸ್ವಲ್ಪ ದಿನಗಳಲ್ಲಿ ಗೂಢಚಾರ ಉಪಗ್ರಹ “ರಿಸ್ಯಾಟ್-2′ ಉಡಾಯಿಸಿತು.
ಆರಂಭದಲ್ಲಿ 4 ವರ್ಷಗಳಿಗೆ “ರಿಸ್ಯಾಟ್-2′ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿತ್ತು. ಉಡಾವಣೆ ವೇಳೆ ಅದು 30 ಕೆಜಿ ಇಂಧನವನ್ನು ಹೊತ್ತೂಯ್ದಿತು. ಆದರೆ ತನ್ನ ಜೀವಿತಾವಧಿಗೂ ಮೀರಿ 13.5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಈ ಉಪಗ್ರಹವು, ಉಗ್ರರ ಒಳನುಸುಳುವಿಕೆ ತಡೆಗಟ್ಟುವಿಕೆ ಮತ್ತು ಅನೇಕ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿತು.
ಹಗಲು ಮತ್ತು ರಾತ್ರಿ ಸೇರಿದಂತೆ ಎಲ್ಲಾ ಹವಾಮಾನಗಳಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಈ ಉಪಗ್ರಹವನ್ನು ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರದಲ್ಲಿ ಭದ್ರತೆಗೆ ಬೆದರಿಕೆಯೊಡ್ಡುವ ಹಡುಗುಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ