ಪಿಒಕೆಯಲ್ಲಿ ಉಗ್ರ ಅಟಾಟೋಪ
ಲೆ| ಜ| ಬಗ್ಗವಳ್ಳಿ ಸೋಮಶೇಖರ ರಾಜು ಅಭಿಮತ
Team Udayavani, Jun 1, 2020, 6:45 AM IST
ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ವಲಯಾದ್ಯಂತ ಉಗ್ರರ ಶಿಬಿರಗಳು, ಭಯೋತ್ಪಾದಕರ 15ಕ್ಕೂ ಹೆಚ್ಚು ಲಾಂಚ್ಪ್ಯಾಡ್ಗಳೇ ತುಂಬಿವೆ. ಈ ಬೇಸಗೆಯಲ್ಲಿ ಉಗ್ರರ ನುಸುಳುವಿಕೆ ಹೆಚ್ಚುವ ಸಾಧ್ಯತೆ ಇದ್ದು, ಅವರನ್ನು ಬಗ್ಗುಬಡಿಯಲು ಸೇನೆ ಸಜ್ಜಾಗಿದೆ ಎಂದು ಭಾರತೀಯ ಸೇನೆಯಲ್ಲಿ ಉನ್ನತ ಸ್ಥಾನದಲ್ಲಿರುವ ಕನ್ನಡಿಗ ಲೆ| ಜ| ಬಗ್ಗವಳ್ಳಿ ಸೋಮಶೇಖರ ರಾಜು ಹೇಳಿದ್ದಾರೆ.
ಕಾಶ್ಮೀರದ ಒಳನಾಡಿನಲ್ಲಿ ಉಗ್ರರ ನಿರ್ಮೂಲನೆ ಯಶಸ್ವಿಯಾಗಿದೆ. ಕಾಶ್ಮೀರದ ಜನರು ಶಾಂತಿ ಮತ್ತು ಸುಧಾರಿತ ಬದುಕನ್ನು ಅನುಭವಿಸುತ್ತಿದ್ದಾರೆ ಎಂದು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು ವಿವರಿಸಿದ್ದಾರೆ.
ಭಾರತ ಸುಮ್ಮನೆ ಕುಳಿತಿಲ್ಲ
ಲಡಾಖ್ ಬುಡದಲ್ಲಿ ಗಟ್ಟಿ ಮಿಲಿಟರಿ ನೆಲೆ ಸ್ಥಾಪನೆಗೆ ಕೇಂದ್ರ ಸರಕಾರ ಒತ್ತುಕೊಟ್ಟಿದೆ. ಸಮರ್ಥ ಯೋಧರನ್ನು ಪೂರ್ವ ಲಡಾಖ್ನಲ್ಲಿ ನಿಯೋಜಿಸಲಾಗಿದೆ. ಚೀನದ ಸೈನಿಕರಿಗೆ ಒಂದು ಹೆಜ್ಜೆ ಮುಂದೆ ಬರಲೂ ಸಾಧ್ಯವಾಗಿಲ್ಲ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಚೀನ ಹಸಿ ಸುಳ್ಳು
ಅತ್ತ ಪಾಕಿಸ್ಥಾನ ಉಗ್ರರ ಮೂಲಕ ತನ್ನ ಅಟಾಟೋಪ ಮುಂದುವರಿಸಿದ್ದರೆ, ಇತ್ತ ಚೀನವು ಪೂರ್ವ ಲಡಾಖ್ ಗಡಿ ಯಿಂದ ಯೋಧ ರನ್ನು ವಾಪಸ್ ಕರೆಸಿಕೊಂಡೇ ಇಲ್ಲ. ಭಾರತೀಯ ಗಡಿಯಿಂದ ಒಂದೆರಡು ತಾಸು ಪ್ರಯಾಣದಷ್ಟು ದೂರದಲ್ಲಿ ಚೀನವು ಕ್ಷಿಪ್ರವಾಗಿ ವ್ಯವಸ್ಥಿತ ಏರ್ಪೋರ್ಟ್, ಮಿಲಿಟರಿ ನೆಲೆಗಳನ್ನು ಸ್ಥಾಪಿಸಿದೆ. ಶಸ್ತ್ರಸಜ್ಜಿತ ಘಟಕಗಳನ್ನು ತೆರೆದಿದೆ. 5 ಸಾವಿರ ಸೈನಿಕರನ್ನು ಗಲ್ವಾನ್ ನದಿಯ ತೀರದಲ್ಲಿ ಶಾಶ್ವತವಾಗಿ ಸ್ಥಾಪಿಸಲು ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ.
ರಸ್ತೆ ಮತ್ತು ಸರೋವರದ ಜಲಮಾರ್ಗ ಬಳಸಿ ಕೊಂಡು, ನಾಲ್ಕು ಆಯಕಟ್ಟಿನ ಪ್ರದೇಶಗಳಲ್ಲಿ ಚೀನೀ ಸೈನಿಕರು ಜಮಾಯಿಸಿದ್ದಾರೆ. ಈ 26 ದಿನಗಳಲ್ಲಿ ಹಲವು ಬಾರಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ