ಇಂಡಿಗೋ ಏರ್ ಲೈನ್ಸ್ ಬಸ್ಸಿನಲ್ಲಿ ಬೆಂಕಿ, ಯಾರಿಗೂ ಗಾಯ ಇಲ್ಲ
Team Udayavani, Dec 29, 2017, 7:03 PM IST
ಹೊಸದಿಲ್ಲಿ : ಇಂಡಿಗೋ ಏರ್ ಲೈನ್ಸ್ನ ಪ್ರಯಾಣಿಕರ ಬಸ್ಸೊಂದರಲ್ಲಿ ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಟಾರ್ಮ್ಯಾಕ್ನಲ್ಲಿ ಪ್ರಯಾಣಿಕರನ್ನು ಇಳಿಸಿದ ಬಳಿಕ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿತು.ಹಾಗಾಗಿ ಯಾರಿಗೂ ಯಾವುದೇ ಅಪಾಯವಾಗಲಿಲ್ಲ. ಹಾಗಿದ್ದರೂ ಈ ಘಟನೆಯ ಬಗ್ಗೆ ಇಂಡಿಗೋ ಏರ್ ಲೈನ್ಸ್ ತನ್ನ ಅಧಿಕೃತ ಹೇಳಿಕೆಯನ್ನು ಈ ತನಕವೂ ಪ್ರಕಟಿಸಿಲ್ಲ.
ಬೆಂಕಿ ಅವಘಡದಿಂದಾಗಿ ಬಸ್ಸಿನ ಎದುರು ಭಾಗವು ತೀವ್ರವಾಗಿ ಹಾನಿಗೊಂಡಿತು. ಬಸ್ಸಿನ ವಿಂಡ್ ಸ್ಕ್ರೀನ್ ಸಂಪೂರ್ಣವಾಗಿ ಧ್ವಂಸವಾಯಿತು. ಹಾಗೆಯೇ ಬಸ್ ಡ್ರೈವರ್ ಕುಳಿತುಕೊಳ್ಳುವಲ್ಲಿನ ಸ್ಥಳ ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಯಿತು. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಾಗಿದೆ.
ಎರಡು ದಿನಗಳ ಹಿಂದಷ್ಟೇ ದಿಲ್ಲಿಯ ಇಂದಿರಾ ಗಾಂಧಿ ಇಂಟರ್ನ್ಯಾಶನಲ್ ಏರ್ಪೋರ್ಟ್ನಲ್ಲಿ 173 ಮಂದಿ ಪ್ರಯಾಣಿಕರನ್ನು ಒಳಗೊಂಡ ಇಂಡಿಗೋ ವಿಮಾನದ ಇಂಧನ ಟ್ಯಾಂಕ್ ಓವರ್ ಫ್ಲೋ ಆದ ಕಾರಣ ಅದರ ಟೇಕಾಫ್ ಅನ್ನು ತತ್ಕ್ಷಣವೇ ಕೈಬಿಡಬೇಕಾದ ಸ್ಥಿತಿ ಒದಗಿತ್ತು.
ವಿಮಾನವು ಆಗಸಕ್ಕೆ ನೆಗೆಯುವ ಮುನ್ನ ರನ್ವೇಯಲ್ಲಿ ಸಾಗುತ್ತಿದ್ದ ವೇಳೆ ಅದರ ಇಂಧನ ಟ್ಯಾಂಕ್ನಿಂದ ಇಂಧನ ಹೊರ ಸುರಿಯುತ್ತಿದ್ದುದು ಕಂಡು ಬಂತೆಂದು ಕೆಲವು ಪ್ರಯಾಣಿಕರು ಹೇಳಿದ್ದರು. ಆದರೆ ಇಂಡಿಗೋ ಆ ರೀತಿಯ ಯಾವುದೇ ಇಂಧನ ಸೋರಿಕೆ ಆದದ್ದಿಲ್ಲ ಎಂದು ಸಮಜಾಯಿಷಿಕೆ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್