ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ


Team Udayavani, Oct 28, 2020, 6:00 AM IST

ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ

ಹೊಸದಿಲ್ಲಿ: ರಾಜನಾಥ್‌ ಸಿಂಗ್‌ ಮತ್ತು ಮೈಕ್‌ ಪೊಂಪ್ಯೋ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹೊಸದಿಲ್ಲಿ: ನೆರೆಯ ಚೀನ “ಹೊರೆ’ಯಾಗಿರುವಂತೆಯೇ ಭಾರತ ಮತ್ತು ಅಮೆರಿಕ ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಲ್ಲಿ ಬೇಸಿಕ್‌ ಎಕ್ಸ್‌ಚೇಂಜ್‌ ಆ್ಯಂಡ್‌ ಕೋ-ಆಪ ರೇಶನ್‌ ಅಗ್ರಿಮೆಂಟ್‌ (ಬಿಇಸಿಎ) ಕೂಡ ಸೇರಿದೆ.

ಚೀನವು ಭಾರತಕ್ಕಷ್ಟೇ ಅಲ್ಲ, ಅಮೆರಿಕಕ್ಕೂ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿರುವುದು ಮಹತ್ವದ ಬೆಳವಣಿಗೆ. ಮೂರನೇ ಆವೃತ್ತಿಯ 2+2 ಮಾತುಕತೆಗಾಗಿ ಭಾರತಕ್ಕೆ ಬಂದಿರುವ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪ್ಯೋ ಮತ್ತು ರಕ್ಷಣ ಸಚಿವ ಮಾರ್ಕ್‌ ಟಿ. ಇಸ್ಪಾರ್‌ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ವಿಶೇಷವೆಂದರೆ ಈ ಒಪ್ಪಂದದಿಂದ ನೆರೆ ರಾಷ್ಟ್ರಗಳ ಮಿಲಿಟರಿ ಮತ್ತು ಮಿಲಿಟೆಂಟ್‌ ಗುರಿಗಳನ್ನು ನಿಖರವಾಗಿ ಪತ್ತೆಹಚ್ಚಬಹುದು.

ಬಿಇಸಿಎ ಲಾಭವೇನು?
ಬೇಸಿಕ್‌ ಎಕ್ಸ್‌ಚೇಂಜ್‌ ಆ್ಯಂಡ್‌ ಕೋ-ಆಪರೇಶನ್‌ ಅಗ್ರಿಮೆಂಟ್‌ನಿಂದಾಗಿ ಎರಡೂ ದೇಶಗಳಿಗೆ ಪ್ರಯೋಜನವಿದೆ. ಇದರಡಿ ಭಾರತ ಮತ್ತು ಅಮೆರಿಕ ನಕಾಶೆಗಳು, ವಾಣಿಜ್ಯ ಮತ್ತು ಇತರ ಅನ್‌ಕ್ಲಾಸಿಫೈಡ್‌ (ಗೌಪ್ಯ) ಚಿತ್ರಗಳು, ಜಿಯೋಡೇಟಿಕ್‌, ಜಿಯೋಫಿಸಿಕಲ್‌, ಜಿಯೋಮ್ಯಾಗ್ನೆಟಿಕ್‌ ಮತ್ತು ಗ್ರ್ಯಾವಿಟಿ ಡಾಟಾಗಳನ್ನೂ ಹಂಚಿಕೊಳ್ಳಲಿವೆ.

ನಿಖರವಾಗಲಿದೆ ಕ್ಷಿಪಣಿ ಗುರಿ!
ಚೀನ, ಪಾಕ್‌ ಭಾರತಕ್ಕೆ ತಲೆನೋವಾಗಿರುವ ಸಂದರ್ಭದಲ್ಲೇ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ. ಭಾರತದ ಕ್ಷಿಪಣಿ ವ್ಯವಸ್ಥೆಗೆ ಅತ್ಯಂತ ನಿಖರವಾಗಿ ಟಾರ್ಗೆಟ್‌ ಗುರುತಿಸಬಲ್ಲ ವ್ಯವಸ್ಥೆಯೊಂದು ಬೇಕಾಗಿದೆ. ಅಮೆರಿಕದ ನಿಖರ ಸ್ಯಾಟಲೈಟ್‌ ದತ್ತಾಂಶಗಳು ಸಿಗಲಿರುವುದು ಕ್ಷಿಪಣಿ ವ್ಯವಸ್ಥೆಗೆ ಇನ್ನಷ್ಟು ಬಲ ತುಂಬಿದಂತೆ ಎಂದು ರಕ್ಷಣ ತಜ್ಞರು ಹೇಳಿದ್ದಾರೆ. ಪಾಕ್‌ ಗಡಿಯಲ್ಲಿ ಅಡಗಿರುವ ಉಗ್ರರ ನೆಲೆಗಳನ್ನೂ ಗುರುತಿಸಿ ನೇರವಾಗಿ ದಾಳಿ ಮಾಡಬಲ್ಲ ಶಕ್ತಿಯೂ ಹೆಚ್ಚಾಗಲಿದೆ.

ಬಿಇಸಿಎ ಮುಖ್ಯಾಂಶ
– ಅಮೆರಿಕದ ಅತ್ಯಂತ ನಿಖರವಾದ ಸ್ಯಾಟಲೈಟ್‌ ಮಾಹಿತಿ ಭಾರತಕ್ಕೆ ಲಭ್ಯ
– ಶತ್ರುಗಳ ಮಿಲಿಟರಿ ತಾಣಗಳ ಬಗ್ಗೆ ಕರಾರುವಾಕ್‌ ಮಾಹಿತಿ ಸಿಗಲಿದೆ
– ಕ್ಲಾಸಿಫೈಡ್‌ (ಗೌಪ್ಯ) ಮಾಹಿತಿಹಂಚಿಕೊಳ್ಳಲು ಅವಕಾಶ
– ಮೂರನೇ ದೇಶದೊಂದಿಗೆ ಈ ಮಾಹಿತಿ ಹಂಚಿಕೊಳ್ಳುವಂತಿಲ್ಲ

5 ಒಪ್ಪಂದಗಳಿಗೆ ಸಹಿ
1 ಬೇಸಿಕ್‌ ಎಕ್ಸ್‌ಚೇಂಜ್‌ ಆ್ಯಂಡ್‌ ಕೋ-ಆಪರೇಶನ್‌ ಅಗ್ರಿಮೆಂಟ್‌(ಬಿಇಸಿಎ)
2 ಭೂ ವಿಜ್ಞಾನಗಳ ಬಗೆಗಿನ ತಾಂತ್ರಿಕ ಸಹಕಾರ ಒಪ್ಪಂದ
3 ವಿತ್ತೀಯ ಸಹಕಾರದ ವ್ಯವಸ್ಥೆ ಮೇಲಿನ ನಿರ್ವಹಣ ವಿಸ್ತರಣೆ ಒಪ್ಪಂದ
4 ಅಂಚೆ ಸೇವೆಗಳ ಒಪ್ಪಂದ
5 ಕ್ಯಾನ್ಸರ್‌ ಸಂಶೋಧನೆ, ಆಯುರ್ವೇದ ಸಹಕಾರ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.