ಭಾರತ-ಅಮೆರಿಕ ನಿಕಟ ; ಮಹತ್ವದ 5 ಒಪ್ಪಂದಗಳಿಗೆ ಉಭಯ ದೇಶಗಳ ಸಹಿ
Team Udayavani, Oct 28, 2020, 6:00 AM IST
ಹೊಸದಿಲ್ಲಿ: ರಾಜನಾಥ್ ಸಿಂಗ್ ಮತ್ತು ಮೈಕ್ ಪೊಂಪ್ಯೋ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹೊಸದಿಲ್ಲಿ: ನೆರೆಯ ಚೀನ “ಹೊರೆ’ಯಾಗಿರುವಂತೆಯೇ ಭಾರತ ಮತ್ತು ಅಮೆರಿಕ ಐದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಲ್ಲಿ ಬೇಸಿಕ್ ಎಕ್ಸ್ಚೇಂಜ್ ಆ್ಯಂಡ್ ಕೋ-ಆಪ ರೇಶನ್ ಅಗ್ರಿಮೆಂಟ್ (ಬಿಇಸಿಎ) ಕೂಡ ಸೇರಿದೆ.
ಚೀನವು ಭಾರತಕ್ಕಷ್ಟೇ ಅಲ್ಲ, ಅಮೆರಿಕಕ್ಕೂ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿರುವುದು ಮಹತ್ವದ ಬೆಳವಣಿಗೆ. ಮೂರನೇ ಆವೃತ್ತಿಯ 2+2 ಮಾತುಕತೆಗಾಗಿ ಭಾರತಕ್ಕೆ ಬಂದಿರುವ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋ ಮತ್ತು ರಕ್ಷಣ ಸಚಿವ ಮಾರ್ಕ್ ಟಿ. ಇಸ್ಪಾರ್ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ವಿಶೇಷವೆಂದರೆ ಈ ಒಪ್ಪಂದದಿಂದ ನೆರೆ ರಾಷ್ಟ್ರಗಳ ಮಿಲಿಟರಿ ಮತ್ತು ಮಿಲಿಟೆಂಟ್ ಗುರಿಗಳನ್ನು ನಿಖರವಾಗಿ ಪತ್ತೆಹಚ್ಚಬಹುದು.
ಬಿಇಸಿಎ ಲಾಭವೇನು?
ಬೇಸಿಕ್ ಎಕ್ಸ್ಚೇಂಜ್ ಆ್ಯಂಡ್ ಕೋ-ಆಪರೇಶನ್ ಅಗ್ರಿಮೆಂಟ್ನಿಂದಾಗಿ ಎರಡೂ ದೇಶಗಳಿಗೆ ಪ್ರಯೋಜನವಿದೆ. ಇದರಡಿ ಭಾರತ ಮತ್ತು ಅಮೆರಿಕ ನಕಾಶೆಗಳು, ವಾಣಿಜ್ಯ ಮತ್ತು ಇತರ ಅನ್ಕ್ಲಾಸಿಫೈಡ್ (ಗೌಪ್ಯ) ಚಿತ್ರಗಳು, ಜಿಯೋಡೇಟಿಕ್, ಜಿಯೋಫಿಸಿಕಲ್, ಜಿಯೋಮ್ಯಾಗ್ನೆಟಿಕ್ ಮತ್ತು ಗ್ರ್ಯಾವಿಟಿ ಡಾಟಾಗಳನ್ನೂ ಹಂಚಿಕೊಳ್ಳಲಿವೆ.
ನಿಖರವಾಗಲಿದೆ ಕ್ಷಿಪಣಿ ಗುರಿ!
ಚೀನ, ಪಾಕ್ ಭಾರತಕ್ಕೆ ತಲೆನೋವಾಗಿರುವ ಸಂದರ್ಭದಲ್ಲೇ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವ ಪಡೆದಿದೆ. ಭಾರತದ ಕ್ಷಿಪಣಿ ವ್ಯವಸ್ಥೆಗೆ ಅತ್ಯಂತ ನಿಖರವಾಗಿ ಟಾರ್ಗೆಟ್ ಗುರುತಿಸಬಲ್ಲ ವ್ಯವಸ್ಥೆಯೊಂದು ಬೇಕಾಗಿದೆ. ಅಮೆರಿಕದ ನಿಖರ ಸ್ಯಾಟಲೈಟ್ ದತ್ತಾಂಶಗಳು ಸಿಗಲಿರುವುದು ಕ್ಷಿಪಣಿ ವ್ಯವಸ್ಥೆಗೆ ಇನ್ನಷ್ಟು ಬಲ ತುಂಬಿದಂತೆ ಎಂದು ರಕ್ಷಣ ತಜ್ಞರು ಹೇಳಿದ್ದಾರೆ. ಪಾಕ್ ಗಡಿಯಲ್ಲಿ ಅಡಗಿರುವ ಉಗ್ರರ ನೆಲೆಗಳನ್ನೂ ಗುರುತಿಸಿ ನೇರವಾಗಿ ದಾಳಿ ಮಾಡಬಲ್ಲ ಶಕ್ತಿಯೂ ಹೆಚ್ಚಾಗಲಿದೆ.
ಬಿಇಸಿಎ ಮುಖ್ಯಾಂಶ
– ಅಮೆರಿಕದ ಅತ್ಯಂತ ನಿಖರವಾದ ಸ್ಯಾಟಲೈಟ್ ಮಾಹಿತಿ ಭಾರತಕ್ಕೆ ಲಭ್ಯ
– ಶತ್ರುಗಳ ಮಿಲಿಟರಿ ತಾಣಗಳ ಬಗ್ಗೆ ಕರಾರುವಾಕ್ ಮಾಹಿತಿ ಸಿಗಲಿದೆ
– ಕ್ಲಾಸಿಫೈಡ್ (ಗೌಪ್ಯ) ಮಾಹಿತಿಹಂಚಿಕೊಳ್ಳಲು ಅವಕಾಶ
– ಮೂರನೇ ದೇಶದೊಂದಿಗೆ ಈ ಮಾಹಿತಿ ಹಂಚಿಕೊಳ್ಳುವಂತಿಲ್ಲ
5 ಒಪ್ಪಂದಗಳಿಗೆ ಸಹಿ
1 ಬೇಸಿಕ್ ಎಕ್ಸ್ಚೇಂಜ್ ಆ್ಯಂಡ್ ಕೋ-ಆಪರೇಶನ್ ಅಗ್ರಿಮೆಂಟ್(ಬಿಇಸಿಎ)
2 ಭೂ ವಿಜ್ಞಾನಗಳ ಬಗೆಗಿನ ತಾಂತ್ರಿಕ ಸಹಕಾರ ಒಪ್ಪಂದ
3 ವಿತ್ತೀಯ ಸಹಕಾರದ ವ್ಯವಸ್ಥೆ ಮೇಲಿನ ನಿರ್ವಹಣ ವಿಸ್ತರಣೆ ಒಪ್ಪಂದ
4 ಅಂಚೆ ಸೇವೆಗಳ ಒಪ್ಪಂದ
5 ಕ್ಯಾನ್ಸರ್ ಸಂಶೋಧನೆ, ಆಯುರ್ವೇದ ಸಹಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ