ಇಂಡೋ-ಬಾಂಗ್ಲಾ ಜಲಸಾರಿಗೆ
Team Udayavani, Sep 6, 2020, 5:00 AM IST
ಅಗರ್ತಲಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಳನಾಡು ಜಲಸಾರಿಗೆ ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಬಾಂಗ್ಲಾದೇಶದಿಂದ ಹೊರಟ 50 ಮೆಟ್ರಿಕ್ ಟನ್ ಸಿಮೆಂಟು ಸರಕು ಹೊತ್ತ ದೋಣಿ ತ್ರಿಪುರಾದ ಸೋನಾಮುರ ಬಂದರನ್ನು ತಲುಪಲಿದೆ.
ತ್ರಿಪುರಾಕ್ಕೆ ಆಗಮಿಸುವ ಈ ದೋಣಿಯನ್ನು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ನಲ್ಲಿ ಸ್ವಾಗತಿಸಲಿದ್ದಾರೆ. ಇಲ್ಲಿಯ ತನಕ ಭೂಮಾರ್ಗಗಳ ಮೂಲಕ ಈಶಾನ್ಯ ರಾಜ್ಯ ತ್ರಿಪುರಾಕ್ಕೆ ಸರಕು ಸಂಚಾರ ನಡೆಸಲಾಗುತ್ತಿತ್ತು. ಈ ಸಾಗಾಟ ದುಬಾರಿಯಾದ ಕಾರಣ, ಬಾಂಗ್ಲಾ ಬಂದರುಗಳನ್ನು ಬಳಸಿಕೊಂಡು ಒಳನಾಡು ಜಲಮಾರ್ಗಗಳ ಮೂಲಕ ತ್ರಿಪುರಾಕ್ಕೆ ಸರಕು ಸಾಗಿಸಲು ಕೇಂದ್ರ ಸರ್ಕಾರ ಯೋಜಿಸಿತ್ತು.
ಮೇ ತಿಂಗಳಿನಲ್ಲಿ “ಇಂಡೋ- ಬಾಂಗ್ಲಾ ಪ್ರೊಟೊ ಕಾಲ್’ (ಐಬಿಪಿ) ಮಾರ್ಗಗಳಿಗೆ ಸೋನಾಮುರ (ತ್ರಿಪುರಾ)- ದೌಡ್ಕಂಡಿ (ಬಾಂಗ್ಲಾದೇಶ) ಜಲ ಮಾರ್ಗ ವನ್ನು ಸೇರಿಸುವ ಒಪ್ಪಂದಕ್ಕೂ ಉಭಯ ರಾಷ್ಟ್ರಗಳು ಸಹಿಹಾಕಿದ್ದವು.
ಗೋಮತಿ- ಮೇಘನಾ: ಬಾಂಗ್ಲಾದೇಶ ಅಧಿಕಾರಿಗಳ ಸರ್ವೇ ಪ್ರಕಾರ, ಸೋನಾಮುರಾ- ದೌಡ್ಕಂಡಿ ಪ್ರೊಟೊಕಾಲ್ ಮಾರ್ಗ 90 ಕಿ.ಮೀ.ಗಳಲ್ಲಿ 89.5 ಕಿ.ಮೀ. ಬಾಂಗ್ಲಾದೇಶದಲ್ಲಿಯೇ ಬರುತ್ತದೆ. ತ್ರಿಪುರಾದ ಗೋಮತಿ ನದಿ, ಬಾಂಗ್ಲಾದೇಶದ ಮೇಘನಾ ನದಿ ಮೂಲಕ ಭಾರತದ ರಾಷ್ಟ್ರೀಯ ಜಲಮಾರ್ಗಗಳೊಂದಿಗೆ ಸಂಪರ್ಕ ಬೆಸೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್