“ಅಧರ್ಮದಿಂದ ಅಸಮಾನತೆ’: ಮೋಹನ್ ಭಾಗವತ್
Team Udayavani, Dec 22, 2022, 1:40 AM IST
ಅಹ್ಮದಾಬಾದ್: ಎರಡು ಸಾವಿರ ವರ್ಷಗಳಿಂದ ಅಧರ್ಮವನ್ನು ಜನರು ಧರ್ಮ ಎಂದು ಭಾವಿಸಿದ್ದರಿಂದ ಸಮಾಜದಲ್ಲಿ ಈಗಲೂ ಅಸಮಾ ನತೆ ಮುಂದುವರಿದಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಗುಜರಾತ್ನ ಅಹ್ಮದಾಬಾದ್ನ ಪ್ರಮುಖ್ ಸ್ವಾಮಿ ಮಹಾರಾಜ್ ನಗರ ದಲ್ಲಿ ನಡೆದ ಪ್ರಮುಖ್ ಸ್ವಾಮಿ ಅವರ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಧರ್ಮದಲ್ಲಿ ಯಾರು ಮೇಲು, ಯಾರು ಕೀಳು ಎಂಬ ಪರಿಕಲ್ಪನೆ ಇಲ್ಲ. ಒಬ್ಬರ ಕುಟುಂಬ, ಸಂಪತ್ತು, ಸೌಂದರ್ಯ, ದೈಹಿಕ ಶಕ್ತಿಯ ಬಗೆಗಿನ ನಕಲಿ ಪ್ರತಿಷ್ಠೆಯ ಕಾರಣದಿಂದ ಒಬ್ಬರು ಇತರರಿಗಿಂತ ಹೆಚ್ಚು ಎಂದು ಭಾವಿಸುತ್ತಾರೆ. ಆದರೆ ಇದು ಸತ್ಯವಲ್ಲ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.