ಒಳನುಸುಳಿದ ಪಾಕ್ ಯೋಧರು ಫಿನಿಶ್
Team Udayavani, Jan 1, 2019, 12:30 AM IST
ಶ್ರೀನಗರ: ಜಮ್ಮು ಕಾಶ್ಮೀರದ ನೌಗಾಂವ್ ಗಡಿ ನಿಯಂತ್ರಣ ರೇಖೆಯಲ್ಲಿ ಗಡಿ ನುಸುಳಿ ದಾಳಿ ನಡೆಸಲು ಪಾಕ್ ಸೇನೆ ನಡೆಸಿದ ಪ್ರಯತ್ನವನ್ನು ಭಾರತೀಯ ಪಡೆ ವಿಫಲಗೊಳಿಸಿದೆ. ಹೊಸ ವರ್ಷದಂದು ದಾಳಿ ನಡೆಸುವ ಉದ್ದೇಶವನ್ನು ಪಾಕಿಸ್ತಾನದ ಗಡಿ ಭದ್ರತಾ ತಂಡವು ಹೊಂದಿತ್ತು ಎನ್ನಲಾಗಿದೆ. ಪಾಕ್ನ ಇಬ್ಬರು ಯೋಧರನ್ನು ಹತ್ಯೆಗೈಯಲಾಗಿದ್ದು, ನಿಮ್ಮ ಯೋಧರ ಶವಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಎಂದು ಪಾಕ್ಗೆ ಸೂಚಿಸಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದ ವರೆಗೆ ಗುಂಡಿನ ಚಕಮಕಿ ಮುಂದುವರಿದಿತ್ತು ಎಂದು ಸೇನಾ ಮೂಲಗಳು ಹೇಳಿವೆ.
ಈ ಯೋಧರು ದಟ್ಟ ಅರಣ್ಯದಲ್ಲಿ ಒಳನುಸುಳುವುದಕ್ಕೆ ಸಹಾಯವಾಗಲೆಂದು ಇತರ ಪಾಕ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ವಿಪರೀತ ಶೀತ ಹಾಗೂ ಮಂಜು ಇದ್ದಿದ್ದರಿಂದಾಗಿ ಒಳನುಸುಳಲು ಯೋಧರಿಗೆ ಅನುಕೂಲವೂ ಆಗಿತ್ತು. ಆದರೆ ಭಾರತೀಯ ಯೋಧರ ಚಾಣಾಕ್ಷತನದಿಂದಾಗಿ ಇವರ ಕಾರ್ಯತಂತ್ರ ವಿಫಲವಾಗಿದ್ದು, ಒಳನುಸುಳುತ್ತಿದ್ದ ಯೋಧರನ್ನು ಪತ್ತೆ ಹಚ್ಚಿ ಹತ್ಯೆಗೈದಿದೆ. ಯೋಧರ ಬಳಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಿಕ್ಕಿದ್ದು, ಇವರು ನೌಗಾಂವ್ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಸೋಮವಾರ ಇಡೀ ದಿನ ಈ ಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಪಾಕಿಸ್ತಾನದ ಸೇನೆ ಧರಿಸುವ ಸಾಮಾನ್ಯ ಸಮವಸ್ತ್ರವನ್ನೇ ಇವರು ಹೊಂದಿದ್ದರು. ಭಾರತೀಯ ಸೇನೆಯ ದಿಕ್ಕು ತಪ್ಪಿಸುವುದಕ್ಕಾಗಿ ಈ ಪೈಕಿ ಕೆಲವರು ಭಾರತೀಯ ಸೇನೆಯ ಹಳೆಯ ಸಮವಸ್ತ್ರವನ್ನೂ ಧರಿಸಿದ್ದರು. ಸುಧಾರಿತ ಶಸ್ತ್ರಾಸ್ತ್ರಗಳನ್ನು ಇವರು ಹೊಂದಿದ್ದರು. ಇದೇ ವೇಳೆ ಪಾಕಿಸ್ತಾನ ಸರಕಾರ ಮತ್ತು ಸೇನೆ ಕೂಡ ಭಾರತ ಅಪ್ರಚೋದಿತವಾಗಿ ನಡೆ ಸಿದ ಗುಂಡಿನ ದಾಳಿಯಿಂದ ಮಹಿಳೆ ಅಸುನೀಗಿದ್ದಾಳೆ. ಜತೆಗೆ ಇತರ 9 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ