“ಐಎನ್ಎಸ್ ವಿರಾಟ್’ 100 ಕೋಟಿ ರೂ.ಗೆ ಮಾರಾಟ?
ನಿವೃತ್ತ ನೌಕಾಶೂರನ ಖರೀದಿಗೆ ಮುಂಬಯಿ ಕಂಪೆನಿ ನಿರ್ಧಾರ; ಮ್ಯೂಸಿಯಂ ಉದ್ದೇಶ
Team Udayavani, Oct 2, 2020, 6:32 AM IST
ಹೊಸದಿಲ್ಲಿ: 30 ವರ್ಷ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿರುವ ಐಎನ್ಎಸ್ ವಿರಾಟ್ ರಕ್ಷಣೆಗೆ 100 ಕೋಟಿ ರೂ. ಅಗತ್ಯವಿದೆ!
ಈ ಹಿಂದೆ ಐಎನ್ಎಸ್ ವಿರಾಟ್ ಹಡಗನ್ನು ಖರೀದಿಸಿದ್ದ ಶ್ರೀರಾಂ ಗ್ರೂಪ್, “ಹಡಗು ಒಡೆಯುವ ಪ್ರಕ್ರಿಯೆ’ಗೆ ಇದನ್ನು ಮುಂಬೈನಿಂದ ಗುಜರಾತ್ನ ಅಲಾಂಗ್ನಲ್ಲಿನ ಕಾರ್ಖಾನೆಗೆ ಕಳುಹಿಸಿಕೊಟ್ಟಿದೆ. ಈ ನೌಕಾ ಆಸ್ತಿಯನ್ನು ಮುಂಬೈ ಮೂಲದ ಕಂಪನಿಯೊಂದು ಖರೀದಿಸಲು ಮುಂದಾಗಿದ್ದು, ಶ್ರೀರಾಂ ಗ್ರೂಪ್ ಇದಕ್ಕೆ 100 ಕೋಟಿ ರೂ. ಹಣ ಮತ್ತು ನಿರಪೇಕ್ಷಣಾ ಪತ್ರದ ಬೇಡಿಕೆ ಮುಂದಿಟ್ಟಿದೆ.
“ಮುಂಬೈನ ಕಂಪನಿ ನಮ್ಮಿಂದ ಐಎನ್ಎಸ್ ವಿರಾಟ ಖರೀದಿಸಲು ಮುಂದೆ ಬಂದಿದೆ. ನಾನು ಇದನ್ನು ಹರಾಜಿನಲ್ಲಿ ಖರೀದಿಸಿದ್ದೆ. ಆದ ಕಾರಣ, ಅವರಿಗೆ ಕೇಂದ್ರ ಸರಕಾರದಿಂದ ನಿರಪೇಕ್ಷಣಾ ಪತ್ರ ಸಲ್ಲಿಸಲು ತಿಳಿಸಿದ್ದೇನೆ. ಮುಂದೆ ಯಾರೂ ಈ ಬಗ್ಗೆ ವಿವಾದ ಸೃಷ್ಟಿಸಬಾರದು ಎಂಬ ಕಾರಣಕ್ಕೆ ಹೀಗೆ ಹೇಳಿದ್ದೇನೆ’ ಎಂದು ಶ್ರೀರಾಂ ಗ್ರೂಪ್ ಮುಖ್ಯಸ್ಥ ಮುಖೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ಹಣದ ಆಸೆಯಿಲ್ಲ: “ನಮ್ಮ ಸಂಸ್ಥೆಗೆ ಯಾವುದೇ ಹಣದ ಆಸೆಯಿಲ್ಲ. ನಾವೂ ದೇಶಭಕ್ತರು. ಪ್ರಸ್ತುತ ಈ ಹಡಗಿನ ಮೌಲ್ಯ 125 ಕೋಟಿ ರೂಪಾಯಿ. ಆದರೂ ನಾವು ಕನಿಷ್ಠ 100 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದೇವೆ. ನಮ್ಮ ಖಾತೆಗೆ ಹಣ ಬಿದ್ದ ಕೂಡಲೇ ಅವರಿಗೆ ಹಸ್ತಾಂತರಿಸುತ್ತೇವೆ’ ಎಂದು ತಿಳಿಸಿದ್ದಾರೆ. ಐಎನ್ಎಸ್ ಅನ್ನು ಎನ್ವಿಟೆಕ್ ಮರೈನ್ ಕನ್ಸಲ್ಟಂಟ್ಸ್ ಪ್ರೈ.ಲಿ. ಸಂಸ್ಥೆ ಖರೀದಿಸಲು ಮುಂದಾಗಿದೆ. ಆರ್ಥಿಕ ಹಿತಾಸಕ್ತಿಯಿಲ್ಲದೆ, ವಿರಾಟ್ ಅನ್ನು ಮ್ಯೂಸಿಯಂ ಆಗಿಸುವ ಏಕೈಕ ಉದ್ದೇಶದಿಂದ ಖರೀದಿಸುತ್ತಿರುವುದಾಗಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ