ಯೋಧರ ಪತ್ನಿಯರ ಬಗ್ಗೆ ಕೀಳು ಹೇಳಿಕೆ:ಮಹಾರಾಷ್ಟ್ರ ಎಂಎಲ್ಸಿ ಸಂಸ್ಪೆಂಡ್
Team Udayavani, Mar 10, 2017, 10:43 AM IST
ಮುಂಬಯಿ: ಭಾರತೀಯ ಸೇನೆಯ ಯೋಧರ ಪತ್ನಿಯರ ಬಗೆಗೆ ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೀಡಾಗಿದ್ದ ರಾಜ್ಯ ವಿಧಾನಪರಿಷತ್ನಲ್ಲಿನ ಬಿಜೆಪಿ ಬೆಂಬಲಿತ ಸದಸ್ಯ ಪ್ರಶಾಂತ್ ಪರಿಚಾರಕ್ ಅವರನ್ನು ಒಂದೂವರೆ ವರ್ಷಗಳ ಕಾಲ ಸದನದಿಂದ ಅಮಾನತುಗೊಳಿಸಲಾಗಿದೆ.
ಪ್ರಶಾಂತ್ ಪರಿಚಾರಕ್ ಅವರು ನೀಡಿರುವ ರೆನ್ನಲಾಗಿರುವ ವಿವಾದಾತ್ಮಕ ಹೇಳಿಕೆಯ ಸಂಬಂಧ ಪರಿಷತ್ನ ಸಭಾಪತಿ ರಾಮರಾಜೇ ನಿಂಬಾಳ್ಕರ್ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ ಎಂದು ವಿಧಾನ ಪರಿಷತ್ನ ನಾಯಕರಾದ ಚಂದ್ರಕಾಂತ ಪಾಟೀಲ್ ಪ್ರಕಟಿಸಿದರು.
ಪ್ರಶಾಂತ್ ಪರಿಚಾರಕ್ ಅವರ ಅಮಾನತಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಸದನ ದಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದಾಗಿ ಕಲಾಪ ವನ್ನು ಮುಂದೂಡುತ್ತಲೇ ಬರಲಾಗಿತ್ತು.
ಪ್ರಶಾಂತ್ ಪರಿಚಾರಕ್ ಅವರು ಸೇನಾ ಯೋಧರ ಕುರಿತಂತೆ ನೀಡಿರುವ ಹೇಳಿಕೆಯು ತೀರಾ ಅಕ್ಷೇಪಕಾರಿ ಮತ್ತು ಮಹಿಳೆಯರಿಗೆ ಅಪಮಾನ ಉಂಟುಮಾಡುವಂತಹ ಹೇಳಿಕೆ ಯಾಗಿದ್ದು ಇದು ಸದನದ ಘನತೆಗೆ ಕುಂದುಂಟುಮಾಡಿರುವುದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಪರಿಚಾರಕ್ ಅವರನ್ನು ಸದನದಿಂದ ಅಮಾನತು ಗೊಳಿಸಲಾಗುವುದು ಎಂದು ಸಚಿವ ಚಂದ್ರಕಾಂತ ಪಾಟೀಲ್ ತಿಳಿಸಿದರು.
ಚುನಾವಣಾ ಪ್ರಚಾರದ ವೇಳೆ ಪ್ರಶಾಂತ್ ಪರಿಚಾರಕ್ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಯೋಧರು ತಮಗೆ ಮಗು ಜನಿಸಿದ ಸಂತಸದಲ್ಲಿ ಪಂಜಾಬ್ ಗಡಿ ಯಲ್ಲಿ ಸಿಹಿಯನ್ನು ಹಂಚುತ್ತಾರೆ. ಆದರೆ ಅವರು ವರ್ಷವಿಡೀ ಮನೆಗೆ ತೆರಳಿರುವುದಿಲ್ಲ ಎಂಬ ಅವರ ಹೇಳಿಕೆ ತೀವ್ರ ವಿವಾದಕ್ಕೀಡಾದ ಬಳಿಕ ಪರಿಚಾರಕ್ ತಮ್ಮ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ