ಬೌದ್ಧಿಕ ಅಪ್ರಾಮಾಣಿಕತೆ, ರಾಜಕೀಯ ದ್ರೋಹ: ಮೋದಿ

ವಿಪಕ್ಷಗಳ ಇಬ್ಬಗೆ ನೀತಿ ವಿರುದ್ಧ ಪ್ರಧಾನಿ ಗುಡುಗು

Team Udayavani, Oct 3, 2021, 6:15 AM IST

ಬೌದ್ಧಿಕ ಅಪ್ರಾಮಾಣಿಕತೆ, ರಾಜಕೀಯ ದ್ರೋಹ: ಮೋದಿ

ಹೊಸದಿಲ್ಲಿ: “ಕೃಷಿ ಕಾಯ್ದೆಗಳನ್ನು ವಿರೋಧಿಸುವವರು ರಾಜಕೀಯ ದ್ರೋಹಿಗಳು.'”ನಾನು ಟೀಕೆಗಳನ್ನು ಗೌರವಿಸುತ್ತೇನೆ. ಆದರೆ ನೈಜ ಟೀಕಾಕಾರರ ಸಂಖ್ಯೆ ಕಡಿಮೆಯಿದೆ.'”ಸನ್ನಿವೇಶ ನನ್ನನ್ನು ರಾಜಕೀಯ ಸ್ವೀಕರಿಸುವಂತೆ ಮಾಡಿತು…’

-ಇವು ಚುನಾವಣ ರಾಜಕೀಯದಲ್ಲಿ 2 ದಶಕಗಳ ಅವಧಿ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ಮನದಾಳದ ಮಾತುಗಳು. “ಓಪನ್‌ ಮ್ಯಾಗಸಿನ್‌’ಗೆ ನೀಡಿರುವ ಸಂದರ್ಶನದಲ್ಲಿ ಮೋದಿ ತಮ್ಮ ರಾಜಕೀಯ ಪ್ರವೇಶದಿಂದ ಹಿಡಿದು ತಮ್ಮ ಸರಕಾರದ ನೀತಿಗಳು, ವಿಪಕ್ಷಗಳ ಟೀಕೆ, ಕೃಷಿ ಕಾಯ್ದೆಗೆ ವಿರೋಧ, ಕೊರೊನಾ ಸೋಂಕಿ ನವರೆಗೆ ಹಲವು ವಿಚಾರಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಮೋದಿ, ರೈತರ ಪರ ನಾವು ತಂದಿರುವ ಸುಧಾರಣ ಕ್ರಮಗಳನ್ನು ವಿರೋಧಿಸುವವರಲ್ಲಿ ನೀವು ನಿಜವಾದ “ಬೌದ್ಧಿಕ ಅಪ್ರಾಮಾಣಿಕತೆ’ ಮತ್ತು “ರಾಜಕೀಯ ದ್ರೋಹ’ವನ್ನು ಕಾಣಬಹುದು. ಇದೇ ರೀತಿಯ ವಂಚನೆಯನ್ನು ನೀವು ಆಧಾರ್‌, ಜಿಎಸ್‌ಟಿ ಜಾರಿ ವೇಳೆಯೂ ನೋಡಿರುತ್ತೀರಿ. ಬಹುಸಂಖ್ಯೆಯ ಜನರ ಹಿತಾಸಕ್ತಿಯನ್ನು ಹೊಂದಿರುವ ನಿರ್ಧಾರಗಳನ್ನು ಜಾರಿ ಮಾಡುವುದು ಸರಕಾರದ ಹೊಣೆಗಾರಿಕೆಯಾಗಿರುತ್ತದೆ. ವಿಪಕ್ಷ ಕಾಂಗ್ರೆಸ್‌ಗೆ “ರಾಜಕೀಯ’ ಮತ್ತು “ಆರ್ಥಿಕ ಚಿಂತನೆ’ ಗಳ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಸಿಕ್ಕಿಂನಲ್ಲಿ ಮಿನರಲ್‌ ನೀರಿನ ಬಾಟಲ್‌ಗೆ ನಿಷೇಧ

ಕಳಂಕ ತರುವವರು ಇಲ್ಲೇ ಇದ್ದಾರೆ
ಕೋವಿಡ್‌ ಸೋಂಕು ಮತ್ತು ಲಸಿಕೆ ವಿತರಣೆ ಕುರಿತು ಪ್ರಸ್ತಾವಿಸಿದ ಮೋದಿ, ಜಗತ್ತಿನ ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಸೋಂಕಿನ ವಿರುದ್ಧ ಪ್ರಬಲ ಹೋರಾಟ ನಡೆಸಿದೆ. ಅಲ್ಲದೆ ಲಸಿಕೆ ವಿತರಣೆಯಲ್ಲಿ ನಾವುಯಶಸ್ಸು ಸಾಧಿಸಲು ದೇಶದ ಸ್ವಾವಲಂಬನೆ ಮತ್ತು ತಂತ್ರಜ್ಞಾನವೇ ಕಾರಣ. ಹೀಗಿದ್ದರೂ ನಮ್ಮ ನಡುವೆಯೇ ಇರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇಶಕ್ಕೆ ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಲೇ ಇವೆ ಎಂದು ಕಿಡಿ ಕಾರಿದ್ದಾರೆ.

ಪ್ರಮುಖ ಅಂಶಗಳು
1. ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದ ನಾನು 20 ವರ್ಷಗಳ ಹಿಂದೆ ಪರಿಸ್ಥಿತಿಗೆ ಕಟ್ಟುಬಿದ್ದು ಸಂಪೂರ್ಣವಾಗಿ ಭಿನ್ನವಾದ ರಾಜಕೀಯ ಪ್ರಪಂಚಕ್ಕೆ ಕಾಲಿರಿಸಿದೆ.
2. ಕೃಷಿ ಕಾಯ್ದೆಗಳನ್ನು ವಿರೋಧಿಸುವವರಲ್ಲಿ ನೀವು ನೈಜ “ಬೌದ್ಧಿಕ ಅಪ್ರಾಮಾಣಿಕತೆ’ ಮತ್ತು “ರಾಜಕೀಯ ದ್ರೋಹ’ ಗಳನ್ನು ಕಾಣಬಹುದು.
3. ಆಶ್ವಾಸನೆ ನೀಡುವುದು, ಅದಕ್ಕಾಗಿ ವಾದಿಸುವುದು, ಕೊನೆಗೆ ನಾವದನ್ನು ಜಾರಿ ಮಾಡುವಾಗ ಅದನ್ನೇ ವಿರೋಧಿಸುವುದು ವಿಪಕ್ಷಗಳ ಕಾಯಕ.
4. ಹಿಂದೆ ಆಳಿದವರು “ಸರಕಾರ ನಡೆಸುವುದೇ ಚುನಾವಣೆ ಯಲ್ಲಿ ಪಕ್ಷವನ್ನು ಗೆಲ್ಲಿಸಲು’ ಎಂದು ನಂಬಿದ್ದರು. ಆದರೆ ನಾನು ಸರಕಾರ ನಡೆಸುವುದು ನನ್ನ ದೇಶವನ್ನು ಗೆಲ್ಲಿಸಲು.
05. ನಾನು ಟೀಕಾಕಾರರನ್ನು ಗೌರವಿಸುತ್ತೇನೆ. ಆದರೆ ಅಂಥವರ ಸಂಖ್ಯೆ ಕಡಿಮೆಯಿದೆ. ಪೂರ್ವಗ್ರಹದೊಂದಿಗೆ ಆರೋಪ ಮಾಡುವವರೇ ಹೆಚ್ಚಿದ್ದಾರೆ.
06. ಬಡವರ ಪರ, ಉದ್ದಿಮೆ ಪರ ನೀತಿಯು ಪರಸ್ಪರ ನಂಟು ಹೊಂದಿರುವಂಥದ್ದು. ನನ್ನ ಪ್ರಕಾರ ನೀತಿನಿರೂಪಣೆಯು ಜನಪರವಾಗಿದ್ದರೆ ಸಾಕು.
07. ಇಂದು ಕೋವಿಡ್‌ ವಿರುದ್ಧ ಲಸಿಕೆ ವಿತರಣೆಯಲ್ಲಿ ಭಾರತದ ಯಶಸ್ಸಿಗೆ ನಮ್ಮ ದೇಶವು ಆತ್ಮನಿರ್ಭರವಾಗಿ ಬೆಳೆದದ್ದೇ ಕಾರಣ.

ಟಾಪ್ ನ್ಯೂಸ್

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.