ಸಣ್ಣ ಉಳಿತಾಯ ಬಡ್ಡಿದರ ಯಥಾಸ್ಥಿತಿ
Team Udayavani, Oct 1, 2021, 7:15 AM IST
ಹೊಸದಿಲ್ಲಿ: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ), ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲೆ ಹಾಲಿ ಇರುವ ಬಡ್ಡಿ ದರವನ್ನು ಮುಂದುವರಿಸಲಾಗಿದೆ.
ಪ್ರಸಕ್ತ ವಿತ್ತೀಯ ವರ್ಷದ ಅ. 1ರಿಂದ ಡಿ. 31ರ ವರೆಗಿನ 3ನೇ ತ್ತೈಮಾಸಿಕಕ್ಕೆ ಈ ಬಡ್ಡಿದರ ಇರಲಿವೆ ಎಂದು ಸರಕಾರ ಪ್ರಕಟಿಸಿದೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ ಎಂಬ ವಿಶ್ಲೇಷಣೆ ನಡೆದಿದೆ.
ಬೆಳ್ಳಿ ಇಟಿಎಫ್ ಗೆ ಅನುಮತಿ:
ಷೇರು ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ವು ಮ್ಯೂಚುವಲ್ ಫಂಡ್ಗಳಿಗೆ ಬೆಳ್ಳಿಯ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಪರಿಚಯಿಸಲು ಅನುಮತಿ ನೀಡಿದೆ. ಇದು ವರೆಗೆ ಚಿನ್ನದ ಇಟಿಎಎಫ್ ಮಾತ್ರ ಇತ್ತು.
ಚಿನ್ನದ ಬೆಲೆ ಇಳಿಕೆ:
ರಾಷ್ಟ್ರ ರಾಜಧಾನಿಯ ಚಿನಿವಾರಕಟ್ಟೆ ಯಲ್ಲಿ ಗುರುವಾರ 10 ಗ್ರಾಂ ಚಿನ್ನದ ಧಾರಣೆ 154 ರೂ. ಕಡಿಮೆಯಾಗಿದ್ದು, 44,976 ರೂ.ಗಳಾಗಿದ್ದವು. ಚಿನ್ನದ ಅಂತಾರಾಷ್ಟ್ರೀಯ ದರ ಕುಸಿತದಿಂದಾಗಿ ಈ ಬೆಳವಣಿಗೆ ಯಾಗಿದೆ. ಪ್ರತೀ ಕೆ.ಜಿ. ಬೆಳ್ಳಿಗೂ 1,337 ರೂ. ಇಳಿಕೆಯಾಗಿ 58,692 ರೂ. ಆಗಿದೆ.
ಎಷ್ಟು ಬಡ್ಡಿ?:
ಪಿಪಿಎಫ್ :
ಶೇ. 7.1
ಎನ್ಎಸ್ಸಿ:
ಶೇ. 6.8
ಅಂಚೆ ಮಾಸಿಕ ಆದಾಯ ಖಾತೆ :
ಶೇ. 6.6
ಹಿರಿಯ ನಾಗರಿಕರ ಉಳಿತಾಯ ಖಾತೆ :
ಶೇ. 7.4
1 ವರ್ಷದ ನಿರಖು ಠೇವಣಿ ಶೇ. 5.5
ಸುಕನ್ಯಾ ಸಮೃದ್ಧಿ :
ಶೇ. 7.6
5 ವರ್ಷಗಳ ಆರ್ಡಿ ಶೇ. 5.8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ