ಬದರೀ ಯಾತ್ರೆಗೆ ಜೋಶಿಮಠವೇ ದಾರಿ? ಭೂಕುಸಿತದಿಂದ ಹೇಲಾಂಗ್ ಬೈಪಾಸ್ ಯೋಜನೆ ಸ್ಥಗಿತ
ಇನ್ನು ನಾಲ್ಕು ತಿಂಗಳಲ್ಲಿ ಬದಲಿ ಮಾರ್ಗ ಕೆಲಸ ಸಾಧ್ಯವಿಲ್ಲ
Team Udayavani, Jan 24, 2023, 7:45 PM IST
ಡೆಹರಾಡೂನ್: ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಬದರಿನಾಥ ಯಾತ್ರೆಗೆ ಏಕೈಕ ಮಾರ್ಗವೇ ಲಭ್ಯವಾಗುವ ಸಾಧ್ಯತೆ ಇದೆ. ಈ ಬಗ್ಗೆ ಬಾರ್ಡರ್ ರೋಡ್ ಆರ್ಗನೈಸೇಷನ್ ಉತ್ತರಾಖಂಡ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಯುಎಸ್ಡಿಎಂಎ)ಮಾಹಿತಿ ನೀಡಿದೆ.
ಜೋಶಿಮಠದ ಮೂಲಕ ತೆರಳುವ ಮಾರ್ಗ ಭೂಕುಸಿತದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಕಷ್ಟ ಸಾಧ್ಯ ಎಂದು ಅಂದಾಜು ಮಾಡಲಾಗಿದೆ.
ಜೋಶಿಮಠಕ್ಕೆ 9 ಕಿ.ಮೀ. ದೂರದಲ್ಲಿ ಬಿಆರ್ಒ ಹೇಲಾಂಗ್ ಬೈಪಾಸ್ ಯೋಜನೆಯಡಿ ರಸ್ತೆ ನಿರ್ಮಿಸುತ್ತಿದೆ. ಅದು ಮುಕ್ತಾಯಗೊಳ್ಳಲು ಎರಡೂವರೆ ವರ್ಷದ ಬೇಕಾಗುವ ಸಾಧ್ಯತೆ ಇದೆ.
ಪ್ರಸ್ತುತ ಜೋಶಿಮಠದಲ್ಲಿ ಭೂಕುಸಿತವಾಗಿರುವುದರಿಂದ ಈ ರಸ್ತೆ ನಿರ್ಮಾಣವನ್ನೂ ನಿಲ್ಲಿಸಲಾಗಿದೆ. ಮೇನಲ್ಲಿ ಮತ್ತೆ ಬದರಿನಾಥ ಕ್ಷೇತ್ರ ತೆರೆಯಲಿದೆ. ಆ ಅವಧಿಯ ಒಳಗೆ (ನಾಲ್ಕು ತಿಂಗಳೊಳಗೆ) ರಸ್ತೆ ನಿರ್ಮಾಣ ಮುಗಿಸುವುದು ಕಷ್ಟ ಎಂದು ಯುಎಸ್ಡಿಎಂಎಯ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.
2022ರ ಸೆಪ್ಟೆಂಬರ್ನಿಂದ ಹೇಲಾಂಗ್ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅದಕ್ಕೆ ಸ್ಥಳಿಯರ ವಿರೋಧವಿದೆ. ಇದು ಪರ್ವತವನ್ನು ಕಡಿದು ಮಾಡುವ ಮಾರ್ಗ. ಇದರ ನಿರ್ಮಾಣದಿಂದ ಬೆಟ್ಟಗುಡ್ಡ ಪ್ರದೇಶದ ಅಡಿಪಾಯವೇ ದುರ್ಬಲವಾಗುತ್ತದೆ ಎನ್ನುವುದು ಜನರ ಅಭಿಮತ. ಸದ್ಯ ಈ ಮಾರ್ಗ ನಿರ್ಮಾಣ ನಿಲ್ಲಿಸುವ ಸಾಧ್ಯತೆಯಿಲ್ಲ. ಜೋಷಿಮಠದ ಮೂಲಕ ತೆರಳಿದರೆ ಅಪಾಯವಿಲ್ಲ ಎಂದು ಯುಎಸ್ಡಿಎಂಎ ಭರವಸೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’