ಪೆಸಿಫಿಕ್ ದ್ವೀಪ ರಾಷ್ಟ್ರ ವನುವಾತುವಲ್ಲಿ ನಿತ್ಯಾನಂದ ಠಿಕಾಣಿ?
Team Udayavani, Jan 24, 2020, 9:15 PM IST
ಹೊಸದಿಲ್ಲಿ: ದೇಶ ಬಿಟ್ಟು ಪರಾರಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಪೆಸಿಫಿಕ್ ಸಾಗರ ವ್ಯಾಪ್ತಿಯಲ್ಲಿರುವ ವನುವಾತು ಎಂಬ ದ್ವೀಪ ರಾಷ್ಟ್ರದಲ್ಲಿ ಬೀಡು ಬಿಟ್ಟಿದ್ದಾನೆಂಬ ಗುಮಾನಿ ಇದೆ. ನಿತ್ಯಾನಂದ ಸ್ವಾಮಿಯ ನಿಕಟವರ್ತಿಗೆ ಕಳುಹಿಸಿದ ಇ-ಮೇಲ್ನಿಂದ ಈ ಅಂಶ ಬಹಿರಂಗವಾಗಿದೆ.
ಸ್ವಘೋಷಿತ ದೇವಮಾನವನ ಸಂಸ್ಥೆಗೆ ದೇಣಿಗೆಯನ್ನು ಹೇಗೆ ಕಳುಹಿಸಬಹುದು ಎಂದು ಕೇಳಿದ್ದಾಗ ವನುವಾತು ದ್ವೀಪ ರಾಷ್ಟ್ರದಲ್ಲಿರುವ ಖಾತೆಗೆ ವರ್ಗಾಯಿಸುವ ಬಗ್ಗೆ ನಿಕಟವರ್ತಿ ಸಲಹೆ ನೀಡಿದ್ದರು.
ವನುವಾತು ಎನ್ನುವುದು ತೆರಿಗೆ ಸ್ವರ್ಗ ರಾಷ್ಟ್ರವಾಗಿದ್ದು, ಇ-ಮೇಲ್ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಮೊತ್ತವನ್ನು ‘ಕೈಲಾಸ ಲಿಮಿಟೆಡ್’ ಎಂಬ ಹೆಸರಿನ ಖಾತೆಗೆ ಜಮೆ ಮಾಡುವಂತೆ ಸಲಹೆ ಮಾಡಲಾಗಿದೆ. ನ್ಯಾಷನಲ್ ಬ್ಯಾಂಕ್ ಆಫ್ ವನುವಾತುವಿನ ಪೋರ್ಟ್ ವಿಲ್ಲಾ ಎಂಬಲ್ಲಿರುವ ಶಾಖೆಯಲ್ಲಿ ಆತ ಖಾತೆಯನ್ನೂ ಹೊಂದಿದ್ದಾನೆ.
ಈ ಹೊಸ ಬೆಳವಣಿಗೆಯಿಂದ ಆತ ವನುವಾತುವಿನಲ್ಲಿಯೇ ಇದ್ದಾನೆಯೋ ಅಥವಾ ಅಲ್ಲಿ ಆತನ ವಹಿವಾಟುಗಳು ಮಾತ್ರ ಇವೆಯೋ ಎಂಬ ಪ್ರಶ್ನೆ ಮೂಡಿದ್ದು, ಸೂಕ್ತ ತನಿಖೆಯಿಂದ ಇದಕ್ಕೆಲ್ಲ ಉತ್ತರ ಸಿಗುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ