ಇನ್ನು ಸಮಾನ ನಾಗರಿಕ ಸಂಹಿತೆ?
Team Udayavani, Aug 7, 2019, 4:03 AM IST
ತನ್ನ ಮೊದಲ 5 ವರ್ಷದ ಅವಧಿಯಲ್ಲಿ ಜಿಎಸ್ಟಿ ತೆರಿಗೆ ಪದ್ಧತಿ ಜಾರಿ, ರಾತ್ರೋರಾತ್ರಿ 500, 1000 ರೂ. ನೋಟು ಅಮಾನ್ಯ ಮಾಡಿದ್ದ ಮೋದಿ ಸರ್ಕಾರ, 2ನೇ ಅವಧಿ ಆರಂಭದಲ್ಲೇ ತ್ರಿವಳಿ ತಲಾಖ್ ನಿಷೇಧಿಸಿ ಕಾಯ್ದೆ ರಚಿಸಿದೆ. ಅದರ ಬೆನ್ನಲ್ಲೇ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದೆ.
ಆರಂಭದಲ್ಲಿ ಇವೆಲ್ಲ ಅಸಾಧ್ಯ ಸಾಹಸಗಳು ಸಾಧ್ಯವೇ ಇಲ್ಲ ಎಂದು ವರ್ಣಿಸಲಾಗಿತ್ತು. ಮೋದಿ ಸರ್ಕಾರ ಒಂದೊಂದನ್ನೇ ಬಹಳ ಸರಳವಾಗಿ ಜಾರಿ ಮಾಡಿರುವುದನ್ನು ಗಮನಿಸಿದಾಗ, ಸಮಾನ ನಾಗರಿಕ ಸಂಹಿತೆಯೂ ಜಾರಿಯಾಗಬಹುದಾ ಎಂಬ ಅನುಮಾನ ಹುಟ್ಟಿಕೊಂಡಿದೆ.
ರಾಜ್ಯಸಭೆಯಲ್ಲಿ ಬಹುಮತವಿಲ್ಲದಿದ್ದರೂ, ತ್ರಿವಳಿ ತಲಾಖನ್ನು ಬಿಜೆಪಿ ತಂತ್ರಗಾರಿಕೆಯಿಂದ ಜಾರಿ ಮಾಡಿತು! ಯಾವುದೇ ಕಸರತ್ತು ಮಾಡದೇ ಬಹಳ ಸುಲಭವಾಗಿ ರಾಷ್ಟ್ರಪತಿ ಅಂಕಿತದ ಮೂಲಕ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಇಲ್ಲವಾಗಿಸಿದೆ. ಈಗ ಅಸಾಧ್ಯವೆಂದು ಹೇಳಲ್ಪಟ್ಟಿರುವ ಸಮಾನ ನಾಗರಿಕ ಸಂಹಿತೆಯನ್ನೂ ಜಾರಿಮಾಡುವುದು ಅಸಂಭವವೇನಲ್ಲ ಎಂಬ ಚರ್ಚೆ ಶುರುವಾಗಿದೆ!
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹಿಂದೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಜಾರಿ ಮಾಡುತ್ತಾ ಬರುತ್ತಿದೆ. ರಾಮಮಂದಿರ ನಿರ್ಮಾಣದ ಕುರಿತು ಬಹಳ ವೇಗವಾಗಿ ತೀರ್ಮಾನವಾಗುವ ಸಾಧ್ಯತೆಯೊಂದು ಗೋಚರವಾಗಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಕುರಿತ ವಿಚಾರಣೆ ಆರಂಭವಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ