ಸೇನೆಗೆ ಜಿಸ್ಯಾಟ್ ಬಲ
Team Udayavani, Dec 20, 2018, 6:00 AM IST
ಶ್ರೀಹರಿಕೋಟಾ/ಹೊಸದಿಲ್ಲಿ: ಭಾರತೀಯ ವಾಯುಪಡೆ (ಐಎಎಫ್)ಗೆ ನೆರವಾಗುವ ನಿಟ್ಟಿನಲ್ಲಿ ಜಿಸ್ಯಾಟ್-7ಎ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಬುಧವಾರ ಯಶಸ್ವಿಯಾಗಿ ಉಡಾಯಿಸಲಾಗಿದೆ. ಸಂಜೆ 4.10ಕ್ಕೆ ಉಡಾವಣೆಯನ್ನು ಜಿಎಸ್ಎಲ್ವಿ-ಎಫ್11 ವಾಹಕದ ಮೂಲಕ 2,250 ಕೆಜಿ ತೂಕದ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಈ ಉಪಗ್ರಹದಿಂದಾಗಿ ಐಎಎಫ್ಗೆ ವಿಶೇಷ ವಾಗಿ ಸಂಪರ್ಕ ಮತ್ತು ಸಂವಹನ ನಡೆಸಲು ಅನುಕೂಲಗಳಾಗಲಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಜಿಎಸ್ಎಲ್ವಿ ಇದುವರೆಗೆ ನಡೆಸಿದ ಉಡಾವಣೆಯಲ್ಲಿ ಅತ್ಯಂತ ಭಾರದ ಉಪಗ್ರಹವಾಗಿದೆ. 35 ದಿನಗಳ ಅವಧಿಯಲ್ಲಿ ನಡೆಸಲಾಗಿರುವ ಮೂರನೇ ಉಡಾವಣೆ ಇದು ಎಂದು ಹೇಳಿದ್ದಾರೆ. ದೇಶಿಯವಾಗಿ ಸಿದ್ಧಪಡಿಸಲಾಗಿರುವ ಕ್ರಯೋ ಜನಿಕ್ ಹಂತವನ್ನು ಇದು ಹೊಂದಿದೆ. ಎಂಟು ವರ್ಷಗಳ ಕಾಲ ಈ ಉಪಗ್ರಹ ಐಎಎಫ್ಗೆ ನೆರವಾಗಲಿದೆ ಎಂದು ಶಿವನ್ ಹೇಳಿದ್ದಾರೆ. ಉಪಗ್ರಹದ ಸೌರ ಪ್ಯಾನೆಲ್ಗಳನ್ನು ಅನಾವರಣಗೊಳಿಸುವುದು ಮತ್ತು ಕಕ್ಷೆಗೆ ಏರಿಸುವುದನ್ನು ಬೆಂಗ ಳೂರಿನಿಂದ ನಡೆಸಲಾಗುತ್ತದೆ ಎಂದೂ ಶಿವನ್ ಹೇಳಿದ್ದಾರೆ.
7ನೇ ಉಡಾವಣೆ: ಶ್ರೀಹರಿಕೋಟಾದಿಂದ ಈ ವರ್ಷ ಏಳನೇ ಉಡಾವಣೆಯಾಗಿದ್ದರೆ, ಜಿಎಸ್ಎಲ್ವಿ-ಎಫ್11 ಉಡಾವಣಾವಾಹಕಕ್ಕೆ 69ನೇ ಉಡಾವಣೆಯಾಗಿದೆ.
ಇಂಡಿಯನ್ ಆ್ಯಂಗ್ರಿ ಬರ್ಡ್: ಈ ಉಪಗ್ರಹವನ್ನು “ಇಂಡಿಯನ್ ಆ್ಯಂಗ್ರಿ ಬರ್ಡ್’ ಎಂದು ಹೆಸರಿಸಲಾಗಿದೆ. ಹೊಸ ಉಪಗ್ರಹ ಐಎಎಫ್ನ ವಿಮಾನಗಳು, ಮಿಲಿಟರಿ ವಿಮಾನ ನಿಲ್ದಾಣಗಳು, ಡ್ರೋನ್ಗಳು, ಭೂಮಿಯಲ್ಲಿರುವ ರಾಡಾರ್ ಕೇಂದ್ರಗಳ ನಡುವೆ ನಿಕಟ ಸಂಪರ್ಕಕ್ಕೆ ನೆರವಾಗಲಿವೆ. ಮಾನವ ರಹಿತ ವಿಮಾನ ಹಾರಾಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲು ಹಾಗೂ ಯುದ್ಧ ಸಿದ್ಧತೆಯ ಬಗ್ಗೆ ನಿಖರ ಮಾಹಿತಿ ಗೆ ಈ ಉಪಗ್ರಹ ನೆರವಾಗಲಿದೆ. ವಿಶೇಷವಾಗಿ ವಿದೇಶಿ ಉಪಗ್ರಹಳ ಮೂಲಕ ಗರಿಷ್ಠ ಪ್ರಮಾಣದ ರಕ್ಷಣಾ ಮಾಹಿತಿ ವಿನಿಮಯ ಮತ್ತು ಮಾಹಿತಿ ಛೇದನದ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ