ಚಂದ್ರನ ದಕ್ಷಿಣ ಧ್ರುವಕ್ಕೆ ಭಾರತದ ಉಪಗ್ರಹ

ಜಪಾನ್‌ ಸಹಯೋಗದಲ್ಲಿ ಶುಕ್ರ, ಚಂದ್ರನ ಶೋಧನೆಗೆ ಮುಂದಾದ ಇಸ್ರೋ

Team Udayavani, Nov 7, 2022, 7:23 AM IST

MOONಚಂದ್ರನ ದಕ್ಷಿಣ ಧ್ರುವಕ್ಕೆ ಭಾರತದ ಉಪಗ್ರಹ

ಹೊಸದಿಲ್ಲಿ: ಜಪಾನ್‌ ಸಹಯೋಗದಲ್ಲಿ ಶುಕ್ರ ಗ್ರಹ ಹಾಗೂ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವ ನಿಟ್ಟಿನಲ್ಲಿ ಉಪಗ್ರಹಗಳನ್ನು ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಮುಂದಾಗಿದೆ.

ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಆಕಾಶ್‌ ತಣ್ತೀ ಸಮಾವೇಶದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಹಮದಾಬಾದ್‌ ಮೂಲದ ಭೌತಿಕ ಸಂಶೋಧನ ಪ್ರಯೋಗಾಲಯದ ನಿರ್ದೇಶಕ ಅನಿಲ್‌ ಭಾರದ್ವಾಜ್‌ ಅವರು, “ಇದರ ಜತೆಗೆ ಮಂಗಳ ಗ್ರಹಕ್ಕೆ ಶೋಧಕ ಉಪ ಗ್ರಹ ಕಳುಹಿಸಲು ಇಸ್ರೋ ಯೋಜಿಸಿದೆ’ ಎಂದು ತಿಳಿಸಿದರು.

“ಆರಂಭಿಕ ಯೋಜನೆಗಳ ಪ್ರಕಾರ, ಚಂದ್ರನ ದಕ್ಷಿಣ ಧ್ರುವದ ಬಳಿಯ ಯೋಜಿತ ಸ್ಥಳದಲ್ಲಿ ಜಪಾನ್‌ ರಾಕೆಟ್‌ ಲ್ಯಾಂಡ್‌ ಆಗುತ್ತದೆ. ಅನಂತರ ಅದು ಇಸ್ರೋ ನಿರ್ಮಿಸಿದ ಲೂನಾರ್‌ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಕಕ್ಷೆಗೆ ಸೇರಿಸುತ್ತದೆ. ಬಳಿಕ ಸೂರ್ಯನ ಬೆಳಕನ್ನು ನೋಡದ ಚಂದ್ರನ ಶಾಶ್ವತ ನೆರಳು ಪ್ರದೇಶಕ್ಕೆ ರೋವರ್‌ ಪ್ರಯಾ ಣಿಸುತ್ತದೆ’ ಎಂದು ಮಾಹಿತಿ ನೀಡಿದರು.

“ಈ ಬಗ್ಗೆ ಜಪಾನೀಸ್‌ ಏರೋಸ್ಪೇಸ್‌ ಎಕ್ಸ್‌ಪ್ಲೊರೇಷನ್‌ ಏಜೆನ್ಸಿ(ಜೆಎಎಕ್ಸ್‌ಎ) ಜತೆಗೆ ಇಸ್ರೋ ಮಾತುಕತೆ ನಡೆಸುತ್ತಿದೆ. ಈ ಪ್ರದೇಶದ ಶೋಧನೆಯು ಆಸಕ್ತಿದಾಯಕವಾಗಿದೆ. ಯಾಕೆಂದರೆ ಪಿಎಸ್‌ಆರ್‌ ವಲಯದಲ್ಲಿ ಉಳಿ ದಿರುವ ಯಾವುದೇ ವಸ್ತುವು ಅನಾದಿ ಕಾಲದವರೆಗೆ ಆಳವಾಗಿ ಘನೀಕೃತವಾಗುತ್ತದೆ’ ಎಂದು ಅನಿಲ್‌ ಹೇಳಿದರು.

“ಆದಿತ್ಯ ಎಲ್‌-1 ಒಂದು ವಿಶಿಷ್ಟ ವಾದ ಮಿಷನ್‌ ಆಗಿದ್ದು, ಇದರಲ್ಲಿ ಪೇಲೋಡ್‌ ಹೊತ್ತೂಯ್ಯುವ 400 ಕೆ.ಜಿ. ಉಪಗ್ರಹವನ್ನು ಸೂರ್ಯನ ಸುತ್ತಲಿನ ಕಕ್ಷೆಯಲ್ಲಿ ಇರಿಸ ಲಾಗುವುದು. ಅದು ಲಾಗ್ರೇಂಜ್‌ ಪಾಯಿಂಟ್‌ ಎಲ್‌-1 ಎಂಬ ಬಿಂದು ವಿನಿಂದ ಸೂರ್ಯನನ್ನು ನಿರಂತರ ವಾಗಿ ವೀಕ್ಷಿಸಲಿದೆ’ ಎಂದು ಅವರು ವಿವರಿಸಿದರು.

“ಭೂಮಿಯಿಂದ 1.5 ಮಿಲಿಯನ್‌ ಕಿಲೋ ಮೀಟರ್‌ ದೂರದಲ್ಲಿರುವ ಕಕ್ಷೆಗೆ ಇದನ್ನು ಸೇರಿಸಲಾಗುತ್ತದೆ. ಜತೆಗೆ ಕರೋನಲ್‌ ಹೀಟಿಂಗ್‌, ಸೌರ ಮಾರುತದ ವೇಗವರ್ಧನೆ, ಕರೋನಲ್‌ ಮಾಸ್‌ ಎಜೆಕ್ಷನ್‌ ಪ್ರಾರಂ ಭಿಕ ಹಂತ, ಜ್ವಾಲೆಗಳು ಮತ್ತು ಭೂಮಿಯ ಸಮೀಪವಿರುವ ಬಾಹ್ಯಾ ಕಾಶ ಹವಾಮಾನವನ್ನು ಅರ್ಥ ಮಾಡಿ ಕೊಳ್ಳಲು ಈ ಉಪಗ್ರಹವು ಪ್ರಯತ್ನಿಸುತ್ತದೆ’ ಎಂದರು.

“ಆದಿತ್ಯ ಎಲ್‌-1 ಮತ್ತು ಚಂದ್ರ ಯಾನ-3 ಯೋಜನೆಗಳನ್ನು ಮುಂದಿನ ವರ್ಷ ಆದ್ಯತೆಯ ಮೇರೆಗೆ ಕೈಗೊಳ್ಳ ಲಾಗುವುದು. ಮುಂದಿನ ಹಂತ ದಲ್ಲಿ ಜಪಾನ್‌ ಸಹಯೋಗದಲ್ಲಿ ಶುಕ್ರ ಮತ್ತು ಚಂದ್ರನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಅನಿಲ್‌ ಭಾರದ್ವಾಜ್‌ ತಿಳಿಸಿದರು.

2025ಕ್ಕೆ ಮಂಗಳಯಾನ 2
ಇತ್ತೀಚೆಗಷ್ಟೇ ಮಂಗಳಯಾನ ಉಪಗ್ರಹ, ಇಸ್ರೋದ ಸಂಪರ್ಕದಿಂದ ಹೊರಹೋಗಿದೆ. ಹೀಗಾಗಿ ಇದರ ಕೆಲಸ ಮುಗಿದಿದೆ ಎಂದು ಘೋಷಿಸಲಾಗಿದೆ. 2015 ರಲ್ಲಿ ಮಂಗಳಯಾನ 2 ಮಿಷನ್‌ಗೆ ಇಸ್ರೋ ಸಿದ್ಧತೆ ನಡೆಸುತ್ತಿದೆ. ಎರಿ ಡೆನಿಯಾ ಬೆಸಿನ್‌ ನಲ್ಲಿ ಉಪಗ್ರಹವನ್ನು ಸಾಫ್ಟ್ ಲ್ಯಾಂಡಿಂಗ್‌ ಮಾಡಿಸುವ ಗುರಿ ಇಸ್ರೋದ್ದಾಗಿದೆ. ಇದು ಮಂಗಳ ಗ್ರಹದಲ್ಲಿರುವ ಪ್ರಾಚೀನ ಕೆರೆಯ ಭಾಗವಾಗಿದೆ. ಇದು ಒಂದು ವರ್ಷ ಕಾಲ ಮಂಗಳ ಗ್ರಹದ ಬಳಿ ಇರಲಿದೆ. ಹಾಗೆಯೇ 2030ರ ವೇಳೆಗೆ ಮಂಗಳಯಾನ 3 ಕೈಗೆತ್ತಿಕೊಳ್ಳಲಾಗು ತ್ತದೆ.

ಟಾಪ್ ನ್ಯೂಸ್

1-sad-sdasd

ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ:ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು

ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ

ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ

ಅಧಿಕಾರಕ್ಕೆ ಬರುವುದೇ ಡೌಟು… ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್

ಅಧಿಕಾರಕ್ಕೆ ಬರುವುದೇ ಡೌಟು… ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್

ಸಂಪೂರ್ಣ ಕೇಸರಿಮಯವಾದ ಮಹಾಲಿಂಗಪುರ…ಯುವಶಕ್ತಿ ಸಮಾಗಮ

ಸಂಪೂರ್ಣ ಕೇಸರಿಮಯವಾದ ಮಹಾಲಿಂಗಪುರ… ಯುವಶಕ್ತಿ ಸಮಾಗಮ

1-sadwewqwe

ಶೀಘ್ರದಲ್ಲೇ ರ‍್ಯಾಂಪ್‌ಗೆ ಹಿಂತಿರುಗುವ ಭರವಸೆ…:ಅಮಿತಾಭ್ ಹೆಲ್ತ್ ಅಪ್‌ಡೇಟ್

7 ನೂತನ ವಿ.ವಿ.ಗಳಿಗೆ ಕುಲಪತಿಗಳ ನೇಮಕ: ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ

7 ನೂತನ ವಿ.ವಿ.ಗಳಿಗೆ ಕುಲಪತಿಗಳ ನೇಮಕ: ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ

CM-@-4

ಬೋಗಸ್ ಕಾರ್ಡ್ ಗಳ ಬಿಡುಗಡೆ ಸರಣಿ ಆರಂಭ : ಸಿಎಂ ಬೊಮ್ಮಾಯಿ ಲೇವಡಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sad-sdasd

ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ:ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು

ವಕೀಲರಾಗಿ ಆಯ್ಕೆಯಾದ ಕೇರಳದ ಮೊದಲ ತೃತೀಯಲಿಂಗಿ ಪದ್ಮಲಕ್ಷ್ಮಿ !

ವಕೀಲರಾಗಿ ಆಯ್ಕೆಯಾದ ಕೇರಳದ ಮೊದಲ ತೃತೀಯಲಿಂಗಿ ಪದ್ಮಲಕ್ಷ್ಮಿ !

1-sadsad-as

ಭಾರತ ನಮ್ಮ ಅನಿವಾರ್ಯ ಪಾಲುದಾರ: ದೆಹಲಿಯಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ

1-adsadsad

ಲಂಡನ್‌ನಲ್ಲಿ ಖಲಿಸ್ತಾನಿ ಬೆಂಬಲಿಗರ ಕುಕೃತ್ಯ: ದೆಹಲಿ ಯುಕೆ ಮಿಷನ್ ಹೊರಗೆ ಪ್ರತಿಭಟನೆ

1-dsfdsfsdfsdf

ಅಮೃತಪಾಲ್ ಗಾಗಿ ಶೋಧ; ಐದು ಸಹಚರರರ ವಿರುದ್ಧ NSA ; ಐಎಸ್‌ಐ ಪಾತ್ರ?

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-sad-sdasd

ವಿಮಾನದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ:ಬ್ಯಾಂಕಾಕ್‌ಗೆ ತೆರಳುತ್ತಿದ್ದ ವ್ಯಕ್ತಿ ಮೃತ್ಯು

ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ

ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಸಿಗುತ್ತಿಲ್ಲವೆಂದರೆ… ನಿರಾಣಿ ವ್ಯಂಗ್ಯ

ವಿದ್ಯಾವಂತರಿಗೆ ಸರಕಾರ ಉದ್ಯೋಗ ನೀಡದೆ ನರೇಗಾ ಕೆಲಸಕ್ಕೆ ತಳ್ಳಿದೆ : ಶಾಸಕ ಗಣೇಶ್

ವಿದ್ಯಾವಂತರಿಗೆ ಸರಕಾರ ಉದ್ಯೋಗ ನೀಡದೆ ನರೇಗಾ ಕೆಲಸಕ್ಕೆ ತಳ್ಳಿದೆ : ಶಾಸಕ ಗಣೇಶ್

1-dsfsfsf

ಬಿದರಹಳ್ಳಿಯ ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ

ಅಧಿಕಾರಕ್ಕೆ ಬರುವುದೇ ಡೌಟು… ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್

ಅಧಿಕಾರಕ್ಕೆ ಬರುವುದೇ ಡೌಟು… ಆದರೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚುತ್ತಿದೆ: ಕಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.