ನಿಷ್ಕ್ರಿಯ ರಾಕೆಟ್ಗೆ ಜೀವ ನೀಡಲಿದೆ ಇಸ್ರೋ!
Team Udayavani, Dec 17, 2018, 6:00 AM IST
ಹೊಸದಿಲ್ಲಿ: ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಬಯಸುವ ಉಡಾಹಕದ ಕೊನೆಯ ಹಂತವೂ ಕಕ್ಷೆಗೆ ಸೇರಿ ಬಾಹ್ಯಾಕಾಶ ಕಸವಾಗುತ್ತದೆ. ಆದರೆ ಇದನ್ನೂ ಮರುಬಳಕೆ ಮಾಡಿಕೊಳ್ಳುವ ಬಗ್ಗೆ ಇಸ್ರೋ ಸಂಶೋಧನೆ ನಡೆಸುತ್ತಿದೆ. ವಿಶೇಷ ವೆಂದರೆ ವಿಶ್ವದಲ್ಲೇ ಈ ನಿಷ್ಕ್ರಿಯ ಭಾಗ ಮರುಬಳಕೆ ಮಾಡುವ ಬಗ್ಗೆ ಸಂಶೋಧನೆ ನಡೆಸುತ್ತಿರುವ ಏಕೈಕ ಬಾಹ್ಯಾಕಾಶ ಸಂಸ್ಥೆ ಇಸ್ರೋ.
ಮುಂದಿನ ತಿಂಗಳು ಪಿಎಸ್ಎಲ್ವಿ ಸಿ44 ರಾಕೆಟ್ ಮೈಕ್ರೋಸ್ಯಾಟ್ ಅನ್ನು ಹೊತ್ತೂಯ್ಯಲಿದೆ. ಹೊಸ ತಂತ್ರಜ್ಞಾನ ಬಳಸಿ ಈ ರಾಕೆಟ್ನ ಭಾಗವನ್ನು 6 ತಿಂಗಳವರೆಗೆ ಜೀವಂತವಾಗಿರಿಸಲಾಗುತ್ತದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ. ರಾಕೆಟ್ನಿಂದ ಕೊನೆಯ ಹಂತದಲ್ಲಿ ಕಳಚಿಕೊಳ್ಳುವ ಭಾಗಕ್ಕೆ ಬ್ಯಾಟರಿ ಮತ್ತು ಸೌರ ಫಲಕ ಅಳವಡಿಸಲಾಗುತ್ತದೆ. ಉಪಗ್ರಹವು ರಾಕೆಟ್ನಿಂದ ಕಳಚಿಕೊಂಡು ಕಕ್ಷೆ ಸೇರಿದ ನಂತರ ಈ ಭಾಗವು ಸಕ್ರಿಯಗೊಳ್ಳುತ್ತದೆ. ಇದನ್ನು ಬಾಹ್ಯಾ ಕಾಶ ತಂತ್ರ ಜ್ಞಾನಕ್ಕೆ ಪ್ರಾಯೋಗಿಕ ವೇದಿಕೆಯಾಗಿ ಬಳಸಬಹುದಾಗಿದೆ.
ವಿದ್ಯಾರ್ಥಿಗಳು, ವಿಜ್ಞಾನಿಗಳಿಗೆ ಉಚಿತ!: ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಇದನ್ನು ಉಚಿತವಾಗಿ ತಮ್ಮ ಬಾಹ್ಯಾಕಾಶ ಪ್ರಯೋ ಗಕ್ಕೆ ಬಳಸಿಕೊಳ್ಳಬಹುದು ಎಂದು ಇಸ್ರೋ ತಿಳಿಸಿದೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳು ಈ ಹಂತಕ್ಕೆ ಸಣ್ಣ ಪ್ರಾಯೋಗಿಕ ಮಾಡ್ನೂಲ್ಗಳನ್ನು ಲಗತ್ತಿಸಬಹುದು. ಇದರಿಂದ ಅವರು ವಿವಿಧ ಪ್ರಯೋಗ ಮಾಡಬಹುದು. ಸದ್ಯದ ಸನ್ನಿವೇಶದಲ್ಲಿ ವಿದ್ಯಾರ್ಥಿ ಗಳು ಸಣ್ಣ ಪುಟ್ಟ ಪ್ರಯೋಗಗಳನ್ನು ನಡೆಸುವು ದಕ್ಕೂ ಪ್ರತ್ಯೇಕ ಉಪಗ್ರಹ ನಿರ್ಮಿಸಿ ಅದನ್ನು ಉಡಾವಣೆ ಮಾಡಬೇಕಾಗುತ್ತದೆ. ಆದರೆ ವಿದ್ಯಾರ್ಥಿಗಳು ಪ್ರಯೋಗ ಮಾಡ ಬೇಕಿರುವ ಸಾಧನವನ್ನು ಈ ಮೂರನೇ ಹಂತಕ್ಕೆ ಜೋಡಿಸಿದರೆ, ಖರ್ಚು ಕಡಿಮೆಯಾಗುತ್ತದೆ.
ಏನಾಗುತ್ತಿತ್ತು ಕಸ?: ಸಾಮಾನ್ಯವಾಗಿ ರಾಕೆಟ್ನ ಕೊನೇ ಹಂತದಲ್ಲಿ ಉಪಗ್ರಹದಿಂದ ಕಳಚಿಕೊಳ್ಳುವ ಭಾಗವು ಉಪಗ್ರಹದ ಕಕ್ಷೆ ಯಲ್ಲೇ ಸುತ್ತು ತ್ತಿರುತ್ತದೆ. ಇದರ ಮೇಲೆ ಬಾಹ್ಯಾಕಾಶ ಕೇಂದ್ರಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ. ಇದನ್ನು ಸ್ಥಿರ ಕಕ್ಷೆಯಲ್ಲಿ ಇಡುವುದಕ್ಕಾಗಿ ನಾವು ಹೆಚ್ಚುವರಿ ಇಂಧನ ಒದಗಿಸಲಿದ್ದೇವೆ. ಸಾಮಾನ್ಯ ವಾಗಿ ಉಪಗ್ರಹದಿಂದ ಕಳಚಿಕೊಂಡ ರಾಕೆಟ್, ನಿಧಾನಕ್ಕೆ ಕುಸಿದು ಭೂಮಿಯ ವಾತಾವರಣಕ್ಕೆ ಸಿಕ್ಕು ಸುಟ್ಟುಹೋಗು ತ್ತದೆ. ಬ್ಯಾಟರಿ, ಸೌರಫಲಕ ಅಳವಡಿಸಿದರೆ ಕೆಲವು ತಿಂಗಳು ಇದನ್ನು ನಾವು ಬಳಸಿಕೊಳ್ಳಬಹುದಾಗಿದೆ.
ವಿಶ್ವದಲ್ಲೇ ಇದೇ ಮೊದಲು!
ಈವರೆಗೆ ರಾಕೆಟ್ ಮರುಬಳಕೆ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಉದ್ಯಮಿ ಎಲಾನ್ ಮಸ್ಕ್ರ ಸ್ಪೇಸ್ಎಕ್ಸ್ ಸಂಸ್ಥೆಯು ಫಾಲ್ಕನ್ 9 ರಾಕೆಟ್ ಮರುಬಳಕೆ ಮಾಡುವ ಬಗ್ಗೆ ಯಶಸ್ವಿ ಪ್ರಯೋ ಗ ಗಳನ್ನು ನಡೆಸಿದೆ. ಆದರೆ ಈ ಎಲ್ಲವೂ ಮೊದಲ ಹಂತದ ರಾಕೆಟ್ ಮೇಲೆ ಕೇಂದ್ರೀಕರಿ ಸಿವೆ. ಸಾಮಾನ್ಯವಾಗಿ ಉಪಗ್ರಹವೊಂದನ್ನು ರಾಕೆಟ್ ಕಕ್ಷೆಗೆ ಸೇರಿಸುವಲ್ಲಿ 4 ಹಂತಗಳಿರಲಿದ್ದು, ನಾಲ್ಕನೇ ಹಂತದ ಮರುಬಳಕೆ ಬಗ್ಗೆ ಯಾವುದೇ ಬಾಹ್ಯಾಕಾಶ ಸಂಸ್ಥೆ ಈವರೆಗೂ ಚಿಂತನೆ ನಡೆಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
Hong Kong ಎವರೆಸ್ಟ್, ಎಂಡಿಎಚ್ ಮಸಾಲೆ ಬ್ಯಾನ್
MUST WATCH
ಹೊಸ ಸೇರ್ಪಡೆ
Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
Police Raid: 346 ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು