ಸಾರ್ಕ್‌ ಉಪಗ್ರಹ ಮೇ 5ರಂದು ನಭಕ್ಕೆ


Team Udayavani, May 1, 2017, 11:01 AM IST

GSAT-09-i.jpg

ಹೊಸದಿಲ್ಲಿ: ಸಾರ್ಕ್‌ ದೇಶಗಳಿಗೆ ಭಾರತ ಕೊಡುಗೆಯಾಗಿ ನೀಡುತ್ತಿರುವ ಉಪಗ್ರಹ ಮೇ 5ರಂದು ಉಡಾವಣೆಗೊಳ್ಳಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ “ಇಸ್ರೋ’ ಈ ಸಂವಹನ ಉಪಗ್ರಹವನ್ನು ತಯಾರಿಸಿದ್ದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಡಾವಣೆ ಮಾಡಲಿದೆ. 

ಮೂರು ವರ್ಷಗಳ ಅವಧಿಯಲ್ಲಿ ಇಸ್ರೋ 2230 ಕೇಜಿಯ ಉಪಗ್ರಹ ನಿರ್ಮಾಣ ಮಾಡಿದ್ದು, ಜಿಸ್ಯಾಟ್‌-9 ಎಂದು ಕರೆಯುತ್ತಿದೆ. ಈ ಉಪಗ್ರಹದಲ್ಲಿ 12 ಕೆಯು ಬ್ಯಾಂಡ್‌ನ‌ ಟ್ರಾನ್ಸ್‌ ಪೌಂಡರ್‌ ಇರಲಿದ್ದು, ನೆರೆಯ ದೇಶಗಳು ವಿವಿಧ ಟೀವಿ ಕಾರ್ಯಕ್ರಮಗಳ ಪ್ರಸಾರ, ಟೆಲಿ ಮೆಡಿಸಿನ್‌, ವಿಪತ್ತು ನಿರ್ವಹಣೆ, ನೈಸರ್ಗಿಕ ಸಂಪನ್ಮೂಲ ಶೋಧ, ಮೂಲಸೌಕರ್ಯ ಅಭಿವೃದ್ಧಿಗೆ ನೆರವು ಪಡೆದುಕೊಳ್ಳಬಹು ದಾಗಿದೆ. ಒಟ್ಟು 450 ಕೋಟಿ ರೂ.ಗಳ ಉಪಗ್ರಹ ಯೋಜನೆ ಇದಾಗಿದ್ದು, ಉಪಗ್ರಹ ನಿರ್ಮಾಣಕ್ಕೆ ಭಾರತ 250 ಕೋಟಿ ರೂ. ವ್ಯಯಿಸಿದೆ. ಭಾರತದ ನೆರೆಹೊರೆಯ ದೇಶಗಳಲ್ಲಿ ಚೀನಾದ ಬಾಹುಳ್ಯ ಹೆಚ್ಚುತ್ತಿದ್ದು, ಇದಕ್ಕೆ ಪ್ರತಿಯಾಗಿ ಭಾರತ ನೆರೆಯ ದೇಶಗಳಿಗೆ ಉಪಗ್ರಹದ ಕೊಡುಗೆ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರ  ಅಧಿಕಾರ ಬಂದ ಬಳಿಕ ನೆರೆಹೊರೆಯ ದೇಶಗಳೊಂದಿಗೆ ಸಂಬಂಧ ವೃದ್ಧಿಯ ಅಂಗವಾಗಿ ಸಾರ್ಕ್‌ ಉಪಗ್ರಹವನ್ನು ಉಡಾವಣೆ ಮಾಡುವುದಾಗಿ 2014ರಲ್ಲಿ ನೇಪಾಳದಲ್ಲಿ ನಡೆದಿದ್ದ ಸಾರ್ಕ್‌ ಸಮ್ಮೇಳನದಲ್ಲಿ ಘೋಷಿಸಿದ್ದರು. 8 ಸಾರ್ಕ್‌ ದೇಶಗಳಲ್ಲಿ 7 ದೇಶಗಳು (ಪಾಕಿಸ್ಥಾನ ಹೊರತುಪಡಿಸಿ) ನೇಪಾಳ, ಬಾಂಗ್ಲಾದೇಶ, ಭೂತಾನ್‌, ಶ್ರೀಲಂಕಾ, ಮಾಲ್ಡೀವ್ಸ್‌, ಆಪಾ^ನಿಸ್ತಾನಗಳು ಉಪಗ್ರಹ ಯೋಜನೆಯಲ್ಲಿ ಭಾಗಿಯಾಗಿವೆ. ಪಾಕಿಸ್ಥಾನ ಈ ಹಿಂದೆಯೇ ಭಾರತದ ಉಪಗ್ರಹ ಯೋಜನೆಯಲ್ಲಿ ಭಾಗಿಯಾಗಲು ಮತ್ತು “ಕೊಡುಗೆ’ಯನ್ನು ತಿರಸ್ಕರಿಸುವುದಾಗಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಭಾರತ “ಸಾರ್ಕ್‌ ಉಪಗ್ರಹ’ ಬದಲಿಗೆ ಬೇರೆಯ ಹೆಸರನ್ನು ಇಡಲು ಯೋಜಿಸಿದೆ ಎಂದು ಹೇಳಲಾಗಿದೆ.
 
ಪಾಕ್‌ ಯೋಜನೆ ತಿರಸ್ಕರಿಸಿದ್ದೇಕೆ?: ಸಾರ್ಕ್‌ ಉಪಗ್ರಹ ಯೋಜನೆಯಲ್ಲಿ ಭಾಗಿಯಾಗುವುದನ್ನು ಪಾಕ್‌ ಹಿಂದೆಯೇ ತಿರಸ್ಕರಿಸಿದೆ. ಕಾರಣ ಭಾರತದಡಿ ಕೆಲಸ ಮಾಡಬೇಕಾಗುತ್ತದೆ ಎನ್ನುವುದು. ಜೊತೆಗೆ ಚೀನಾದೊಂದಿಗೆ ಪಾಕ್‌ ಬಾಹ್ಯಾಕಾಶ, ಉಪಗ್ರಹ ಕೆಲಸಗಳನ್ನು ಮಾಡುತ್ತಿದ್ದು, ಅದನ್ನು ಭಾರತದೊಂದಿಗೆ ಮಾಡಲು ತಯಾರಿಲ್ಲ. ಇನ್ನೊಂದು ರಾಜಕೀಯ ಕಾರಣಕ್ಕಾಗಿ ಅಲ್ಲಿನ ಆಡಳಿತ ಭಾರತದ ಪ್ರಸ್ತಾವವನ್ನು ತಿರಸ್ಕರಿಸಿತ್ತು.

ಬೆಲೆ ಕಟ್ಟಲಾಗದ ಕೊಡುಗೆ
ಭಾರತ ನೆರೆಯ ರಾಷ್ಟ್ರಗಳೊಂದಿಗೆ “ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌’ ಧ್ಯೇಯ ದಡಿ ಸಂಬಂಧ ವೃದ್ಧಿಗೆ ಶ್ರಮಿಸುತ್ತಿದ್ದು, “ಬೆಲೆ ಕಟ್ಟಲಾಗದ ಕೊಡುಗೆ’ಯೊಂದನ್ನು ಸಮರ್ಪಿಸುತ್ತಿದೆ ಎಂದು ಉಪಗ್ರಹ ಉಡ್ಡಯನವನ್ನು  ಪ್ರಧಾನಿ ಬಣ್ಣಿಸಿದ್ದಾರೆ. ಎಲ್ಲರೊಂದಿಗೂ ಸಹಕಾರ, ಎಲ್ಲರೊಂ ದಿಗೂ ಅಭಿವೃದ್ಧಿಯ ಚಿಂತನೆಯನ್ನು ಇಟ್ಟುಕೊಂಡೇ ನಾವು ಈ ಯೋಜನೆ ಆರಂಭಿಸಿದ್ದೇವೆ. ಎಲ್ಲರೊಂದಿಗೂ ಅಭಿವೃದ್ಧಿ ಎಂಬುದು ಭಾರತಕ್ಕೆ ಮಾತ್ರ ಸೀಮಿತ ವಾದ್ದಲ್ಲ. ಬದಲಿಗೆ ವಿಶ್ವವ್ಯಾಪಿಯಾದದ್ದು. ನೆರೆಯ ದೇಶಗಳೊಂದಿಗೆ ಸಹಕಾರದೊಂದಿಗೆ ಅಲ್ಲಿಯೂ ಅಭಿವೃದ್ಧಿಯ ಅಗತ್ಯವಿದೆ ಎಂದು ಪ್ರಧಾನಿ ತಮ್ಮ ರೇಡಿಯೋ ಕಾರ್ಯಕ್ರಮ “ಮನ್‌ಕೀ ಬಾತ್‌’ನಲ್ಲಿ ಹೇಳಿದ್ದಾರೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.