ಕಾರ್ಟೋಸ್ಯಾಟ್-2 ಉಡಾವಣೆ ಯಶಸ್ವಿ


Team Udayavani, Jan 13, 2018, 9:52 AM IST

13-8.jpg

ಶ್ರೀಹರಿಕೋಟಾ: ಹವಾಮಾನ ವೀಕ್ಷಣೆ ಸೇರಿ ಇನ್ನೂ ಅನೇಕ ಉದ್ದೇಶಗಳ ಉಪಗ್ರಹ ಕಾರ್ಟೋಸ್ಯಾಟ್-2 ಹಾಗೂ ಆರು ರಾಷ್ಟ್ರಗಳ 25 ನ್ಯಾನೋ ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ ಸಿ- 40 ಉಡಾವಣೆ ಯಶಸ್ವಿಗೊಳಿಸಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 100ನೇ ಉಪಗ್ರಹ ಉಡಾವಣೆಯೊಂದಿಗೆ, ಹೊಸ ಇತಿಹಾಸ ನಿರ್ಮಿಸಿತು.

ಪೊಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ (ಪಿಎಸ್‌ಎಲ್‌ವಿ) ಸಿ-39 ವಾಹಕ ಕಳೆದ ಆಗಸ್ಟ್‌ನಲ್ಲಿ ವಿಫ‌ಲಗೊಂಡ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಸಹಜವಾಗಿಯೇ ಒಂದು ಆತಂಕವಿತ್ತು.  ಆದರೆ ಸಿ-40 ಯಾವುದೇ ಅಡೆತಡೆ ಗಳಿಲ್ಲದೇ ಉಪಗ್ರಹವನ್ನು ನಿರೀಕ್ಷಿತ ಕಕ್ಷೆ ಸೇರಿಸುವಲ್ಲಿ ಯಶಸ್ವಿಯಾ ಗಿದೆ. 30 ಇತರೆ ಉಪಗ್ರಗಳೊಂದಿಗೆ ಕಾರ್ಟೋಸ್ಯಾಟ್-2 ಸೀರಿಸ್‌ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕ ವಿಜ್ಞಾನಿಗಳ ಎಣಿಕೆಯಂತೆ ಕಾರ್ಯನಿರ್ವಹಿಸಿದ್ದಾಗಿ ಇಸ್ರೋ ಹೇಳಿಕೊಂಡಿದೆ.

ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಉಪಗ್ರಹ ಉಡಾವಣಾ ಕೇಂದ್ರದ ಮೊದಲ ಲಾಂಚ್‌ ಪ್ಯಾಡ್‌ನ‌ಲ್ಲಿ ಬೆಳಗ್ಗೆ 5.29ಕ್ಕೇ ಅಂತಿಮ ಕ್ಷಣದ ತಯಾರಿ ಮಾಡಿಕೊಂಡಿದ್ದ  ಇಸ್ರೋ 9.29ಕ್ಕೆ ತೆಳುವಾದ ಮೋಡಗಳ ನಡುವೆ ಉಡಾವಣೆ ಮಾಡಿತು. ಕೆನಡ, ಫಿನ್‌ಲೆಂಡ್‌, ಫ್ರಾನ್ಸ್‌, ಕೊರಿಯಾ, ದಿ ಯುನೈಟೆಡ್‌ ಕಿಂಗ್‌ಡಮ್‌ ಹಾಗೂ ಅಮೆರಿಕ ದೇಶಗಳ ನ್ಯಾನೋ ಉಪಗ್ರಹಗಳು ಇದ್ದವು.

ಅಧ್ಯಕ್ಷ ಹರ್ಷ: ಉಡಾವಣೆ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌, ಇದೇ ಸರಣಿ ಹಾಗೂ ಸಾಮರ್ಥ್ಯದ ರಾಕೆಟ್‌ ಅನ್ನು ಕಳೆದ ಆಗಸ್ಟ್‌ನಲ್ಲಿ ಉಡಾ ವಣೆ ಮಾಡಲಾಗಿತ್ತು.  ಇದೀಗ ಅದೇ ಸರಣಿಯ ರಾಕೆಟ್‌ ಸಿ-40 ಉಡಾವಣೆ ಯನ್ನು ನಮ್ಮ ತಂಡ ಯಶಸ್ವಿಯಾಗಿಸಿದೆ. ಇದು ದೇಶದ ಜನತೆಗೆ ಇಸ್ರೋ ನೀಡುವ ಹೊಸ ವರ್ಷದ ಗಿಫ್ಟ್ ಎಂದಿದ್ದಾರೆ. ಕಾಟೋìಸ್ಯಾಟ್‌, ನ್ಯಾನೋಸ್ಯಾಟ್‌ ಹಾಗೂ ಮೈಕ್ರೋ ಸ್ಯಾಟ್‌ಲೈಟ್‌ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ಇದಕ್ಕೂ ಪಾಕ್‌ ಕ್ಯಾತೆ 
ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಬೆನ್ನಿಗೇ ಸಾಂಪ್ರದಾ ಯಿಕ ವೈರಿ ಪಾಕಿಸ್ಥಾನ ನಿರೀಕ್ಷೆ ಯಂತೆ ಕ್ಯಾತೆ ತೆಗೆದಿದೆ. ಈ ಉಪ ಗ್ರಹದಿಂದ ಪ್ರಾದೇಶಿಕ ಕಾರ್ಯ ತಂತ್ರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದೆ. ಭಾರತ ಈ ಮೂಲಕ ಪಾಕಿಸ್ಥಾನ ವನ್ನು ಗುರಿಯಾಗಿಸಿ ಕೊಳ್ಳಲಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದೆ.

ದೈತ್ಯ ಪಿಎಸ್‌ಎಲ್‌ವಿ
ಕಾರ್ಟೋಸ್ಯಾಟ್-2 ಹಾಗೂ 30 ಇತರೆ ಉಪಗ್ರಹ ಒಳಗೊಂಡ ಪಿಎಸ್‌ಎಲ್‌ವಿ ಸಿ-40 ಈ ಮಾದರಿಯ ವಾಹಕಗಳ ಪೈಕಿ ಅತಿದೊಡ್ಡದು. 737.5 ಕೆ.ಜಿ ತೂಕದ ಈ ವಾಹನ 44.4 ಮೀಟರ್‌ ಎತ್ತರದ್ದಾಗಿತ್ತು. 

ಇಸ್ರೋ 100ನೇ ಉಪಗ್ರಹ ಉಡಾಯಿಸಿ ಮಹತ್ವದ ಸಾಧನೆ ಮಾಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂದು ತೋರಿಸಿದಂತಾಗಿದೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ

ಇಸ್ರೋ ಪಿಎಸ್‌ಎಲ್‌ವಿ ಸಿ-40 ಯಶಸ್ವಿ ಉಡಾವಣೆ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ನಿಖರ ನಿರ್ಧಾರ, ಕಠಿಣ ಶ್ರಮದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಏನೆನ್ನುವುದು ಗೊತ್ತಾಗುವಂತಾಗಿದೆ.
ರಾಹುಲ್‌ ಗಾಂಧಿ, ಕಾಂಗ್ರೆಸ್‌  ಅಧ್ಯಕ್ಷ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.