ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವುದು ನ್ಯಾಯವಲ್ಲ: ಅರ್ಲೇಕರ್
Team Udayavani, Jul 12, 2021, 2:19 PM IST
ಪಣಜಿ: ರಾಜ್ಯಪಾಲರು ಯಾವಾಗಲೂ ತಟಸ್ಥರಾಗಿರಬೇಕು. ಯಾವುದೇ ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವುದು ನ್ಯಾಯವಲ್ಲ. ನನಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ನಾನು ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಗೋವಾ ವಿಧಾನಸಭೆಯ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ಅಭಿಪ್ರಾಯಪಟ್ಟರು.
ಆರ್.ಎಸ್.ಎಸ್ ಮತ್ತು ಬಿಜೆಪಿ ಸಂಸ್ಕøತಿಯಲ್ಲಿ ನನಗೆ ವಹಿಸಿದ ಯಾವುದೇ ಜವಾಬ್ದಾರಿಯನ್ನು ಪೂರ್ಣ ಹೃದಯದಿಂದ ನಿರ್ವಹಿಸಲು ಕಲಿಸಿದೆ ಎಂದು ರಾಜೇಂದ್ರ ಅರ್ಲೇಕರ್ ನುಡಿದರು.
ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಗೋವಾ ರಾಜ್ಯ ವಿಧಾನಸಭೆಯ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ರವರು ಸೋಮವಾರ ಮಧ್ಯಾನ್ಹ ಶಿಮ್ಲಾಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಪುಷ್ಪಗುಚ್ಛ ನೀಡಿ ಶುಭಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ನಗರಾಭಿವೃದ್ದಿ ಸಚಿವ ಮಿಲಿಂದ ನಾಯ್ಕ, ದಕ್ಷಿಣ ಗೋವಾ ಮಾಜಿ ಸಂಸದ ನರೇಂದ್ರ ಸಾವೈಕರ್, ದಾಮೋದರ ನಾಯ್ಕ, ಕಾರ್ಲುಸ್ ಅಲ್ಮೆದಾ ಮತ್ತಿತರರು ಉಪಸ್ಥಿತರಿದ್ದು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ರಾಜೇಂದ್ರ ಅರ್ಲೇಕರ್ ರವರಿಗೆ ಶುಭಕೋರಿದರು. ನಂತರ ವಾಸ್ಕೊ ದಾಬೋಲಿಂ ವಿಮಾನ ನಿಲ್ದಾಣದ ಮೂಲಕ ಚಂದೀಗಢ ಮಾರ್ಗವಾಗಿ ಶಿಮ್ಲಾಕ್ಕೆ ಪ್ರಯಾಣ ಬೆಳೆಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು