ಸುಪ್ರೀಂನಲ್ಲಿ ಪ್ರಶ್ನಿಸುವುದು ಕಷ್ಟ
Team Udayavani, Aug 7, 2019, 4:00 AM IST
ಸಂಸತ್ನಲ್ಲಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದರೆ, ಸರ್ಕಾರದ ನಿರ್ಧಾರಕ್ಕೆ ನ್ಯಾಯಾಲಯದ ಒಪ್ಪಿಗೆ ಸಿಗುವ ಸಂಪೂರ್ಣ ಭರವಸೆ ನನಗಿದೆ ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ. 370ನೇ ವಿಧಿ ರದ್ದು ನಿರ್ಧಾರವನ್ನು ಪ್ರಶ್ನಿಸಿವುದು ಕಷ್ಟ ಎಂದು ಕಾನೂನು ತಜ್ಞ, ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರೂ ಅಭಿಪ್ರಾಯಪಟ್ಟಿದ್ದಾರೆ.
“ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ ವರ್ಸಸ್ ಸಂತೋಷ್ ಗುಪ್ತಾ ಪ್ರಕರಣ ಸಂಬಂಧ 2016ರಲ್ಲಿ ನ್ಯಾ.ಕುರಿಯನ್ ಜೋಸೆಫ್ ಮತ್ತು ನ್ಯಾ. ನಾರಿಮನ್ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠವು ನೀಡಿರುವ ತೀರ್ಪು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಒಂದು ವಿಚಾರವನ್ನಂತೂ ಇತ್ಯರ್ಥಪ ಡಿಸಿದೆ. ಜಮ್ಮು-ಕಾಶ್ಮೀರವು ಯಾವಾಗ ವಿಲೀನ ಪತ್ರ(ಇನ್ಸ್ಟ್ರೆ ಮೆಂಟ್ ಆಫ್ ಆಕ್ಸೆಷನ್)ಕ್ಕೆ ಸಹಿ ಹಾಕಿ ಭಾರತದೊಂದಿಗೆ ಸೇರ್ಪಡೆ ಯಾಯಿತೋ, ಅಂದಿನಿಂದಲೇ ಆ ರಾಜ್ಯವು ಸಾರ್ವ ಭೌಮತೆಯ ಅಂಶವನ್ನು ಕಳೆದುಕೊಂಡಿತು ಎಂದು ಕೋರ್ಟ್ ಹೇಳಿದೆ. ಈಗ ಕೇಂದ್ರ ಸರ್ಕಾರವು ವಿಧಾನಸಭೆ ವಿಸರ್ಜಿಸಿರುವಾಗಲೇ ಗವರ್ನರ್ರ ಒಪ್ಪಿಗೆ ಪಡೆಯುವ ಮೂಲಕ ಕಾನೂನಾತ್ಮಕ ವಾಗಿ ಎಲ್ಲ ರೀತಿಯಲ್ಲೂ ಬೇಲಿ ಹಾಕಿಕೊಂಡಿದೆ’ ಎನ್ನುತ್ತಾರೆ ಲೂಥ್ರಾ.