ಯೋಧನ ಮನೆಗೆ ನುಗ್ಗಿ ಕೊಂದರು
Team Udayavani, Sep 18, 2018, 6:59 AM IST
ಶ್ರೀನಗರ: ಕಾಶ್ಮೀರದ ಕುಲ್ಗಾಂವ್ನಲ್ಲಿ ಓರ್ವ ಯೋಧನ ಮನೆಗೆ ನುಗ್ಗಿದ ಉಗ್ರರು, ಆತನ ತಲೆಗೆ ಗುಂಡಿಟ್ಟು ಹತ್ಯೆಗೈದ ಘಟನೆ ಸೋಮವಾರ ನಡೆದಿದೆ. ಟೆರಿಟೋರಿಯಲ್ ಆರ್ಮಿಯ ಯೋಧ ಮುಖಾರ್ ಅಹಮದ್ ಮಲಿಕ್ರ ಕುಲ್ಗಾಂವ್ನ ಶುರತ್ನಲ್ಲಿರುವ ಮನೆಗೆ ತೆರಳಿದ ಉಗ್ರರ ಗುಂಪು ಮನಸೋ ಇಚ್ಛೆ ಗುಂಡು ಹಾರಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಮಲಿಕ್ ತಲೆಗೇ ಗುಂಡು ಹಾರಿಸಿದ್ದು, ಅವರನ್ನು ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆಯೇ ಕೊನೆ ಯುಸಿರೆಳೆದಿದ್ದಾರೆ.ಟೆರಿಟೋರಿಯಲ್ ಆರ್ಮಿಯಲ್ಲಿ ಯೋಧರಾಗಿದ್ದ ಮಲಿಕ್ರನ್ನು ಶ್ರೀನಗರದಲ್ಲಿ ನಿಯೋಜಿಸಲಾಗಿತ್ತು.
ಮಗನ ಸಾವಿನ ಬೆನ್ನಲ್ಲೇ: ದುರಂತವೆಂದರೆ, ಯೋಧ ಮಲಿಕ್ ಅವರ 18 ವರ್ಷದ ಪುತ್ರ 2 ದಿನಗಳ ಹಿಂದಷ್ಟೇ (ಸೆ.15) ಅಪಘಾತಕ್ಕೀಡಾಗಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ತುರ್ತು ರಜೆ ಪಡೆದು ಮಲಿಕ್ ಅವರು ಮನೆಗೆ ಬಂದಿದ್ದರು. ಅವರ ಕುಟುಂಬವು ಸೋಮವಾರ ಸಾವಿನ ಅನಂತರ 3ನೇ ದಿನದ ವಿಧಿ ವಿಧಾನಗಳನ್ನು ಪೂರೈಸುವ ಸಿದ್ಧತೆಯಲ್ಲಿ ತೊಡಗಿತ್ತು. ಅಷ್ಟರಲ್ಲಿ, ಏಕಾಏಕಿ ಉಗ್ರರು ಗುಂಪು ಮನೆಯೊಳಗೆ ನುಗ್ಗಿ, ಮಲಿಕ್ರನ್ನು ಹುಡುಕತೊಡಗಿತು. ಮೊದಲ ಮಹಡಿಯಲ್ಲಿ ಮಲಿಕ್ ಸಿಕ್ಕಿದೊಡನೆ, ಸೇನೆಯ ನಿಯೋಜನೆ ಕುರಿತು ಸರಣಿ ಪ್ರಶ್ನೆಗಳನ್ನು ಕೇಳತೊಡಗಿತು. ಆಗ ಯೋಧ ಮಲಿಕ್, “ಬೇಕಿದ್ದರೆ ನನ್ನನ್ನು ಶೂಟ್ ಮಾಡಿ ಕೊಂದು ಬಿಡಿ. ಆದರೆ, ಸೇನೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ’ ಎಂದರು. ಕೂಡಲೇ ಉಗ್ರರು ತೀರಾ ಹತ್ತಿರದಿಂದಲೇ ಅವರ ತಲೆಗೆ ಗುಂಡಿಟ್ಟು ಹತ್ಯೆಗೈದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ