ಜೈನರೇ ಹೆಚ್ಚು ಶ್ರೀಮಂತರು
Team Udayavani, Jan 14, 2018, 11:19 AM IST
ಹೊಸದಿಲ್ಲಿ: ದಿಲ್ಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿನ ಜನರೇ ಹೆಚ್ಚು ಶ್ರೀಮಂತರು. ದೇಶದಲ್ಲಿರುವ ಧರ್ಮಗಳ ಮಂದಿಗೆ ಹೋಲಿಸಿದರೆ, ಜೈನ ಧರ್ಮಕ್ಕೆ ಸೇರಿದವರೇ ಸಿರಿವಂತರು.
ಹೀಗೆಂದು ಹೇಳಿರುವುದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್-4). 2015-16ರ ಅವಧಿ ಯಲ್ಲಿ 6 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಬಳಸಿಕೊಂಡು ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರಗಳು ತಿಳಿದುಬಂದಿವೆ. ಟೆಲಿವಿಷನ್, ಬೈಸಿಕಲ್ನಂಥ ಗೃಹೋಪಯೋಗಿ ವಸ್ತುಗಳು, ಶುದ್ಧ ಕುಡಿಯುವ ನೀರಿನ ಲಭ್ಯತೆ ಮತ್ತಿತರ ವಿಚಾರಗಳ ಆಧಾರದಲ್ಲಿ ಸಂಪತ್ತಿನ ಸೂಚ್ಯಂಕ ವನ್ನು ಅಂದಾಜಿಸಲಾಗಿದೆ. ಅದರಂತೆ, ದಿಲ್ಲಿ ಅತ್ಯಂತ ಶ್ರೀಮಂತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ಬಿಹಾರವು ಅತ್ಯಂತ ಬಡ ರಾಜ್ಯವಾಗಿದ್ದು, ಇಲ್ಲಿನ ಅರ್ಧಕ್ಕೂ ಹೆಚ್ಚು ಕುಟುಂಬಗಳು ಬಡತನದಲ್ಲೇ ದಿನದೂಡುತ್ತಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಇನ್ನು ಧರ್ಮಾಧಾರಿತ ಸಮೀಕ್ಷೆಯನ್ನು ನೋಡಿದರೆ, ಜೈನ ಸಮುದಾಯದ ಜನ ಸಂಖ್ಯೆಯ ಪೈಕಿ ಶೇ.70ರಷ್ಟು ಮಂದಿ ಉತ್ತಮ ಸಂಪತ್ತು ಹೊಂದಿದ್ದಾರೆ. ಈ ವಿಚಾರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹೇಳಿಕೊಳ್ಳುವಂಥ ಅಂತರವೇನೂ ಇಲ್ಲ. ಆದರೆ, ಜಾತಿಗೆ ಅನುಗುಣವಾಗಿ ನೋಡಿದರೆ, ಇತರೆಲ್ಲ ಜಾತಿಗಳಿಗಿಂತಲೂ ಮೇಲ್ವರ್ಗದವರ ಲ್ಲಿನ ಆಸ್ತಿ ಪಾಸ್ತಿಯ ಪ್ರಮಾಣವೇ ಹೆಚ್ಚು ಎಂದು ಸಮೀಕ್ಷೆ ಹೇಳಿದೆ.
ಒಟ್ಟಿನಲ್ಲಿ ಆದಾಯ ಮತ್ತು ಸಂಪತ್ತಿನಲ್ಲಿ ಭಾರೀ ಪ್ರಮಾಣದ ಅಸಮಾನತೆ ಎದ್ದು ಕಾಣುತ್ತಿದ್ದು, ಇದೊಂದು ಆತಂಕಕಾರಿ ಸಂಗತಿ. ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ