ಚೀನ ಲಿಖಿತ ಒಪ್ಪಂದ ಪಾಲಿಸದೆ ಇದ್ದದ್ದೇ ಗಡಿ ಬಿಕ್ಕಟ್ಟಿಗೆ ಕಾರಣ
Team Udayavani, Feb 13, 2022, 8:10 AM IST
ಮೆಲ್ಬರ್ನ್: ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಬಳಿ ಗಡಿ ತಂಟೆ ಬಿಗಡಾಯಿಸಲು 2020ರ ಲಿಖೀತ ಒಪ್ಪಂದಗಳನ್ನು ಪಾಲಿಸಲು ಚೀನ ನಿರಾಕರಿಸಿದ್ದೇ ಕಾರಣ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಶನಿವಾರ ಮೆಲ್ಬರ್ನ್ನಲ್ಲಿ ಮಾತನಾಡಿದ ಅವರು, ಬೀಜಿಂಗ್ ಹೊಂದಿರುವ ಧೋರ ಣೆಗಳು ಅಂತಾರಾಷ್ಟ್ರೀಯವಾಗಿ ಕಳವಳ ಮೂಡಿಸುವ ಸಂಗತಿಗಳಾಗಿವೆ ಎಂದಿದ್ದಾರೆ. ಇಂಡೋ-ಪೆಸಿಫಿಕ್ ವಲಯವನ್ನು ಚೀನ ಆತಂಕದ ಛಾಯೆಯಿಂದ ಮುಕ್ತಗೊಳಿಸಬೇಕು ಎಂಬ ಕ್ವಾಡ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ನಡುವೆಯೇ ಜೈಶಂಕರ್ ಈ ಮಾತುಗಳನ್ನಾಡಿದ್ದಾರೆ.
ಸಭೆಯಲ್ಲಿ ಭಾರತ ಮತ್ತು ಚೀನ ಗಡಿ ತಂಟೆ ಚರ್ಚೆಗೆ ಬಂದಿತ್ತೇ ಎಂಬ ಮಾಧ್ಯ ಮದವರ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್ “ಕ್ವಾಡ್ ಸಚಿವರ ಸಭೆಯಲ್ಲಿ ಚೀನ ತಂಟೆಯ ಬಗ್ಗೆ ಚರ್ಚೆಯಾಗಿದೆ. ನಮ್ಮ ನೆರೆಹೊರೆಯ ರಾಷ್ಟ್ರದ ಜತೆಗೆ ಇರುವ ಬಾಂಧವ್ಯದ ಬಗ್ಗೆ ಎಲ್ಲ ರಾಷ್ಟ್ರಗಳು ಪ್ರಸ್ತಾವ ಮಾಡಿವೆ’ ಎಂದರು. ಇದೇ ವೇಳೆ, ಕೊರೊನೋತ್ತರ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಪ್ರಯಾಣಿಕರ ಭೇಟಿಗೆ ಅವಕಾಶ ಕೊಟ್ಟದ್ದು ಸ್ವಾಗತಾರ್ಹ ಎಂದರು. ಇದರಿಂದಾಗಿ ಆಸೀಸ್ನ ಪ್ರಜೆಗಳಿಗೆ ಮಾತ್ರವಲ್ಲದೆ, ಭಾರತದ ವಿದ್ಯಾರ್ಥಿಗಳಿಗೆ ಕೂಡ ಅನುಕೂಲವಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೀನದಿಂದ ಭಾರತಕ್ಕೆ ಸಮಸ್ಯೆ: ಚೀನ ದಿಂದಾಗಿ ಭಾರತ ಅತ್ಯಂತ ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ ಎಂದು ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಅಮೆರಿಕ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಬೈಡೆನ್ ಸರಕಾರ ಇದೇ ಮೊದಲ ಬಾರಿಗೆ ಪ್ರಾದೇಶಿಕ ವಾರು ಅಧ್ಯಯನ ನಡೆಸಿದ್ದು, ಅದರಲ್ಲಿ ಇಂಡೋ-ಪೆಸಿಫಿಕ್ ವ್ಯಾಪ್ತಿಯೂ ಸೇರಿದೆ. ಈ ಪ್ರದೇಶದಲ್ಲಿ ಭಾರತ ಒಂದು ಪ್ರಮುಖ ರಾಷ್ಟ್ರವಾಗಿ ಬೆಳೆಯಲು ಅಮೆರಿಕ ಯಾವತ್ತೂ ಬೆಂಬಲ ನೀಡಲಿದೆ. ಅದಕ್ಕಾಗಿ ಆ ದೇಶದ ಜತೆಗೆ ಅತ್ಯುತ್ತಮ ಬಾಂಧವ್ಯ ಹೊಂದಲು ನೆರವಾಗುತ್ತೇವೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್