ಭದ್ರತೆ ಹೆಚ್ಚಳಕ್ಕಾಗಿ ಸೇನೆಗೆ ಆರ್ಥಿಕ ಸ್ವಾತಂತ್ರ್ಯ
Team Udayavani, Jul 29, 2017, 9:40 AM IST
ಹೊಸದಿಲ್ಲಿ: ಇತ್ತೀಚೆಗೆ ಸೇನಾ ಪಡೆಗೆ ಬೇಕಾದ ಶಸ್ತ್ರ ಖರೀದಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ಕೊಟ್ಟ ಬೆನ್ನಲ್ಲೇ ಕೇಂದ್ರ ಸರಕಾರ, ದೇಶಾದ್ಯಂತ ಸೂಕ್ಷ್ಮ ಸೇನಾ ನೆಲೆಗಳ ಭದ್ರತೆ ಹೆಚ್ಚಳಕ್ಕೆ ಮೂರೂ ಪಡೆಗಳಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ನೀಡಲು ಮುಂದಾಗಿದೆ. ಇದರೊಂದಿಗೆ ಪಡೆಗಳಿಗೆ ನಿರ್ದಿಷ್ಟ ಸಮಯ ಮತ್ತು ಆದ್ಯತೆ ಮೇರೆಗೆ ಸೂಕ್ಷ್ಮ ಸೇನಾ ನೆಲೆಗಳ ಸಂಪೂರ್ಣ ಭದ್ರತೆ ಕೈಗೊಳ್ಳಲು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಖಡಕ್ಕಾಗಿ ಸೂಚಿಸಿದ್ದಾರೆ.
ಇದಕ್ಕಾಗಿ ಭೂಸೇನೆ, ವಾಯು ಸೇನೆ, ನೌಕಾಸೇನೆಗ ಉಪಮುಖ್ಯಸ್ಥರಿಗೆ ತಲಾ 800 ಕೋಟಿ ರೂ.ವರೆಗೆ ಹಣಕಾಸು ವೆಚ್ಚಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. 3 ಸಾವಿರ ಸೂಕ್ಷ್ಮ ಸೇನಾ ನೆಲೆಗಳನ್ನು ಗುರುತಿಸಲಾಗಿದ್ದು ಇವುಗಳಲ್ಲಿ ಮೂರು ಪಡೆಗಳಿಗೆ ಸೇರಿದ 600 ಅತಿ ಸೂಕ್ಷ್ಮ ನೆಲೆಗಳಿವೆ ಎನ್ನಲಾಗಿದೆ. ಇತ್ತೀಚೆಗೆ ಸಶಸ್ತ್ರಪಡೆಗಳು ಸರಕಾರದಿಂದ ನೆಲೆಗಳ ಭದ್ರತೆ ಹೆಚ್ಚಳಕ್ಕೆ 2 ಸಾವಿರ ಕೋಟಿ ರೂ. ಅನುದಾನ ಕೇಳಿದ್ದವು.
ಚೀನ ಅಧ್ಯಕ್ಷರ ಜೊತೆ ದೋವಲ್ ಭೇಟಿ:
ಇತ್ತ ಬ್ರಿಕ್ಸ್ ದೇಶಗಳ ರಕ್ಷಣಾ ಸಲಹೆಗಾರರೊಂದಿಗೆ ಭಾರತೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರು ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗಿದ್ದಾರೆ. ಆದರೆ ಭೇಟಿಯ ಅವಧಿಯಲ್ಲಿ ಸಿಕ್ಕಿಂ-ಡೋಕ್ಲಾಂ ವಿಚಾರವೇನಾದರೂ ಪ್ರಸ್ತಾವ ಆಗಿದೆಯೇ ಎಂಬುದರ ಬಗ್ಗೆ ಸರಕಾರದ ಮೂಲಗಳು ಏನನ್ನೂ ಹೇಳಿಲ್ಲ. ಬ್ರಿಕ್ಸ್ ದೇಶಗಳು ಪ್ರಮುಖ ಸಮಸ್ಯೆಗಳು ಮತ್ತು ದ್ವಿಪಕ್ಷೀಯ ಅಂಶಗಳ ಬಗ್ಗೆಯಷ್ಟೇ ಕ್ಸಿ ಜತೆಗಿನ ಮಾತುಕತೆಯಲ್ಲಿ ಪ್ರಸ್ತಾಪವಾಗಿದೆ ಎಂದು ಚೀನದ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ನಿಫ್ಟಿ ಕೊಡಿ, ಡೋಕ್ಲಾ ತಗೊಳ್ಳಿ!: ಚೀನ-ಭಾರತ ಮಧ್ಯೆ ಡೋಕ್ಲಾ ಗಡಿ ತಕರಾರಿನ ನಡುವೆಯೇ, ‘ನಿಮ್ಮ ನಿಫ್ಟಿ ಕೊಡಿ, ಡೋಕ್ಲಾಂ ತಗೊಳ್ಳಿ’ ಎಂಬ ಮಾತುಗಳು ಕೇಳಿಬಂದಿವೆ. ಕಾರಣ ಭಾರತದ ನಿಫ್ಟಿ ಷೇರು ಸೂಚ್ಯಂತ ಸತತ ಏರಿಕೆ ದಾಖಲಿಸುತ್ತಿದ್ದು, ಚೀನ ಷೇರು ಮಾರುಕಟ್ಟೆ ಗಮನಾರ್ಹ ಏರಿಕೆಯೇ ಕಂಡಿಲ್ಲ. ಈ ಬಗ್ಗೆ ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದನ್ನು ಚೀನದ ಪೀಪಲ್ಸ್ ಡೈಲಿ ಪತ್ರಿಕೆ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ನಿಫ್ಟಿ 10 ಸಾವಿರದ ಗಡಿ ದಾಟಿರುವುದಲ್ಲದೆ, ಶೇ.22ರಷ್ಟು ಏರಿಕೆ ಕಂಡಿದೆ. ಅದೇ ಅವಧಿಯಲ್ಲಿ ಚೀನದ ಶಾಂಘೈ ಮತ್ತು ಶೆನ್ಝೆನ್ ಮಾರುಕಟ್ಟೆ ಕೇವಲ ಶೇ.5ರಷ್ಟು ಏರಿಕೆ ಕಂಡಿದೆ ಎನ್ನಲಾಗಿದೆ.
ಆಕಾಶ್ ಕ್ಷಿಪಣಿ ವಿಫಲ
ಮೇಕ್ ಇನ್ ಇಂಡಿಯಾ ಯೋಜನೆಗೆ ಹಿನ್ನಡೆ ಆಗುವಂಥ ಅಂಶವೊಂದು ಹೊರಬಿದ್ದಿದ್ದು, ಆಕಾಶ್ ಕ್ಷಿಪಣಿ ಎಲ್ಲ ರೀತಿಯ ಪರೀಕ್ಷೆಗಳಲ್ಲಿ ವಿಫಲವಾಗಿದೆ. ಹೀಗೆಂದು ಮಹಾಲೇಖಪಾಲರ ವರದಿ ಉಲ್ಲೇಖೀಸಿದೆ. ಅದಕ್ಕಾಗಿ ಒಟ್ಟು 3,600 ಕೋಟಿ ರೂ. ವಿನಿಯೋಗಿಸಲಾಗಿದೆ. ಅದರ ತಯಾರಿಕೆಯಲ್ಲಿ ಉಂಟಾದ ಹಿನ್ನಡೆ ಯುದ್ಧ ಸಂದರ್ಭಗಳಲ್ಲಿ ಆತಂಕ ತಂದೊಡ್ಡಲಿದೆ ಎಂದು ಹೇಳಲಾಗಿದೆ. ಸರಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ನಲ್ಲಿ ಅದನ್ನು ಉತ್ಪಾದಿಸಲಾಗುತ್ತಿದೆ. ಒಟ್ಟು ಆರು ಕೇಂದ್ರಗಳನ್ನು ನಿಗದಿ ಮಾಡಲಾಗಿದ್ದರೂ ಹಿಂದಿನ 7 ವರ್ಷಗಳಲ್ಲಿ ಒಂದರಲ್ಲಿಯೂ ಕ್ಷಿಪಣಿಯನ್ನು ಅಳವಡಿಸಲಾಗಿಲ್ಲ ಎಂದು ವರದಿಯಲ್ಲಿ ಆಕ್ಷೇಪಿಸಲಾಗಿದೆ. ವರದಿ ಬಗ್ಗೆ ಐಎಎಫ್ ಮೌನ ವಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
MUST WATCH
ಹೊಸ ಸೇರ್ಪಡೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
Rural Life: ಗ್ರಾಮೀಣ ಬದುಕಿನ ಮೆಲುಕು