ರಾಜ್ಯಸಭೆ ಕಲಾಪದ ಒಂದು ಚರ್ಚೆಗೆ 35 ಸಾವಿರ ರೂ. ಖರ್ಚು ಮಾಡಿದ್ದ ಜೇಟ್ಲಿ!
Team Udayavani, Aug 24, 2019, 3:27 PM IST
ಹೊಸದಿಲ್ಲಿ: ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರೆಂದರೆ ಪಕ್ಕಾ. ಪ್ರತಿ ಚರ್ಚೆಯಲ್ಲೂ ಸೂಕ್ತ ಸಾಕ್ಷ್ಯಾಧಾರ, ಕಾನೂನು ವಿಚಾರಗಳನ್ನಿಟ್ಟುಕೊಂಡೇ ಮಾತಿಗೆ ನಿಲ್ಲುತ್ತಿದ್ದರು. ಆದ್ದರಿಂದ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಿರುವಾಗ ಎದುರು ಮಾತನಾಡಲು ಯಾರೂ ಹೋಗುತ್ತಿರಲಿಲ್ಲ. ಇಂತಹ ಅಭ್ಯಾಸ ಹೊಂದಿದ್ದ ಜೇಟ್ಲಿ ಅವರು ರಾಜ್ಯಸಭೆಯ ಕಲಾಪದ ಒಂದು ಹೊತ್ತಿನ ಚರ್ಚೆಗೆ ತಾವು ಮಾತನಾಡಲೆಂದೇ 35 ಸಾವಿರ ರೂ. ಖರ್ಚು ಮಾಡಿದ್ದರು.
ಜೇಟ್ಲಿ ಅವರು ಮಾಜಿ ನ್ಯಾ|ಸೌಮಿತ್ರ ಸೇನ್ ಅವರ ವಾಗ್ಧಂಡನೆ ಕುರಿತಾಗಿ ರಾಜ್ಯಸಭೆಯಲ್ಲಿ ಮಾತನಾಡುವವರಿದ್ದರು. ಬೆಳಗ್ಗೆ ಜೇಟ್ಲಿ ಕಲಾಪಕ್ಕೆ ಬರುತ್ತಲೇ ಎಲ್ಲ ಸದಸ್ಯರಿಗೂ, ಅಧ್ಯಕ್ಷರಿಗೂ ಅಚ್ಚರಿ ಕಾರಣ, ಜೇಟ್ಲಿ ಅವರು ಪುಸ್ತಕಗಳ ದೊಡ್ಡ ಹೊರೆ ಹಿಡಿದುಕೊಂಡು ಬಂದಿದ್ದರು. ಎಲ್ಲವೂ ಹೊಸ ಪುಸ್ತಕಗಳೇ. ಹಾಗೆ ಬಂದವರೇ ಮಾತನಾಡಲು ಶುರುಮಾಡಿ ವಾಗ್ಧಂಡನೆ, ಕಾನೂನು ಹೇಗೆ ಏನು ಎತ್ತ? ಎಂದು ನಿರರ್ಗಳವಾಗಿ ಸಾಕ್ಷ್ಯಾಧಾರ ಸಮೇತ ಮಾತನಾಡಿದ್ದರು.
ಅವರು ಮಾತನಾಡಿ ಹೊರಗೆ ಬರುತ್ತಲೇ ಪತ್ರಕರ್ತರೂ ತಡೆಯಲಾರದೆ ಕೇಳಿಯೇ ಬಿಟ್ಟಿದ್ದರು. ಆಗ ಜೇಟ್ಲಿ ಅವರು ಕಾನೂನು ಕುರಿತಾಗಿ ಮಾತನಾಡಲು ತಾನು 35 ಸಾವಿರ ರೂ. ಮೌಲ್ಯದ ಪುಸ್ತಕ ಖರೀದಿಸಿದ್ದಾಗಿ ಹೇಳಿದ್ದರು. ಇನ್ನು ಸೌಮಿತ್ರ ಸೇನ್ ಅವರ ಪ್ರಕರಣದಲ್ಲಿ ರಾಜ್ಯಸಭೆಯಲ್ಲಿ ವಾಗ್ಧಂಡನೆ ಬಗ್ಗೆ ಪಾಸ್ ಆದರೂ ಲೋಕಸಭೆಗೆ ಅದು ಹೋಗುವ ಮುನ್ನವೇ ಸೇನ್ ಅವರು ರಾಜೀನಾಮೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ