ಪಾಕ್ ಜನನಿಬಿಡ ತಾಣಕ್ಕೆ ಜೈಶ್ ಉಗ್ರರು ಶಿಫ್ಟ್: ಪ್ರಜೆಗಳೇ ಗುರಾಣಿ
Team Udayavani, Feb 18, 2019, 12:30 PM IST
ಹೊಸದಿಲ್ಲಿ : 40 ಯೋಧರನ್ನು ಬಲಿಪಡೆಯಲಾಗಿರುವ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ಪಿಓಕೆಯಲ್ಲಿನ ತಮ್ಮ ತಾಣಗಳ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಬಹುದೆನ್ನುವ ಲೆಕ್ಕಾಚಾರದಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ತಮ್ಮ ಅಡಗುದಾಣಗಳನ್ನು ಪಾಕಿಸ್ಥಾನದ ಜನನಿಬಿಡ ಪ್ರದೇಶಗಳಿಗೆ ಸ್ಥಳಾಂತರಿಸಿರುವುದಾಗಿ ವರದಿಗಳು ಹೇಳಿವೆ.
ಜನನಿಬಿಡ ತಾಣಗಳ ಮೇಲೆ ಭಾರತ ದಾಳಿ ಮಾಡುವುದಿಲ್ಲ ಎಂಬ ಕಾರಣಕ್ಕೆ ತನ್ನ ದೇಶದ ಜನರನ್ನೇ ಗುರಾಣಿಯಾಗಿ ಬಳಸಿಕೊಳ್ಳುವ ನೀಚತನವನ್ನು ಜೈಶ್ ಉಗ್ರರು ತೋರಿರುವುದು ಅವರ ಈ ನಡೆಯಲ್ಲಿ ಸ್ಪಷ್ಟವಿದೆ ಎಂದು ಮೂಲಗಳು ತಿಳಿಸಿವೆ.
ಜೈಶ್ ಉಗ್ರರ ಅಡಗು ದಾಣಗಳ ಸ್ಥಳಾಂತರ ಕಳೆದ ಸೋಮವಾರ ರಾತ್ರಿಯಿಂದಲೇ ಚುರುಕಿನಿಂದ ನಡೆಯುತ್ತಿದೆ.
ಭಾರತೀಯ ಸೇನಾ ಪಡೆಗಳು ನಡೆಸಿರುವ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಂದು ಜೈಶ್ ಎ ಮೊಹಮ್ಮದ್ನ ಟಾಪ್ ಉಗ್ರ ಅಬ್ದುಲ್ ರಶೀದ್ ಗಾಜಿ ಅಲಿಯಾಸ್ ಕಮ್ರಾನ್ ಹತನಾಗಿದ್ದಾನೆ. ಈತ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ .
ಆದರೆ ಇದೇ ವೇಳೆ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಮತ್ತು ಇತರ ಮೂವರು ಯೋಧರಾದ ಹವಾಲ್ದಾರ್ ಶಿವರಾಮ್, ಸಿಪಾಯ್ ಅಜಯ್ ಕುಮಾರ್ ಮತ್ತು ಸಿಪಾಯ್ ಹರಿ ಸಿಂಗ್ ಅವರು ಇಂದು ಸೋಮವಾರ ಹುತಾತ್ಮರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ