ಜಾರ್ಖಂಡ್ : ದನ ಕದ್ದ ಇಬ್ಬರನ್ನು ಚಚ್ಚಿ ಸಾಯಿಸಿದ ಗೋ ರಕ್ಷಕರು
Team Udayavani, Jun 13, 2018, 7:29 PM IST
ಜಾರ್ಖಂಡ್: ಜಾರ್ಖಂಡ್ನ ಸಂತಾಲ್ ಗ್ರಾಮದಲ್ಲಿ ದನ ಕದ್ದೊಯ್ಯುತ್ತಿದ್ದ ಇಬ್ಬರನ್ನು ಗೋರಕ್ಷಕರು ಹಿಡಿದು ಚಚ್ಚಿ ಸಾಯಿಸಿರುವ ಘಟನೆ ವರದಿಯಾಗಿದೆ.
ಗೋರಕ್ಷಕರಿಂದ ಹತ್ಯೆಗೀಡಾಗಿರವವರನ್ನು ಮುರ್ತಜಾ ಅನ್ಸಾರಿ ಮತ್ತು ಚಾರ್ಕು ಅನ್ಸಾರಿ ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಇನ್ನೂ ಮೂವರು ಗೋ ಕಳ್ಳರು ಹೇಗೋ ತಪ್ಪಿಸಿಕೊಂಡು ಪಾರಾಗಿದ್ದಾರೆ.
ಪೊಲೀಸರು ಈ ತನಕ ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದಾರೆ. ಜತಗೆ ಈ ಘಟನೆ ನಡೆದ ಸಂತಾಲ್ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.
ಗೊಡ್ಡಾ ಎಸ್ಪಿ ಹೇಳಿರುವ ಪ್ರಕಾರ ಐವರ ಒಂದು ಗುಂಪು ಒಂದು ಗ್ರಾಮದಿಂದ 12 ಎಮ್ಮೆಗಳನ್ನು ಕದ್ದು ಅವುಗಳನ್ನು ವಾಹನದಲ್ಲಿ ತುಂಬಿ ಇನ್ನೊಂದು ಗ್ರಾಮವಾಗಿ ಸಾಗುವಾಗ ಗೋರಕ್ಷಕರನಿಸಿಕೊಂಡವರು ಇವರನ್ನು ತಡೆದರು.
ಗೋರಕ್ಷಕರು ವಾಹನದಲ್ಲಿದ್ದ ಎಮ್ಮೆಗಳನ್ನು ವಶಕ್ಕೆ ತೆಗೆದುಕೊಂಡರು. ಈ ನಡುವೆ ಐವರು ಗೋ ಕಳ್ಳರ ಪೈಕಿ ಮೂವರು ಓಡಿ ಪಾರಾದರು. ಉಳಿದಿಬ್ಬರಾದ ಮುರ್ತಜಾ ಮತ್ತು ಚಾರ್ಕು ಅವರನ್ನು ಗೋರಕ್ಷಕರು ಚಚ್ಚಿ ಸಾಯಿಸಿದರು.
ಗೋರಕ್ಷಕರಿಂದ ಹತ್ಯೆಗೀಡಾಗಿರುವ ಇವರು ಅಭ್ಯಾಸಬಲದ ಅಪರಾಧಿಗಳಾಗಿದ್ದು ಇವರ ವಿರುದ್ಧ ಗೋ ಕಳ್ಳಸಾಗಣೆಯ ಹಲವು ಕೇಸುಗಳು ಇವೆ ಎಂದು ಎಸ್ಪಿ ಹೇಳಿದರು.
ಎಸ್ಪಿ ಹೇಳಿರುವ ಪ್ರಕಾರ ಎರಡು ಎಫ್ಐಆರ್ ದಾಖಲಿಸಲಾಗಿದೆ : 1. ಗುಂಪಿನಿಂದ ನಡೆದಿರುವ ಕೊಲೆ ಕೃತ್ಯ, 2. ಎಮ್ಮೆಗಳ ಕಳವು.
ಜಾರ್ಖಂಡ್ನಲ್ಲಿ ಮೊತ್ತ ಮೊದಲ ಬಾರಿಗೆ ಗೋರಕ್ಷಕರಿಗೆ ಶಿಕ್ಷೆ ವಿಧಿಸಲ್ಪಟ್ಟ ಆಲಿಮುದ್ದೀನ್ ಅನ್ಸಾರಿ ಕೇಸನ್ನು ರಾಂಚಿಯ ಫಾಸ್ಟ್ ಟ್ರ್ಯಾಕ್ ಕೋರ್ಟ್ ಇತ್ಯರ್ಥಪಡಿಸಿದ ಮೂರು ತಿಂಗಳ ತರುವಾಯ ಗೋರಕ್ಷಕರಿಂದ ನಡೆದಿರುವ ಇನ್ನೊಂದು ಕೊಲೆ ಕೃತ್ಯ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?