ಗುಜರಾತ್ ಪೊಲೀಸರು ನನ್ನ ಎನ್ಕೌಂಟರ್ ಮಾಡಲಿದ್ದಾರೆ: ಮೇವಾನಿ
Team Udayavani, Feb 24, 2018, 11:08 AM IST
ಹೊಸದಿಲ್ಲಿ : ವಡ್ಗಾಂವ್ ಶಾಸಕ ಮತ್ತು ದಲಿತ ಕಾರ್ಯಕರ್ತರಾಗಿರುವ ಜಿಗ್ನೇಶ್ ಮೇವಾನಿ ಅವರು ‘ನನಗೆ ಜೀವ ಬೆದರಿಕೆ ಉಂಟಾಗಿದೆ’ ಎಂದಿದ್ದಾರೆ. ಗುಜರಾತ್ ಪೊಲೀಸರು ನನ್ನನ್ನು ಎನ್ಕೌಂಟರ್ನಲ್ಲಿ ಕೊಂದು ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.
ನಿನ್ನೆ ಶುಕ್ರವಾರ ಮೇವಾನಿ ಅವರು ಎಡಿಆರ್ ಪೊಲೀಸ್ ಆ್ಯಂಡ್ ಮೀಡಿಯಾ ಎಂಬ ವಾಟ್ಸಾಪ್ ಗ್ರೂಪ ಜತೆಗೆ ಚರ್ಚೆ ನಡೆಸಿದ ತರುವಾಯ ಮೇವಾನಿ ಅವರು “ಗುಜರಾತ್ ಪೊಲೀಸರು ನನ್ನನ್ನು ಎನ್ಕೌಂಟರ್ನಲ್ಲಿ ಕೊಂದು ಮುಗಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಟ್ವಿಟರ್ನಲ್ಲಿ ಆರೋಪಿಸಿದ್ದಾರೆ.
ಮೇವಾನಿ ಅವರು ಟ್ಟಿಟರ್ನಲ್ಲಿ ಹೀಗೆ ಬರೆದಿದ್ದಾರೆ : ಜಿಗ್ನೇಶ್ ಮೇವಾನಿ ಎನ್ಕೌಂಟರ್ ? ಹೌದು; ನನ್ನನ್ನು ಎನ್ಕೌಂಟರ್ನಲ್ಲಿ ಹೇಗೆ ಕೊಂದು ಮುಗಿಸಬಹುದು ಎಂಬ ಬಗ್ಗೆ ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ವಾಟ್ಸಾಪ್ ನಲ್ಲಿ ಸಂವಹನ ಮಾಡಿರುವುದನ್ನು ಬಹಿರಂಗಪಡಿಸುವ ವೆಬ್ ಪೋರ್ಟಲ್ ಲಿಂಕ್ ಇಲ್ಲಿದೆ’ .
ಇದೀಗ ಮೇವಾನಿ ಅವರು ತನಗೆ ಪ್ರಾಣ ಬೆದರಿಕೆ ಇರುವ ಬಗ್ಗೆ ಗುಜರಾತ್ ಡಿಜಿಪಿ, ರಾಜ್ಯ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ