ಜಿನ್ನಾ ಆತ್ಮ ಕಾಂಗ್ರೆಸ್ಗೆ ಪ್ರವೇಶಿಸಿದೆ: ಹಿಜಾಬ್ ವಿವಾದ ಕುರಿತು ಅಸ್ಸಾಂ ಸಿಎಂ
ಕರ್ನಾಟಕ ಘಟನೆಯಿಂದ ದೇಶ ಸಂಕಷ್ಟದಲ್ಲಿದೆ
Team Udayavani, Feb 11, 2022, 8:03 PM IST
ನವದೆಹಲಿ:ಕಾಂಗ್ರೆಸ್ ಧ್ರುವೀಕರಣದ ರಾಜಕೀಯಕ್ಕೆ ಪ್ರವೇಶಿಸಿದ್ದು, ಜಿನ್ನಾ ಆತ್ಮವು ಪಕ್ಷಕ್ಕೆ ಪ್ರವೇಶಿಸಿದಂತಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಉತ್ತರಾಖಂಡದಲ್ಲಿ ಕಿಡಿ ಕಾರಿದ ಅವರು, ಕರ್ನಾಟಕ ಘಟನೆಯಿಂದ ದೇಶ ಸಂಕಷ್ಟದಲ್ಲಿದೆ. ದೇಶವನ್ನು ವಿಭಜಿಸಲು ಕಾಂಗ್ರೆಸ್ ಯತ್ನಿಸುತ್ತಿರುವ ರೀತಿ ಆತಂಕಕಾರಿ.ಅದು ‘ತುಕ್ಡೆ ತುಕ್ಡೆ’ ಗ್ಯಾಂಗ್ ಅನ್ನು ಪ್ರತಿನಿಧಿಸುತ್ತಿದೆ.ಅವರಿಗೆ ಒಂದೇ ಗುರಿ ಇದೆ, 1947 ರ ಹಿಂದಿನ ಪರಿಸ್ಥಿತಿಯನ್ನು ಪುನರಾವರ್ತಿಸುವುದು ಎಂದರು.
“ಅವರು (ಕಾಂಗ್ರೆಸ್) ಮದರಸಾಗಳನ್ನು ತೆರೆಯುವುದು ಸರಿ, ಮುಸ್ಲಿಂ ವಿಶ್ವವಿದ್ಯಾಲಯಗಳನ್ನು ತೆರೆಯುವುದು ಸರಿ, ಅವರು ಹಿಜಾಬ್ ಧರಿಸುವುದು ಸರಿ ಎಂದು ಹೇಳುತ್ತಾರೆ” ಎಂದು ಶರ್ಮಾ ಹೇಳಿದರು.
ಕೆಲವೊಮ್ಮೆ ಕಾಂಗ್ರೆಸ್ ಭಾರತವು ರಾಷ್ಟ್ರವಲ್ಲ ಆದರೆ ರಾಜ್ಯಗಳ ಒಕ್ಕೂಟ ಎಂದು ಹೇಳುತ್ತಾರೆ. ಇದೆಲ್ಲವನ್ನು ಕೇಳಿದಾಗ ಜಿನ್ನಾ ಅವರ ಆತ್ಮ ಕಾಂಗ್ರೆಸ್ಗೆ ಪ್ರವೇಶಿಸಿದೆಯೇ ಎಂದು ಅನಿಸುತ್ತದೆ. ಹಿಜಾಬ್ ಸಮಸ್ಯೆಯನ್ನು ಕಾಂಗ್ರೆಸ್ ಪಕ್ಷವು ಹುಟ್ಟುಹಾಕಿದೆ ಏಕೆಂದರೆ ಅದು ಇಸ್ಲಾಂ ಧರ್ಮವನ್ನು ತನ್ನ ಒಳಿತಿಗಾಗಿ ರಾಜಕೀಯಗೊಳಿಸುತ್ತದೆ. ಅವರ ಧ್ರುವೀಕರಣದ ರಾಜಕೀಯ ಕೊನೆಗೊಳ್ಳುವುದು ಸರಿಯಾಗಿದೆ, ಐದು ರಾಜ್ಯಗಳ ಚುನಾವಣೆಯ ನಂತರ ಇದು ದೊಡ್ಡ ಪ್ರಮಾಣದಲ್ಲಿ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು