ಅಕ್ಕಿ, ಬೇಳೆ ಮಾರಾಟಕ್ಕೆ ಕಾಲಿರಿಸಲಿದೆ ಜಿಯೋ ಅಂಗಡಿ
Team Udayavani, Jan 1, 2020, 2:24 AM IST
ಮುಂಬಯಿ: ಉದ್ಯಮಿ ಮುಕೇಶ್ ಅಂಬಾನಿ ಮಾಲಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹೊಸ ಸಾಹಸಕ್ಕೆ ಮುಂದಾಗಿದೆ. ಹೊಸ ವರ್ಷದಲ್ಲಿ ಅದು ಶುರುವಾಗುವ ಸಾಧ್ಯತೆ ಇದೆ. “ಭಾರತದ ಹೊಸ ಅಂಗಡಿ’ (ಇಂಡಿಯಾ ಕಿ ನಯೀ ದೂಕಾನ್) ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಅದು ಕಾರ್ಯ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಮನೆಗಳಿಗೆ ಬೇಕಾಗಿರುವ ಅಕ್ಕಿ, ಬೇಳೆ ಮತ್ತು ದಿನಸಿ ಸಾಮಗ್ರಿಗಳನ್ನು ಆನ್ಲೈನ್ನಲ್ಲಿ ಮಾರುವ ವ್ಯವಸ್ಥೆ ಅಭಿವೃದ್ಧಿಪಡಿಸಲಿದೆ. ಅದಕ್ಕಾಗಿ ಜಿಯೋ ಮಾರ್ಟ್ ಎಂಬ ಪೋರ್ಟಲ್ ಅನ್ನು ಶುರು ಮಾಡಲಿದೆ. ಸ್ಥಳೀಯ ಮಾರಾಟಗಾರರ ಜತೆಗೆ ಕೈಜೋಡಿಸಿ ಹೊಸ ವ್ಯವಸ್ಥೆ ಇರಲಿದೆ. ಸದ್ಯ ಥಾಣೆ, ಕಲ್ಯಾಣ್ ಮತ್ತು ನವೀ ಮುಂಬಯಿಗಳಲ್ಲಿ ರಿಲಯನ್ಸ್ ಮಾರ್ಟ್ ಕಾರ್ಯವೆಸಗುತ್ತಿದೆ. ಸುಮಾರು 50 ಸಾವಿರ ದಿನಸಿ ವಸ್ತುಗಳು ಅದರಲ್ಲಿ ಲಭ್ಯವಾಗಲಿದೆ. ಈಗಾಗಲೇ ನೋಂದಣಿ, ಮನೆಗೆ ಉಚಿತವಾಗಿ ತಲುಪಿಸಲು ಬುಕಿಂಗ್ ಶುರುವಾಗಿದೆ. ಇದರಿಂದಾಗಿ, ಆನ್ಲೈನ್ ಆಹಾರ ವಹಿವಾಟು ಕ್ಷೇತ್ರಗಳ ಫ್ಲಿಪ್ಕಾರ್ಟ್, ಅಮೆಜಾನ್, ಬಿಗ್ಬಾಸ್ಕೆಟ್ನಂಥ ಕಂಪೆನಿಗಳಿಗೆ ಈ ಬೆಳವಣಿಗೆ ಸವಾಲಾಗಿ ಪರಿಣಮಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ