ಪಾಕ್ ಗುಂಡಿನ ದಾಳಿ: ಭಾರತೀಯ ಮೇಜರ್, ಇಬ್ಬರು ಸೈನಿಕರು ಬಲಿ
Team Udayavani, Dec 23, 2017, 7:25 PM IST
ಹೊಸದಿಲ್ಲಿ : ಇಂದು ಶನಿವಾರ ಮಧ್ಯಾಹ್ನ ಜಮ್ಮು ಕಾಶ್ಮೀರದ ಕೇರಿ ವಲಯದಲ್ಲಿ ಪಾಕ್ ಸೇನೆ ಗಡಿಯಾಚೆಯಿಂದ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಮೇಜರ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿನ ವಿವಿಧ ಭಾಗಗಳಲ್ಲಿ ಪಾಕ್ ಸೇನೆ ಕಳೆದ ಕೆಲ ಸಮಯದಿಂದ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದು ಭಾರತೀಯ ಸೇನೆಗೆ ಅದಕ್ಕೆ ತಕ್ಕುದಾದ ಉತ್ತರವನ್ನೇ ನೀಡುತ್ತಿದೆ.
ಕೇರಿ ವಲಯದಲ್ಲಿ ನಿಯೋಜಿಸಲ್ಪಟ್ಟಿದ್ದ ಎರಡು ಸಿಕ್ಖ್ ಬೆಟಾಲಿಯನ್ ಯೋಧರು ಇಂದು ಶನಿವಾರ ಮಧ್ಯಾಹ್ನ 12.15ರ ಹೊತ್ತಿಗೆ ಸಾಗಿ ಬರುತ್ತಿದ್ದಾಗ ಗಡಿಯಾಚೆಯಿಂದ ಪಾಕ್ ಗುಂಡಿನ ದಾಳಿಗೆ ಗುರಿಯಾದರು.
ಪಾಕ್ ಶೆಲ್ಲಿಂಗ್ಗೆ ಒಬ್ಬ ಮೇಜರ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾದರು; ನಮ್ಮ ಯೋಧರು ಪಾಕ್ ಸೇನೆಯ ಗುಂಡಿನ ಹಾಗೂ ಶೆಲ್ ದಾಳಿಗೆ ಅತ್ಯಂತ ಪರಿಣಾಮಕಾರಿಯಾದ ಉತ್ತರವನ್ನು ನೀಡಿದರು ಎಂದು ಸೇನಾಧಿಕಾರಿಯೋರ್ವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್