ಜಮ್ಮು ಸರ್ಕಾರದ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿ
Team Udayavani, Dec 12, 2021, 10:30 PM IST
ಶ್ರೀನಗರ: ಜಮ್ಮುಕಾಶ್ಮೀರದ ಆಡಳಿತದ ವಿರುದ್ಧ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.
ಭಾನುವಾರ ಶ್ರೀನಗರದಲ್ಲಿ ಪಿಡಿಪಿ ಯುವ ಸಮಾವೇಶವನ್ನು ಹಮ್ಮಿಕೊಂಡಿತ್ತು. ಕೊರೊನಾ ಹಿನ್ನೆಲೆಯಲ್ಲಿ ಇದಕ್ಕೆ ಅನುಮತಿ ನೀಡಲು ದಕ್ಷಿಣ ಶ್ರೀನಗರದ ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ.
“ಯುವಜನತೆ ಜೊತೆಗೆ ಸಂವಾದಿಸಲು ಇದೊಂದು ಅವಕಾಶವಾಗಿತ್ತು. ಆದರೆ ಜಮ್ಮುಕಾಶ್ಮೀರ ಆಡಳಿತ ಪಿತೂರಿ ಮಾಡಿ ಇದನ್ನು ತಪ್ಪಿಸಿದೆ.
ಯುವಜನತೆ ತಮ್ಮ ಹಕ್ಕುಗಳಿಂದ ದೂರ ಸರಿಯುವಂತೆ ಮಾಡಿ, ಅವರನ್ನು ಪ್ರಜಾಪ್ರಭುತ್ವದಿಂದ ದೂರ ಮಾಡಲು ಯತ್ನಿಸಲಾಗುತ್ತಿದೆ.
ಇದನ್ನೂ ಓದಿ:ಕಾನೂನು ಮೀರಿ ನಡೆದುಕೊಂಡರೆ ಕಠಿಣ ಕ್ರಮ : ರೌಡಿಶೀಟರ್ಗಳಿಗೆ ಸಿಪಿಐ ಖಡಕ್ ಎಚ್ಚರಿಕೆ
ಆಗ ಅವರು ಅನಿವಾರ್ಯವಾಗಿ ಹಿಂಸಾಚಾರದ ಹಾದಿ ಹಿಡಿಯುತ್ತಾರೆ, ಆಗ ಈ ಆಡಳಿತಕ್ಕೆ ಯುವಕರ ಮೇಲೆ ಹಲ್ಲೆ ಮಾಡಿ, ಬಂಧಿಸಲು ಸುಲಭವಾಗುತ್ತದೆ’ ಎಂದು ಹರಿಹಾಯ್ದಿದ್ದಾರೆ.